AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ವರ್ಷದ ಪುಟ್ಟ ಪೋರನಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ, ನಿತ್ಯ ಬೆಳಗ್ಗೆ 8 ಕಿಲೋಮೀಟರ್ ರನ್ನಿಂಗ್, ಜಾಗಿಂಗ್

ಆತ ಪುಟ್ಟ ಪೋರ. ಆದ್ರೂ ಕ್ರೀಡೆಯಲ್ಲಿ ಸಾಧನೆ ಮಾಡ್ಬೇಕು ಅನ್ನೋ ಕನಸು. ಅದ್ರಲ್ಲೂ ಮ್ಯಾರಥಾನ್​ನಲ್ಲಿ ಮಿಂಚಬೇಕು ಅಂತಾ ತಯಾರಿ ನಡೆಸ್ತಿದ್ದಾನೆ. ಪ್ರತಿದಿನ ಎಂಟು ಕಿಲೋ ಮೀಟರ್‌ ಓಡಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡೋಕೆ ಮುಂದಾಗಿದ್ದಾನೆ.

4 ವರ್ಷದ ಪುಟ್ಟ ಪೋರನಿಗೆ ಕ್ರೀಡೆ ಬಗ್ಗೆ ಎಲ್ಲಿಲ್ಲದ ಆಸಕ್ತಿ, ನಿತ್ಯ ಬೆಳಗ್ಗೆ 8 ಕಿಲೋಮೀಟರ್ ರನ್ನಿಂಗ್, ಜಾಗಿಂಗ್
ಮೊಹಮ್ಮದ ಜೈದ್
ಆಯೇಷಾ ಬಾನು
|

Updated on: Dec 04, 2020 | 8:28 AM

Share

ಹಾವೇರಿ: ಮೊಹಮ್ಮದ ಜೈದ್. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ನಿವಾಸಿ. ವಯಸ್ಸು ಈಗ ನಾಲ್ಕು ವರ್ಷ ಎಂಟು ತಿಂಗಳು. ಜನಿಸಿದ ಕೆಲವು ತಿಂಗಳುಗಳ ನಂತರದಿಂದ ಈ ಬಾಲಕನಿಗೆ ಕ್ರೀಡೆ, ಯೋಗ ಅಂದ್ರೆ ಎಲ್ಲಿಲ್ಲದ ಪ್ರೀತಿ.

ಪುಟ್ಟ ಪೋರನಿಗೆ ಸಾಧಿಸುವ ಛಲ: ಬಾಲಕನ ತಂದೆ ಆಸೀಫ್ ಸುಮಾರು ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಂದೆಗೂ ಕ್ರೀಡೆ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಮಗನ ಕ್ರೀಡಾ ಆಸಕ್ತಿ ಕಂಡು ತಂದೆ ಮಗನಿಗೆ ಸಾಥ್ ನೀಡ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ‌ ತಂದೆ‌‌ ಮಗನಿಗೆ ಯೋಗಾಸನ, ರನ್ನಿಂಗ್, ಜಾಗಿಂಗ್ ಹೇಳಿಕೊಡ್ತಿದ್ದಾರೆ.

ಈಗಾಗಲೆೇ ಎರಡು, ನಾಲ್ಕು, ಐದು ಕಿಲೋ ಮೀಟರ್ ಮ್ಯಾರಥಾನ್​ಗಳಲ್ಲಿ ಭಾಗವಹಿಸಿ ಈ ಬಾಲಕ ಸೈ‌ ಎನಿಸಿಕೊಂಡಿದ್ದಾನೆ. ಇದೆೇ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ನಡೆಯಲಿರೋ ಮ್ಯಾರಥಾನ್ ಓಟಕ್ಕೂ ಕಸರತ್ತು ನಡೆಸ್ತಿದ್ದಾನೆ.

ಓಟದಲ್ಲಿ ಸಾಧನೆ‌ ಮಾಡೋ ಕನಸಿನೊಂದಿಗೆ ನಿತ್ಯವೂ ಎಂಟು ಕಿ.ಮೀ.ನಷ್ಟು ರನ್ನಿಂಗ್ ಓಡೋ ಈ ಪುಟ್ಟ ಪೋರನಿಗೆ ತಂದೆಯೇ ಗೈಡ್ ಆಗಿದ್ದಾರೆ. ಬೆಳೆಯೋ ಸಿರಿ ಮೊಳಕೆಯಲ್ಲಿ ಅನ್ನುವಂತೆ ಈ ಬಾಲಕ ಮುಂದೆ ಸಾಕಷ್ಟು ಸಾಧನೆ ಮಾಡಲಿ.

ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು