AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲೆ ನಿರ್ಮಿಸಿ 8 ವರ್ಷ, ಇನ್ನೂ ತೊಟ್ಟು ನೀರು ಬಂದಿಲ್ಲ: ಇನ್ನಾದರೂ ಹೇಮಾವತಿ ನೀರು ಹರಿಸಿ

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ […]

ನಾಲೆ ನಿರ್ಮಿಸಿ 8 ವರ್ಷ, ಇನ್ನೂ ತೊಟ್ಟು ನೀರು ಬಂದಿಲ್ಲ: ಇನ್ನಾದರೂ ಹೇಮಾವತಿ ನೀರು ಹರಿಸಿ
Guru
| Edited By: |

Updated on:Jun 17, 2020 | 2:50 PM

Share

ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಬಳಿ ಮುಖ್ಯನಾಲೆಗೆ ನಿರ್ಮಿಸಲಾಗಿರುವ ಉಪನಾಲೆ ಈಗ ಸರಕಾರ ಮತ್ತು ಸ್ಥಳೀಯರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಉಪನಾಲೆ 15/1 ‘ಸಿ’ಯನ್ನ ನಿರ್ಮಿಸಿ ಎಂಟು ವರ್ಷ ಕಳೆದರೂ ಹನಿ ನೀರೂ ಕೂಡಾ ಹರಿಯುತ್ತಿಲ್ಲ. ಇದು ಸ್ಥಳೀಯ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಹೌದು, ಈ ನಾಲೆ ನಿರ್ಮಾಣಕ್ಕೆಂದೇ ಭೂಮಿ ಬಿಟ್ಟುಕೊಟ್ಟ ರೈತರಿಗೆ ಈಗ ಅತ್ತ ಜಮೀನೂ ಇಲ್ಲ, ಇತ್ತ ನೀರೂ ಇಲ್ಲದಂತಾಗಿದೆ. ತೋಟದಪಾಳ್ಯ ಮಾರ್ಗದಿಂದ ವರದದೇನಳ್ಳಿ ವರೆಗೆ ಮೂರು ಕಿಲೊಮೀಟರ್ ವರೆಗೆ ಎಂಟು ವರ್ಷದ ಹಿಂದೆಯೇ ಸರ್ಕಾರ ಈ ನಾಲೆಯನ್ನ ನಿರ್ಮಿಸಿದೆ. ಮೊದಲ ವರ್ಷ ಸ್ವಲ್ಪ ನೀರನ್ನು ಹರಿಸಿದ್ದು ಬಿಟ್ಟರೆ, ಇಂದಿನವರೆಗೆ ಒಂದು ಹನಿ ನೀರು ಕೂಡಾ ಹರಿದಿಲ್ಲ ಎನ್ನುವುದು ರೈತರ ಆರೋಪ.

ನಾಲೆ ನಿರ್ಮಿಸಿದ್ದೇ ಅವೈಜ್ಞಾನಿಕವಾಗಿ ಇನ್ನು ಈ ನಾಲೆಯನ್ನ ಕೂಡಾ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಕೆಲ ಬಾರಿ ನೀರು ಹರಿಸಿದರೂ ನಾಲೆಯಲ್ಲಿನ ಗುಂಡಿಗಳಿಂದಾಗಿ ನೀರು ತುಂಬಿ ಮೇಲೆರುವುದಿಲ್ಲ. ಜತೆಗೆ ನಾಲೆಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಮಣ್ಣಿನದ್ದಾಗಿದೆ. ಮಳೆ ಬಂದಾಗ ಸೇತುವೆ ಮತ್ತು ನಾಲೆಯ ದಡ ಎರಡೂ ಒಂದೇ ಬಾರಿಗೆ ಕುಸಿದು ನೀರು ಹರಿಯಲು ಮಾಡಿರುವ ಗೇಟ್‌ವಾಲ್‌ ಸಂಪೂರ್ಣ ಮುಚ್ಚಿಹೋಗಿವೆ ಎನ್ನುವುದು ಸ್ಥಳೀಯರ ಮತ್ತೊಂದು ಆರೋಪ.

ಮೊದಲೇ ಈ ಪ್ರದೇಶದಲ್ಲಿ ಕೆರೆ ಮತ್ತು ಕೊಳವೆ ಬಾವಿ ಬತ್ತಿವೆ. ಅಂತರ್ಜಲ ಕುಸಿತದಿಂದಾಗಿ 1,200ರಿಂದ 1,300 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಪರಿಣಾಮ ಅಡಿಕೆ, ತೆಂಗು, ಬಾಳೆ ಒಣಗಿ ನಿಂತಿವೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ನೋವಿಗೆ ಸ್ಪಂದಿಸಬೇಕು. ಈ ನಾಲೆ ಮೂಲಕ ಹೇಮಾವತಿ ನದಿ ನೀರನ್ನ ಹರಿಸಬೇಕು ಎನ್ನುವುದು ಇಲ್ಲಿನ ರೈತರ ಒತ್ತಾಯ -ಮಹೇಶ್‌

Published On - 1:02 pm, Wed, 17 June 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ