AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು

BDA Site Fraud | ರಾತ್ರೋರಾತ್ರಿ ನನ್ನ ಸೈಟ್​ಗೆ ಬೇಲಿ ಹಾಕಿ ಸೈಟ್ ಕಬಳಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ ಪ್ರಸನ್ನ ಗುರೂಜಿ ಎಂಬುವವರು ಗಂಭೀರವಾಗಿ ಆರೋಪ ಮಾಡಿದ್ದಾರೆ. ಸದ್ಯ ಈಗ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ FIR ದಾಖಲಾಗಿದೆ.

BDAನಲ್ಲಿ ಮತ್ತೊಂದು ಕರ್ಮಕಾಂಡ: BBMP ಮಾಜಿ ಕಾರ್ಪೊರೇಟರ್ ವಿರುದ್ಧವೇ FIR ದಾಖಲು
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು (ಎಡ)
ಆಯೇಷಾ ಬಾನು
|

Updated on:Feb 12, 2021 | 12:34 PM

Share

ಬೆಂಗಳೂರು: ಬಿಡಿಎ ಭ್ರಷ್ಟ ಕೈಗಳಿಂದ ಜನಸಾಮಾನ್ಯರಿಗಷ್ಟೇ ಅಲ್ಲ, ಗಣ್ಯರಿಗೂ ದೋಖಾ ಆಗ್ತಿದೆ. ಬಿಡಿಎನಲ್ಲಿ ಮತ್ತೊಂದು ಭಯಾನಕ ಕರ್ಮಕಾಂಡ ಬಯಲಾಗಿದೆ. ಮುಖ್ಯಮಂತ್ರಿ BS ಯಡಿಯೂರಪ್ಪಗೆ ದೂರು ನೀಡಿದ್ರೂ ಭ್ರಷ್ಟರಿಗೆ ಭಯವಿಲ್ಲ. ಅಮಾಯಕ ನಿವೇಶನದಾರರಿಗೆ ಭ್ರಷ್ಟರಿಂದ ದೋಖಾ ಆಗುತ್ತಿದೆ. ಸೈನಿಕರು, ಸಿನಿಮಾದವರು, ರಾಜಕಾರಣಿಗಳಿಗೂ ವಂಚನ ಮಾಡಲಾಗಿದೆ. ಬಿಡಿಎ ಸೈಟ್ ಖರೀದಿಸಿದ್ದ ಪ್ರಸನ್ನ ಗುರೂಜಿಗೂ ವಂಚನೆ ಮಾಡಲಾಗಿದೆಯಂತೆ.

ರಾತ್ರೋರಾತ್ರಿ ನನ್ನ ಸೈಟ್​ಗೆ ಬೇಲಿ ಹಾಕಿ ಸೈಟ್ ಕಬಳಿಕೆಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ ಪ್ರಸನ್ನ ಗುರೂಜಿ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈಗ ಮಾಜಿ ಕಾರ್ಪೊರೇಟರ್ ಮುನಿರಾಜು ವಿರುದ್ಧ FIR ದಾಖಲಾಗಿದೆ. 2014ರಲ್ಲಿ ಪ್ರಸನ್ನ ಗುರೂಜಿ ತನ್ನ ಪತ್ನಿ ಹೆಸರಲ್ಲಿ ನಾಗರಬಾವಿ 9ನೇ ಬ್ಲಾಕ್‌ನಲ್ಲಿ ಬಿಡಿಎ ಸೈಟ್ ಖರೀದಿಸಿದ್ದರು. ಈ ಸೈಟ್ ಮುನಿರಾಜು ಕಬಳಿಸಿದ್ದಾರೆಂದು ಗುರೂಜಿ ಆರೋಪ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಮುನಿರಾಜುಗೆ ಪ್ರಶ್ನೆ ಮಾಡಿದರೆ ತಮ್ಮ ಹೆಸರಿನಲ್ಲಿ ಸೈಟ್ ಇದೆ ಅಂತಾರೆ. ಬಿಡಿಎನಿಂದ ನೋಂದಣಿಯಾಗಿದೆ ಎಂದು ಹೇಳುತ್ತಾರೆ. ಈಗಾಗ್ಲೇ ಖರೀದಿಸಿದ್ದ ಸೈಟ್ ಅವರು ಪಡೆದಿದ್ದು ಹೇಗೆ? ಎಂದು ಗುರೂಜಿ ಪ್ರಶ್ನಿಸಿದ್ದಾರೆ.

ಇನ್ನು 4 ಕೋಟಿ ಬೆಲೆಬಾಳುವ ಜಾಗ ಮುನಿರಾಜು ಹೆಸರಿಗೆ ಕೇವಲ ₹24 ಲಕ್ಷಕ್ಕೆ ನೋಂದಣಿಯಾಗಿದೆ. ಈಗಾಗಲೇ ಅಲಾಟೀಸ್‌ಗೆ ಜಾಗ ಹಂಚಿಕೆಯಾಗಿತ್ತು. ಆದ್ರೆ ಗುಂಟೆ ಲೆಕ್ಕದಲ್ಲಿ ಬಿಡಿಎನಿಂದ ಮುನಿರಾಜುಗೆ ಹಂಚಿಕೆಯಾಗಿದೆ. ಆ ಜಾಗವನ್ನು ಇವರಿಗೆ ಹೇಗೆ ಹಂಚಿಕೆ ಮಾಡಿದ್ದಾರೆ? ಬಿಡಿಎ ಅಧಿಕಾರಿಗಳು ಲಂಚ ಪಡೆದಿದ್ದಾರೆ. ಭ್ರಷ್ಟ ಅಧಿಕಾರಿಗಳು, ಬ್ರೋಕರ್‌ಗಳಿಂದ ಅವ್ಯವಹಾರ ನಡೆದಿದೆ. ತಮಗೆ ಧಮ್ಕಿ ಹಾಕಿ ಸೈಟ್ ಕಬಳಿಸಿದ್ದಾರೆಂದು ಪ್ರಸನ್ನ ಗುರೂಜಿ ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: BDA ಅಧ್ಯಕ್ಷ – ಆಯುಕ್ತ ಮಧ್ಯೆ ಟಾಕ್​ ವಾರ್! ರೈತರ ಸಣ್ಣ ಸೈಟ್ ವಿರುದ್ಧ ‘ಸುಪ್ರೀಂ’ಗೆ ಹೋಗ್ತಾರೆ, ಆದ್ರೆ 500 ಕೋಟಿ ರೂ ಜಾಗದ ಬಗ್ಗೆ ಯಾಕೆ ಹೋಗಿಲ್ಲ?

Published On - 12:30 pm, Fri, 12 February 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?