AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾದಿ ಬೂದಿಯಾಯ್ತು, ಸೃಷ್ಟಿ ಸಿರಿಯಾಯ್ತು.. ನಿಜವಾಗುತ್ತಂತೆ ಗೊರವಜ್ಜನ ಭವಿಷ್ಯವಾಣಿ

ಹಾವೇರಿ: ಅದು ಪ್ರಸಿದ್ಧ ದೇವಸ್ಥಾನ. ಅಲ್ಲಿ ನಡೆಯೋ ಕಾರ್ಣಿಕವಾಣಿ ಅಂದ್ರೆ ಅದು ವರ್ಷದ ಭವಿಷ್ಯವಾಣಿ ಅಂತಲೇ ಫೇಮಸ್. ಭವಿಷ್ಯದಲ್ಲಿ ನಡೆಯೋದನ್ನ ಒಂದೇ ಮಾತಿನಲ್ಲಿ ಬಿಲ್ಲನ್ನೇರಿ ಗೊರವಪ್ಪ ಹೇಳುತ್ತಾನೆ. ಕಳೆದ ವರ್ಷ ಹಾಗೂ ಈ ವರ್ಷ ಗೊರವಪ್ಪ ನುಡಿದ ಕಾರ್ಣಿಕ ನುಡಿ ನಿಜವಾಗಿದ್ದು, ಭಕ್ತರ ಭಕ್ತಿ ಮತ್ತಷ್ಟು ಹೆಚ್ಚಾಗಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮಾಲತೇಶ ದೇವರ ಕಾರ್ಣಿಕ ನೆರವೇರಿಸಲಾಗುತ್ತದೆ. ಇಂತಹ ಕಾರ್ಣಿಕದಲ್ಲಿ ನುಡಿಯುವಂತ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. […]

ವ್ಯಾದಿ ಬೂದಿಯಾಯ್ತು, ಸೃಷ್ಟಿ ಸಿರಿಯಾಯ್ತು.. ನಿಜವಾಗುತ್ತಂತೆ ಗೊರವಜ್ಜನ ಭವಿಷ್ಯವಾಣಿ
ಆಯೇಷಾ ಬಾನು
|

Updated on: Nov 11, 2020 | 8:41 AM

Share

ಹಾವೇರಿ: ಅದು ಪ್ರಸಿದ್ಧ ದೇವಸ್ಥಾನ. ಅಲ್ಲಿ ನಡೆಯೋ ಕಾರ್ಣಿಕವಾಣಿ ಅಂದ್ರೆ ಅದು ವರ್ಷದ ಭವಿಷ್ಯವಾಣಿ ಅಂತಲೇ ಫೇಮಸ್. ಭವಿಷ್ಯದಲ್ಲಿ ನಡೆಯೋದನ್ನ ಒಂದೇ ಮಾತಿನಲ್ಲಿ ಬಿಲ್ಲನ್ನೇರಿ ಗೊರವಪ್ಪ ಹೇಳುತ್ತಾನೆ. ಕಳೆದ ವರ್ಷ ಹಾಗೂ ಈ ವರ್ಷ ಗೊರವಪ್ಪ ನುಡಿದ ಕಾರ್ಣಿಕ ನುಡಿ ನಿಜವಾಗಿದ್ದು, ಭಕ್ತರ ಭಕ್ತಿ ಮತ್ತಷ್ಟು ಹೆಚ್ಚಾಗಿದೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮಾಲತೇಶ ದೇವರ ಕಾರ್ಣಿಕ ನೆರವೇರಿಸಲಾಗುತ್ತದೆ. ಇಂತಹ ಕಾರ್ಣಿಕದಲ್ಲಿ ನುಡಿಯುವಂತ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಷ್ಟೇ ಅಲ್ಲ ಗೊರವಪ್ಪ ನುಡಿಯುವ ಭವಿಷ್ಯವನ್ನ ಸಾಕ್ಷಾತ್ ಮೈಲಾರ ಲಿಂಗೇಶ್ವರನೇ ನುಡಿದ ನುಡಿ ಎನ್ನಲಾಗುತ್ತೆ.

ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಗೊರವಯ್ಯ ಘಟಸರ್ಪ ಕಂಗಾಲಾದಿತಲೆ ಪರಾಕ್ ಅನ್ನೋ ಕಾರ್ಣಿಕ ನುಡಿದಿದ್ದ. ಇದು ಮನುಷ್ಯ ಕುಲ ಸಂಕಷ್ಟಕ್ಕೆ ಸಿಲುಕುತ್ತದೆ ಅನ್ನೋದರ ಮುನ್ಸೂಚನೆ ಆಗಿತ್ತಂತೆ. ಅದರಂತೆ ಹೆಮ್ಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗಿತ್ತು ಹಾಗೂ ಮಳೆಯಿಂದಾಗಿ ರೈತಕುಲ ಕಂಗಾಲಾಗಿದ್ದು ಇದಕ್ಕೆ ಸಾಕ್ಷಿಯಾಗಿತ್ತು. ಈ ವರ್ಷ ದಸರಾ ಸಂದರ್ಭದಲ್ಲಿ ನಡೆದ ಕಾರ್ಣಿಕದಲ್ಲಿ ವ್ಯಾದಿ ಬೂದಿಯಾತಲೆ, ಸೃಷ್ಟಿ ಸಿರಿಯಾತಲೆ ಪರಾಕ್ ಅಂತಾ ಹೊರವಯ್ಯ ಕಾರ್ಣಿಕ ನುಡಿದಿದ್ದ. ಇದು ಕೂಡ ನಿಜವಾಗಿದೆಯಂತೆ. ಅಟ್ಟಹಾಸ ಮೆರೆದಿದ್ದ ಕೊರೊನಾ ಈಗ ಕಡಿಮೆ ಆಗ್ತಿದ್ದು, ಗೊರವಯ್ಯನ ಕಾರ್ಣಿಕ ಸತ್ಯವಾಗಿದೆ ಅಂತಾರೆ ದೇವಸ್ಥಾನದ ಪ್ರಧಾನ ಅರ್ಚಕರು.

ಕೊರೊನಾ ಆರ್ಭಟ ಕಡಿಮೆ ಆಗ್ತಿರೋದು ಮತ್ತು ಹಿಂಗಾರಿನ ಬೆಳೆಗಳು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿರೋದು ಈ ವರ್ಷ ನುಡಿದ ಕಾರ್ಣಿಕಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಇಲ್ಲಿ ನಡೆಯೋ ಕಾರ್ಣಿಕಕ್ಕೆ ಎಲ್ಲಿಲ್ಲದ ಮಹತ್ವವಿದೆ. ಪ್ರತಿವರ್ಷ ರೈತರು ಮಾಲತೇಶ ದೇವರ ಕಾರ್ಣಿಕದ ಮೇಲೆಯೇ ವರ್ಷದ ಮಳೆ ಬೆಳೆ ಹಾಗೂ ಜನಜೀವನವನ್ನ ನಿರ್ಧರಿಸ್ತಾರೆ. ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ಕಾರ್ಣಿಕ ಭವಿಷ್ಯವಾಣಿಯಾಗಿ ಸತ್ಯವಾಗಿವೆ ಅಂತಾರೆ ಭಕ್ತರು.

ಸುಮಾರು ವರ್ಷಗಳ ಇತಿಹಾಸ ಹೊಂದಿರೋ ಮಾಲತೇಶ ದೇವಸ್ಥಾನದ ಕಾರ್ಣಿಕಕ್ಕೆ ಎಲ್ಲಿಲ್ಲದ‌ ಮಹತ್ವ ಪಡೆದಿದೆ. ಪ್ರತಿವರ್ಷ ಕಾರ್ಣಿಕ ಆಲಿಸಲು ರಾಜ್ಯ, ಹೊರರಾಜ್ಯಗಳ ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಬರ್ತಾರೆ. ಈವರೆಗೆ ನುಡಿದ ಕಾರ್ಣಿಕಗಳೆಲ್ಲವೂ ನಿಜವಾಗಿವೆ. ಹಾಗೆಯೇ ಈ ವರ್ಷದ ಕಾರ್ಣಿಕವೂ ನಿಜವಾಗಿದೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.

Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ