AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲೆ ನಿರ್ಮಿಸಿ 8 ವರ್ಷ, ಇನ್ನೂ ತೊಟ್ಟು ನೀರು ಬಂದಿಲ್ಲ: ಇನ್ನಾದರೂ ಹೇಮಾವತಿ ನೀರು ಹರಿಸಿ

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ […]

ನಾಲೆ ನಿರ್ಮಿಸಿ 8 ವರ್ಷ, ಇನ್ನೂ ತೊಟ್ಟು ನೀರು ಬಂದಿಲ್ಲ: ಇನ್ನಾದರೂ ಹೇಮಾವತಿ ನೀರು ಹರಿಸಿ
Guru
Guru| Edited By: ಆಯೇಷಾ ಬಾನು|

Updated on:Jun 17, 2020 | 2:50 PM

Share

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ ಇಲ್ಲದಂತಾಗಿದೆ. ತೋಟದಪಾಳ್ಯ ಮಾರ್ಗದಿಂದ ವರದದೇನಳ್ಳಿ ವರೆಗೆ ಮೂರು ಕಿಲೊಮೀಟರ್ ವರೆಗೆ ಎಂಟು ವರ್ಷದ ಹಿಂದೆಯೇ ಸರ್ಕಾರ ಈ ನಾಲೆಯನ್ನ ನಿರ್ಮಿಸಿದೆ. ಮೊದಲ ವರ್ಷ ಸ್ವಲ್ಪ ನೀರನ್ನು ಹರಿಸಿದ್ದು ಬಿಟ್ಟರೆ, ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಎನ್ನುವುದು ರೈತರ ಆರೋಪ.

ನಾಲೆ ನಿರ್ಮಿಸಿದ್ದೇ ಅವೈಜ್ಞಾನಿಕವಾಗಿ ಇನ್ನು ಈ ನಾಲೆಯನ್ನ ಕೂಡಾ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಕೆಲ ಬಾರಿ ನೀರು ಹರಿಸಿದರೂ ನಾಲೆಯಲ್ಲಿನ ಗುಂಡಿಗಳಿಂದಾಗಿ ನೀರು ತುಂಬಿ ಮೇಲೆರುವುದಿಲ್ಲ. ಜತೆಗೆ ನಾಲೆಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಮಣ್ಣಿನದ್ದಾಗಿದೆ. ಮಳೆ ಬಂದಾಗ ಸೇತುವೆ ಮತ್ತು ನಾಲೆಯ ದಡ ಎರಡೂ ಒಂದೇ ಬಾರಿಗೆ ಕುಸಿದು ನೀರು ಹರಿಯಲು ಮಾಡಿರುವ ಗೇಟ್‌ವಾಲ್‌ ಸಂಪೂರ್ಣ ಮುಚ್ಚಿಹೋಗಿವೆ ಎನ್ನುವುದು ಸ್ಥಳೀಯರ ಮತ್ತೊಂದು ಆರೋಪ.

ಮೊದಲೇ ಈ ಪ್ರದೇಶದಲ್ಲಿ ಕೆರೆ ಮತ್ತು ಕೊಳವೆ ಬಾವಿ ಬತ್ತಿವೆ. ಅಂತರ್ಜಲ ಕುಸಿತದಿಂದಾಗಿ 1,200ರಿಂದ 1,300 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಪರಿಣಾಮ ಅಡಿಕೆ, ತೆಂಗು, ಬಾಳೆ ಒಣಗಿ ನಿಂತಿವೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ನೋವಿಗೆ ಸ್ಪಂದಿಸಬೇಕು. ಈ ನಾಲೆ ಮೂಲಕ ಹೇಮಾವತಿ ನದಿ ನೀರನ್ನ ಹರಿಸಬೇಕು ಎನ್ನುವುದು ಇಲ್ಲಿನ ರೈತರ ಒತ್ತಾಯ -ಮಹೇಶ್‌

Published On - 1:02 pm, Wed, 17 June 20

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್