AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು

BDA Site Fraud | ರಾತ್ರೋರಾತ್ರಿ ನನ್ನ ಸೈಟ್​ಗೆ ಬೇಲಿ ಹಾಕಿ ಸೈಟ್ ಕಬಳಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ ಪ್ರಸನ್ನ ಗುರೂಜಿ ಎಂಬುವವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಸದ್ಯ ಈಗ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ FIR ದಾಖಲಾಗಿದೆ.

BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು (ಎಡ)
ಆಯೇಷಾ ಬಾನು
|

Updated on:Feb 12, 2021 | 12:34 PM

Share

ಬೆಂಗಳೂರು: ಬಿಡಿಎ ಭ್ರಷ್ಟ ಕೈಗಳಿಂದ ಜನಸಾಮಾನ್ಯರಿಗಷ್ಟೇ ಅಲ್ಲ, ಗಣ್ಯರಿಗೂ ದೋಖಾ ಆಗ್ತಿದೆ. ಬಿಡಿಎನಲ್ಲಿ ಮತ್ತೊಂದು ಭಯಾನಕ ಕರ್ಮಕಾಂಡ ಬಯಲಾಗಿದೆ. ಮುಖ್ಯಮಂತ್ರಿ BS ಯಡಿಯೂರಪ್ಪಗೆ ದೂರು ನೀಡಿದ್ರೂ ಭ್ರಷ್ಟರಿಗೆ ಭಯವಿಲ್ಲ. ಅಮಾಯಕ ನಿವೇಶನದಾರರಿಗೆ ಭ್ರಷ್ಟರಿಂದ ದೋಖಾ ಆಗುತ್ತಿದೆ. ಸೈನಿಕರು, ಸಿನಿಮಾದವರು, ರಾಜಕಾರಣಿಗಳಿಗೂ ವಂಚನ ಮಾಡಲಾಗಿದೆ. ಬಿಡಿಎ ಸೈಟ್ ಖರೀದಿಸಿದ್ದ ಪ್ರಸನ್ನ ಗುರೂಜಿಗೂ ವಂಚನೆ ಮಾಡಲಾಗಿದೆಯಂತೆ.

ರಾತ್ರೋರಾತ್ರಿ ನನ್ನ ಸೈಟ್​ಗೆ ಬೇಲಿ ಹಾಕಿ ಸೈಟ್ ಕಬಳಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ ಪ್ರಸನ್ನ ಗುರೂಜಿ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈಗ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ FIR ದಾಖಲಾಗಿದೆ. 2014ರಲ್ಲಿ ಪ್ರಸನ್ನ ಗುರೂಜಿ ತನ್ನ ಪತ್ನಿ ಹೆಸರಲ್ಲಿ ನಾಗರಬಾವಿ 9ನೇ ಬ್ಲಾಕ್‌ನಲ್ಲಿ ಬಿಡಿಎ ಸೈಟ್ ಖರೀದಿಸಿದ್ದರು. ಈ ಸೈಟ್ ಮುನಿರಾಜು ಕಬಳಿಸಿದ್ದಾರೆಂದು ಗುರೂಜಿ ಆರೋಪ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಮುನಿರಾಜುಗೆ ಪ್ರಶ್ನೆ ಮಾಡಿದರೆ ತಮ್ಮ ಹೆಸರಿನಲ್ಲಿ ಸೈಟ್ ಇದೆ ಅಂತಾರೆ. ಬಿಡಿಎನಿಂದ ನೋಂದಣಿಯಾಗಿದೆ ಎಂದು ಹೇಳುತ್ತಾರೆ. ಈಗಾಗ್ಲೇ ಖರೀದಿಸಿದ್ದ ಸೈಟ್ ಅವರು ಪಡೆದಿದ್ದು ಹೇಗೆ? ಎಂದು ಗುರೂಜಿ ಪ್ರಶ್ನಿಸಿದ್ದಾರೆ.

ಇನ್ನು 4 ಕೋಟಿ ಬೆಲೆಬಾಳುವ ಜಾಗ ಮುನಿರಾಜು ಹೆಸರಿಗೆ ಕೇವಲ ₹24 ಲಕ್ಷಕ್ಕೆ ನೋಂದಣಿಯಾಗಿದೆ. ಈಗಾಗಲೇ ಅಲಾಟೀಸ್‌ಗೆ ಜಾಗ ಹಂಚಿಕೆಯಾಗಿತ್ತು. ಆದ್ರೆ ಗುಂಟೆ ಲೆಕ್ಕದಲ್ಲಿ ಬಿಡಿಎನಿಂದ ಮುನಿರಾಜುಗೆ ಹಂಚಿಕೆಯಾಗಿದೆ. ಆ ಜಾಗವನ್ನು ಇವರಿಗೆ ಹೇಗೆ ಹಂಚಿಕೆ ಮಾಡಿದ್ದಾರೆ? ಬಿಡಿಎ ಅಧಿಕಾರಿಗಳು ಲಂಚ ಪಡೆದಿದ್ದಾರೆ. ಭ್ರಷ್ಟ ಅಧಿಕಾರಿಗಳು, ಬ್ರೋಕರ್‌ಗಳಿಂದ ಅವ್ಯವಹಾರ ನಡೆದಿದೆ. ತಮಗೆ ಧಮ್ಕಿ ಹಾಕಿ ಸೈಟ್ ಕಬಳಿಸಿದ್ದಾರೆಂದು ಪ್ರಸನ್ನ ಗುರೂಜಿ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: BDA ಅಧ್ಯಕ್ಷ – ಆಯುಕ್ತ ಮಧ್ಯೆ ಟಾಕ್​ ವಾರ್! ರೈತರ ಸಣ್ಣ ಸೈಟ್ ವಿರುದ್ಧ ‘ಸುಪ್ರೀಂ’ಗೆ ಹೋಗ್ತಾರೆ, ಆದ್ರೆ 500 ಕೋಟಿ ರೂ ಜಾಗದ ಬಗ್ಗೆ ಯಾಕೆ ಹೋಗಿಲ್ಲ?

Published On - 12:30 pm, Fri, 12 February 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ