Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್.ಎಲ್. ಬೈರಪ್ಪನವರ ಜನಪ್ರಿಯ ಕಾದಂಬರಿ ‘ಪರ್ವ’ ಪ್ರದರ್ಶನಕ್ಕೆ ಸಿದ್ಧ.. ಇಂದಿನಿಂದ ಮೈಸೂರು ಕಲಾಮಂದಿರದಲ್ಲಿ ಪರ್ವ ಶುರು

ಮೈಸೂರಿನ ರಂಗಾಯಣ ಒಂದಿಲ್ಲೊಂದು ಪ್ರಯೋಗವನ್ನ ಮಾಡುತ್ತಲೇ ಬಂದಿದೆ. ಕುವೆಂಪುರವರ ಮಲೆಗಳಲ್ಲಿ ಮಧು ಮಗಳು, ರಾಮಾಯಣ ದರ್ಶನಂ ಕಾದಂಬರಿಗಳನ್ನ ರಂಗದ ಮೇಲೆ ತಂದು ಸೈ ಎನಿಸಿಕೊಂಡಿದ್ದಾರೆ. ಇದೀಗ ಸಾಹಿತಿ ಬೈರಪ್ಪನವರ ಪರ್ವ ಕಾದಂಬರಿ ರಂಗ ಪ್ರಯೋಗಕ್ಕೆ ಸಿದ್ಧವಾಗಿದೆ.

ಎಸ್.ಎಲ್. ಬೈರಪ್ಪನವರ ಜನಪ್ರಿಯ ಕಾದಂಬರಿ ‘ಪರ್ವ’ ಪ್ರದರ್ಶನಕ್ಕೆ ಸಿದ್ಧ.. ಇಂದಿನಿಂದ ಮೈಸೂರು ಕಲಾಮಂದಿರದಲ್ಲಿ ಪರ್ವ ಶುರು
ನಾಟಕ ರೂಪದಲ್ಲಿ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿ
Follow us
ಆಯೇಷಾ ಬಾನು
|

Updated on: Mar 12, 2021 | 7:41 AM

‘ಪರ್ವ’.. ಸಾಹಿತಿ ಎಸ್.ಎಲ್. ಬೈರಪ್ಪನವರ ಜನಪ್ರಿಯ ಕಾದಂಬರಿಗಳಲ್ಲಿ ಒಂದಾಗಿದೆ. ಈ‌ ಕಾದಂಬರಿ ಸದ್ಯಕ್ಕೆ ರಂಗರೂಪಕ್ಕೆ‌ ಬರಲಿದ್ದು ಪ್ರದರ್ಶನಕ್ಕೂ ಸಜ್ಜಾಗಿದೆ.‌ ಪರ್ವ ಕಾದಂಬರಿ ಬೈರಪ್ಪನವರ ಕಾದಂಬರಿಗಳಲ್ಲಿ ಬಹು ಚರ್ಚಿತ ಕಾದಂಬರಿ ಎನಿಸಿಕೊಂಡಿದೆ. ಮಹಾಭಾರತವನ್ನ ವೈಚಾರಿಕ ದೃಷ್ಟಿಯಿಂದ ಹೇಳುವ ಕಾದಂಬರಿಯಾಗಿದೆ. ಇದೇ ಕಾದಂಬರಿಯನ್ನು ರಂಗದ ಮೇಲೆ‌ ತರಲು‌ ಮೈಸೂರಿ‌ನ ರಂಗಾಯಣ ನಿರಂತರ ಪ್ರಯತ್ನ ಮಾಡುತ್ತಲೇ ಇತ್ತು.

ಇಂದಿನಿಂದ ಮೂರು ದಿನಗಳ ಕಾಲ ನಿರಂತವಾಗಿ ಪರ್ವ ನಾಟಕ ಪ್ರದರ್ಶನವಾಗುತ್ತಿದೆ. ಸುಮಾರು 12 ಜನ ರಂಗಾಯಣದ ಹಿರಿಯ ಕಲಾವಿದರು, 20 ಕಿರಿಯ ಕಲಾವಿದರು ಸೇರಿ 10ಕ್ಕೂ ಹೆಚ್ಚು ತಂತ್ರಜ್ಞರ ತಂಡದಿಂದ ನಾಟಕ ಪ್ರದರ್ಶನವಾಗುತ್ತಿದೆ. ಸುಮಾರು 7 ಗಂಟೆಗಳ ನಾಟಕ‌ ಇದಾಗಿದ್ದು, ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ ನಿರ್ದೇಶಿಸಿದ್ದಾರೆ.

3 ದಿನಗಳ ಕಾಲ ನಿರಂತರವಾಗಿ ಈ ನಾಟಕ ರಂಗಾಯಣದ ಕಲಾಮಂದಿರದಲ್ಲಿ ಪ್ರದರ್ಶನವಾಗಲಿದೆ. ನಂತರ ರಾಜ್ಯದ ವಿವಿಧೆಡೆ ಸಂಚಾರ ಮಾಡಿ ಅಲ್ಲೂ ಪ್ರದರ್ಶನ ನೀಡುವ ಯೋಜನೆಯನ್ನ ರಂಗಾಯಣ ರೂಪಿಸಿಕೊಂಡಿದೆ. ಅಲ್ಲದೆ 5 ರಾಜ್ಯಗಳಲ್ಲೂ ಪ್ರದರ್ಶನಕ್ಕೆ ಸಿದ್ಧತೆಯಾಗಿದೆಯಂತೆ. ಈಗಾಗಲೇ ಕಲಾವಿದರು‌ 6 ತಿಂಗಳಿಂದ ನಾಟಕವನ್ನು‌ ರಿಹರ್ಸಲ್‌ ಮಾಡಿ ಸಜ್ಜಾಗಿದ್ದಾರೆ.‌ ಜತೆಗೆ ನಾಟಕಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಇದಕ್ಕಾಗಿಯೇ ಸರ್ಕಾರ 1 ಕೋಟಿ ಹಣವನ್ನು‌ ಬಜೆಟ್​ನಲ್ಲಿ ಮೀಸಲಿಟ್ಟಿದೆ.‌ ಅಲ್ಲದೆ ಕಲಾವಿದರಿಗೂ ಸಹ ನಾಟಕದ ಬಗ್ಗೆ ಕುತೂಹಲ ಇದೆಯಂತೆ.

ಒಟ್ಟಾರೆ, ಇಂದಿನಿಂದ ಪರ್ವ ಕಾದಂಬರಿಯ ರಂಗಪ್ರಯೋಗ ನಡೆಯುತ್ತಿದ್ದು, ಈಗಾಗಲೇ ಟಿಕೆಟ್​ಗಳು ಕೂಡ ಬಹುತೇಕ ಸೇಲ್ ಆಗಿದೆ. ರಂಗಾಸಕ್ತರು ಇಂದಿನ ಪ್ರದರ್ಶನಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಇದನ್ನೂ ಓದಿ: ಮತ್ತೊಂದು ನಾಟಕ ಪರ್ವ: ರಂಗಭೂಮಿ ಪ್ರಿಯರ ಸ್ವರ್ಗ ಎನಿಸಿದೆ ಧಾರವಾಡ ರಂಗಾಯಣ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ