AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ

ಶಿಯೋಮಿ Mi QLED  ಸೀರಿಸ್​ನ 55 ಇಂಚಿನ 4ಕೆ ಟಿವಿಯು ಭಾರತೀಯ ಮಾರುಕಟ್ಟೆಯಲ್ಲಿ ₹ 54,999ಕ್ಕೆ ಲಭ್ಯವಿದೆ. ಆ್ಯಂಡ್ರಾಯ್ಡ್​ ಟಿವಿ ಇದಾಗಿರುವುದರಿಂದ ವೈಫೈ ಕೂಡ ಇದಕ್ಕೆ ಕನೆಕ್ಟ್​ ಮಾಡಬಹುದು.

ಭಾರತದಲ್ಲಿ ಕಡಿಮೆ ಬೆಲೆಗೆ ಲಾಂಚ್​ ಆಯ್ತು 55 ಇಂಚಿನ ಶಿಯೋಮಿ 4ಕೆ ಟಿವಿ
ಎಂಐ ಟಿವಿ
ರಾಜೇಶ್ ದುಗ್ಗುಮನೆ
| Edited By: |

Updated on: Dec 16, 2020 | 7:33 PM

Share

ಚೀನಾ ಮೂಲದ ಶಿಯೋಮಿ ಸಂಸ್ಥೆ ಭಾರತದಲ್ಲಿ ಕಡಿಮೆ ಬೆಲೆಗೆ 55 ಇಂಚಿನ 4ಕೆ ಟಿವಿಯನ್ನು ಪರಿಚಯಿಸಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಲಾಂಚ್​ ಆದ ಈ ಟಿವಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಶಿಯೋಮಿ Mi QLED  ಸೀರಿಸ್​ನ 55 ಇಂಚಿನ 4ಕೆ ಟಿವಿಯು ಭಾರತೀಯ ಮಾರುಕಟ್ಟೆಯಲ್ಲಿ ₹ 54,999ಕ್ಕೆ ಲಭ್ಯವಿದೆ. ಆ್ಯಂಡ್ರಾಯ್ಡ್​ ಟಿವಿ ಇದಾಗಿರುವುದರಿಂದ ವೈಫೈ ಕೂಡ ಇದಕ್ಕೆ ಕನೆಕ್ಟ್​ ಮಾಡಬಹುದು. ಅಲ್ಲದೆ, ಆ್ಯಪ್​ಗಳನ್ನು ಕೂಡ ಇನ್​ಸ್ಟಾಲ್​ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ 4ಕೆ ರೆಸಲ್ಯೂಷನ್​ನಲ್ಲಿ ವಿಡಿಯೋ ನೋಡಬಹುದಾಗಿದೆ. ಶೇ 96 ಸ್ಕ್ರೀನ್​ ಅನ್ನು ಟಿವಿ ಹೊಂದಿದೆ.

ಎಂಐ.ಕಾಮ್​, ಫ್ಲಿಪ್​ಕಾರ್ಟ್​, ಎಂಐ ಹೋಮ್​ ಹಾಗೂ ಇತರ ಕಡೆಗಳಲ್ಲಿ ಈ ಟಿವಿ ಸಿಗಲಿದೆ. ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಎಂಐ ಮೊಬೈಲ್​ಗಳು ಅಧಿಪತ್ಯ ಸಾಧಿಸಿವೆ. ಅದೇ ರೀತಿ ಟಿವಿ ಕ್ಷೇತ್ರದಲ್ಲೂ ಶಿಯೋಮಿ ಕಾಲಿಟ್ಟಿದ್ದು, ಕಡಿಮೆ ಬೆಲೆಗೆ ಟಿವಿಗಳನ್ನು ನೀಡುತ್ತಿದೆ.

ಯಾವಾಗಿನಿಂದ ಲಭ್ಯ? ಈಗಾಗಲೇ Mi QLEDಗೆ ಪ್ರೀ ಬುಕ್ಕಿಂಗ್ ಆರಂಭವಾಗಿದೆ. ಡಿಸೆಂಬರ್ 21 ಮಧ್ಯಾಹ್ನ 12 ಗಂಟೆಗೆ ಟಿವಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಸದ್ಯ, ಕಪ್ಪು ಬಣ್ಣದಲ್ಲಿ ಮಾತ್ರ ಶಿಯೋಮಿ ಟಿವಿ ಗ್ರಾಹಕರಿಗೆ ಸಿಗಲಿದೆ.  ಫ್ಲಿಪ್​ಕಾರ್ಟ್​​ನಲ್ಲಿ  ಶಿಯೋಮಿ Mi QLED ಟಿವಿಗೆ ಆಫರ್​ ಸಿಗುವ ಸಾಧ್ಯತೆ ಇದೆ. ಎಸ್​ಬಿಐ ಕಾರ್ಡ್​ ಮೇಲೆ ಇದನ್ನು ಖರೀದಿಸಿದರೆ ನಿಮಗೆ ಶೇ 10 ಡಿಸ್ಕೌಂಟ್​ ಕೂಡ ಸಿಗಲಿದೆ.

ಭಾರೀ ಪೈಪೋಟಿ ಎಂಐ ಸಂಸ್ಥೆ ಭಾರತದಲ್ಲಿ ಕಳೆದ 2 ವರ್ಷಗಳಿಂದ ಬರೋಬ್ಬರಿ 50 ಲಕ್ಷ ಟಿವಿಗಳನ್ನು ಮಾರಾಟ ಮಾಡಿದೆಯಂತೆ. ಶಿಯೋಮಿ ಟಿವಿ ಭಾರತದ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ನೀಡುತ್ತಿದೆ. ಈಗ ಪರಿಚಯಗೊಂಡಿರುವ ಹೊಸ ಟಿವಿ, ಎಲ್​ಜಿ, ಸ್ಯಾಮ್​​ಸಂಗ್​, ಒನ್​ಪ್ಲಸ್​ ಕಂಪೆನಿಗೆ ಸ್ಪರ್ಧೆ ಒಡ್ಡಲಿದೆ.

ಶಿಯೋಮಿ ಮೇಲೆ ಪೇಟೆಂಟ್ ಉಲ್ಲಂಘನೆ ಕೇಸ್: ₹ 1000 ಕೋಟಿ ಜಮಾ ಮಾಡಲು ಕೋರ್ಟ್ ಆದೇಶ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ