Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price: ಚಿನ್ನ, ಬೆಳ್ಳಿ ದರ ಕೊಂಚ ಏರಿಕೆ! 22 ಕ್ಯಾರೆಟ್ 10 ಗ್ರಾಂ ಚಿನ್ನ 42,150 ರೂಪಾಯಿ

Gold Silver Rate in Bengaluru: ಚಿನ್ನ, ಬೆಳ್ಳಿ ದರವನ್ನು ದೈನಂದಿನ ದರ ಬಲಾವಣೆಯನ್ನು ಪರಿಶೀಲಿಸಿದಾಗ ಕೊಂಚ ಏರಿಕೆ ಕಂಡಿದೆ. ಹಾಗಾದರೆ ಎಷ್ಟಿರಬಹುದು ದರ ಎಂಬುದರ ವಿವರ ಇಲ್ಲಿದೆ.

Gold Silver Price: ಚಿನ್ನ, ಬೆಳ್ಳಿ ದರ ಕೊಂಚ ಏರಿಕೆ! 22 ಕ್ಯಾರೆಟ್ 10 ಗ್ರಾಂ ಚಿನ್ನ 42,150 ರೂಪಾಯಿ
ಚಿನ್ನಾಭರಣ
Follow us
shruti hegde
|

Updated on: Mar 12, 2021 | 8:37 AM

ಬೆಂಗಳೂರು: ಚಿನ್ನ ದರ ಮತ್ತು ಬೆಳ್ಳಿ ದರದಲ್ಲಿ ದೈನಂದಿನ ದರ ಬದಲಾವಣೆ ಗಮನಿಸಿದಾಗ ಇಂದು ದರ ಕೊಂಚ ಏರಿಕೆಯತ್ತ ಜಿಗಿದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ ದರ 41,800 ರೂಪಾಯಿ ಇತ್ತು. ಇಂದಿನ ದರ 42,150 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 350 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್​ ಚಿನ್ನ 10 ಗ್ರಾಂ ಚಿನ್ನ ದರ ನಿನ್ನೆ 45,600 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,980 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 380 ರೂಪಾಯಿಯಷ್ಟು ಏರಿಕೆ ಕಂಡಿದೆ. ಜೊತೆಗೆ, 1ಕೆಜಿ ಬೆಳ್ಳಿ ದರ ನಿನ್ನೆ 67,000 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 73,200 ರೂಪಾಯಿಗೆ ಏರಿದೆ. ದರ ಬದಲಾವಣೆಯಲ್ಲಿ 6,200 ರೂಪಾಯಿ ಏರಿಕೆ ಕಂಡಿದೆ.

ಕೆಲವು ದಿನಗಳ ಹಿಂದೆ ಚಿನ್ನ ದರ ಇಳಿಕೆಯತ್ತ ಸಾಗುತ್ತಿತ್ತು. ತದನಂತರ 10 ಗ್ರಾಂಗೆ 200 ರೂಪಾಯಿಯ ಆಸುಪಾಸಿನಲ್ಲಿ ಏರಿಕೆಯತ್ತ ಸಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿನ್ನ ದರ ಕುಸಿದಿದೆ. ದೈನಂದಿನ ದರ ಬಲಾವಣೆಯಲ್ಲಿ ದರ ಪರಿಶೀಲಿಸಿದಾಗ ಎರಡು ದಿನಗಳಿಂದ ದರ ಏರಿಕೆ ಕಂಡಿದೆ.

ಚಿನ್ನ ಅಂದಾಕ್ಷಣ ಮುಖದಲ್ಲಿ ನಗು. ಕೊಳ್ಳಲು ಹೋದಾಗಲಂತೂ ಎಲ್ಲಿಲ್ಲದ ಸಂತೋಷ. ಯಾವ ಡಿಸೈನ್​ ಕೊಳ್ಳಲಿ? ಈ ಕಿವಿಯೋಲೆಗೆ ಎಷ್ಟಿರಬಹುದು? ನಮ್ಮಲ್ಲಿರುವ ಹಣಕ್ಕೆ ಬಂಗಾರದ ಬಳೆ ಕೊಳ್ಳಬಹುದಾ? ಎಂಬೆಲ್ಲಾ ಪ್ರಶ್ನೆ ಎದುರಾಗುತ್ತವೆ. ಒಮ್ಮೆ ಚಿನ್ನ ದರ ಎಷ್ಟಿದೆ ಎಂಬುದನ್ನು ತಿಳಿಯಿರಿ. ನಿಮ್ಮಲ್ಲಿನ ಹಣಕ್ಕೆ ಚಿನ್ನ ಖರೀದಿಸಬಹುದು ಎಂದಾದರೆ ಯಾಕೆ ತಡ.

22 ಕ್ಯಾರೆಟ್​ ಚಿನ್ನ 1 ಗ್ರಾಂ ಚಿನ್ನ 4,180 ರೂಪಾಯಿಗೆ ಮಾರಾಟವಾಗಿದ್ದು ಇಂದು ದೈನಂದಿನ ದರ ಬದಲಾವಣೆ ಗಮನಿಸಿದಾಗ 35 ರೂಪಾಯಿಯಷ್ಟು ಏರಿಕೆ ಕಂಡಿದೆ. ಇಂದಿನ ದರ 4,215 ರೂಪಾಯಿ ಇದೆ. 8ಗ್ರಾಂ ಚಿನ್ನ ದರ ನಿನ್ನೆ 33,440 ರೂಪಾಯಿಗೆ ಗ್ರಾಹಕರು ಖರೀದಿಸಿದ್ದಾರೆ. ದೈನಂದಿನ ದರ ಪರಿಶೀಲಿಸಿದಾಗ 280 ರೂಪಾಯಿಯಷ್ಟು ಏರಿಕೆ ಕಂಡಿದೆ. ಇಂದಿನ ದರ 33,720 ರೂಪಾಯಿ. ನಿನ್ನೆ 10 ಗ್ರಾಂ ಚಿನ್ನ ದರ 41,800 ರೂಪಾಯಿ ಇತ್ತು. ಇಂದಿನ ದರ 42,150 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 350 ರೂಪಾಯಿ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನ ದರ ನಿನ್ನೆ 4,18,000 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 4,21,500 ರೂಪಾಯಿ ಆಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 3,500 ರೂಪಾಯಿ ಏರಿಕೆ ಕಂಡಿದೆ.

24 ಕ್ಯಾರೆಟ್​ ಚಿನ್ನ ದೈನಂದಿನ ದರ ಪರಿಶೀಲಿಸಿದಾಗ 1ಗ್ರಾಂ ಚಿನ್ನ ದರದಲ್ಲಿ 38 ರೂಪಾಯಿ ಏರಿಕೆ ಕಂಡು ಬಂದಿದೆ. ನಿನ್ನೆ ದರ 4,560 ರೂಪಾಯಿ ಇದ್ದು, ಇಂದಿನ ದರ 4,598 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಚಿನ್ನ ದರ ನಿನ್ನೆ 36,480 ರೂಪಾಯಿ ಇದ್ದು, ಇಂದಿನ ದರ 36,784 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 304 ರೂಪಾಯಿಯಷ್ಟು ಏರಿಕೆ ಕಂಡಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,600 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 45,980 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 380 ರೂಪಾಯಿಯಷ್ಟು ಏರಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,56,000 ರೂಪಾಯಿಗೆ ಮಾರಾಟವಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,800 ರೂಪಾಯಿ ಏರಿಕೆ ಕಂಡಿದೆ.

ಬೆಳ್ಳಿ ದರ ನಿನ್ನೆ 1 ಗ್ರಾಂ ಬೆಳ್ಳಿ ದರ 67 ರೂಪಾಯಿಗೆ ಮಾರಾಟವಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 6.20 ರೂಪಾಯಿಯಷ್ಟು ಏರಿಕೆ ಕಂಡಿದ್ದು ಇದೀಗ ಬೆಲೆ 73.20 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 536 ರೂಪಾಯಿಗೆ ಮಾರಾಟವಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 49.60 ರೂಪಾಯಿ ಏರಿಕೆ ಆಗಿದೆ. ಇದೀಗ ದರ 585.60 ರೂಪಾಯಿ. 10 ಗ್ರಾಂ ಬೆಳ್ಳಿ ದರ ನಿನ್ನೆ 670 ರೂಪಾಯಿಗೆ ಮಾರಾಟವಾಗಿದ್ದು ದೈನಂದಿನ ದರ ಬದಲಾವಣೆಯಲ್ಲಿ 62 ರೂಪಾಯಿ ಏರಿಕೆ ಕಂಡಿದೆ. ಇಂದಿನ ದರ 732 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,700 ರೂಪಾಯಿಗೆ ಮಾರಾಟವಾಗಿದ್ದು, ದೈನಂದಿನ ದರ ಬದಲಾವಣೆಯಲ್ಲಿ 620 ರೂಪಾಯಿ ಏರಿಕೆ ಕಂಡಿದೆ. ಇದೀಗ ದರ 7,320 ರೂಪಾಯಿ ಆಗಿದೆ. ಹಾಗೆಯೇ 1ಕೆಜಿ ಬೆಳ್ಳಿ ದರ ನಿನ್ನೆ 67,000 ರೂಪಾಯಿಗೆ ಮಾರಾಟವಾಗಿದೆ. ಇಂದಿನ ದರ 73,200 ರೂಪಾಯಿಗೆ ಏರಿದೆ. ದರ ಬದಲಾವಣೆಯಲ್ಲಿ 6,200 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Gold Silver Price: ಚಿನ್ನ ದರ ಏರಿಕೆ, ಬೆಳ್ಳಿ ದರ ಇಳಿಕೆ.. ಎಷ್ಟಿದೆ ಗೊತ್ತಾ ಇಂದಿನ ದರ?

ಇದನ್ನೂ ಓದಿ: Gold Silver Price: ಚಿನ್ನ ಕೊಳ್ಳಲು ಉತ್ತಮ ಸಮಯ.. ಇಂದು ಎಷ್ಟಿದೆ ಗೊತ್ತಾ ಚಿನ್ನ ದರ?

Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೇಷ ರಾಶಿಯಲ್ಲಿ ಚಂದ್ರ ಮಕರ ರಾಶಿಯಲ್ಲಿ ಸಂಚಾರ
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ