AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರಿದ ಸೇತುವೆ, ಮರದ ತುಂಡಿಟ್ಟು ಗ್ರಾಮಸ್ಥರೇ ಪರಿಹರಿಸಿಕೊಂಡ್ರು.. ಹಾಗಾದ್ರೆ ಜನಪ್ರತಿನಿಧಿಗಳು ಯಾಕ್ ಬೇಕು?

ಮಡಿಕೇರಿ: ಕೊಡಗಿನಲ್ಲಿ 2018ರಲ್ಲಿ  ಆದ ಮಹಾಪ್ರಳಯ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. 2 ವರ್ಷ ಕಳೆದ್ರೂ ಹಲವು ರೀತಿಯ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಕೆಲವು ಸಮಸ್ಯೆಗಳನ್ನ ಊರಿನವರೇ ಪರಿಹರಿಸಿಕೊಳ್ಳುತ್ತಿದ್ದಾರೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲೊಂದು ಗ್ರಾಮ ಇದ್ದು, ದುರಸ್ತಿ ಕಾಣದ ಸೇತುವೆಗೆ ಗ್ರಾಮಸ್ಥರೇ ಹೊಸ ರೂಪ ಕೊಟ್ಟಿದ್ದಾರೆ. ಸೇತುವೆ ಅರ್ಧ ಮುರಿದುಬಿದ್ದಿದೆ. ತುಂಡಾದ ಭಾಗದಲ್ಲಿ ಗ್ರಾಮಸ್ಥರು ಮರದ ತುಂಡುಗಳನ್ನ ಬಳಸಿ ಪ್ಯಾಚ್ ವರ್ಕ್ ಮಾಡಿದ್ದಾರೆ. ನಡೆದು ಹೋಗಲು ಇಷ್ಟಾದ್ರು ಇದ್ಯಲ್ವಾ ಅನ್ನೋ ಸಮಾಧಾನ. ಇದಕ್ಕೆ ಆಡಳಿತ ವರ್ಗದ […]

ಮುರಿದ ಸೇತುವೆ, ಮರದ ತುಂಡಿಟ್ಟು ಗ್ರಾಮಸ್ಥರೇ ಪರಿಹರಿಸಿಕೊಂಡ್ರು.. ಹಾಗಾದ್ರೆ ಜನಪ್ರತಿನಿಧಿಗಳು ಯಾಕ್ ಬೇಕು?
ಆಯೇಷಾ ಬಾನು
| Edited By: |

Updated on: Oct 29, 2020 | 12:43 PM

Share

ಮಡಿಕೇರಿ: ಕೊಡಗಿನಲ್ಲಿ 2018ರಲ್ಲಿ  ಆದ ಮಹಾಪ್ರಳಯ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. 2 ವರ್ಷ ಕಳೆದ್ರೂ ಹಲವು ರೀತಿಯ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಕೆಲವು ಸಮಸ್ಯೆಗಳನ್ನ ಊರಿನವರೇ ಪರಿಹರಿಸಿಕೊಳ್ಳುತ್ತಿದ್ದಾರೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲೊಂದು ಗ್ರಾಮ ಇದ್ದು, ದುರಸ್ತಿ ಕಾಣದ ಸೇತುವೆಗೆ ಗ್ರಾಮಸ್ಥರೇ ಹೊಸ ರೂಪ ಕೊಟ್ಟಿದ್ದಾರೆ.

ಸೇತುವೆ ಅರ್ಧ ಮುರಿದುಬಿದ್ದಿದೆ. ತುಂಡಾದ ಭಾಗದಲ್ಲಿ ಗ್ರಾಮಸ್ಥರು ಮರದ ತುಂಡುಗಳನ್ನ ಬಳಸಿ ಪ್ಯಾಚ್ ವರ್ಕ್ ಮಾಡಿದ್ದಾರೆ. ನಡೆದು ಹೋಗಲು ಇಷ್ಟಾದ್ರು ಇದ್ಯಲ್ವಾ ಅನ್ನೋ ಸಮಾಧಾನ. ಇದಕ್ಕೆ ಆಡಳಿತ ವರ್ಗದ ಅಸಡ್ಡೆ ಅನ್ನಬೇಕೋ.. ಗ್ರಾಮಸ್ಥರ ಸ್ವಾವಲಂಬಿ ನಡೆ ಅನ್ನಬೇಕೋ ಗೊತ್ತಿಲ್ಲ. ಇಂಥದ್ದೊಂದು ಸ್ಥಿತಿ ಕಂಡುಬಂದಿದ್ದು ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರೋ ಚಡಾವು ಗ್ರಾಮದಲ್ಲಿ.

ಗ್ರಾಮದ ಸಮಸ್ಯೆ ಗ್ರಾಮಸ್ಥರಿಂದಲೇ ಪರಿಹಾರ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯನಾಡಿನಿಂದ ಚಡಾವು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ 2018ರ ಪ್ರಕೃತಿ ವಿಕೋಪಕ್ಕೆ ಅರ್ಧ ಕುಸಿದಿತ್ತು. ಚಡಾವು ಭಾಗದ 100ಕ್ಕೂ ಅಧಿಕ ಕುಟುಂಬಗಳು ಇದರಿಂದಾಗಿ ಸಮಸ್ಯೆ ಅನುಭವಿಸ್ತಿದ್ದಾರೆ. ಪಯಸ್ವಿನಿ ನದಿ ದಾಟಿ ಊರಿಗೆ ಹೋಗೋಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹತ್ತಾರು ಕಿಲೋ ಮೀಟರ್ ಬಳಸಿ ಊರು ಸೇರ್ತಿದ್ರು. ಈಗ ತಾತ್ಕಾಲಿಕ ಪರಿಹಾರವನ್ನು ಗ್ರಾಮಸ್ಥರೇ ಕಂಡುಕೊಂಡಿದ್ದಾರೆ.

ತುಂಡಾದ ಸೇತುವೆಯ ಅರ್ಧ ಭಾಗದಕ್ಕೆ ಮರದ ತುಂಡುಗಳನ್ನ ಬಳಸಿ ಕಾಲು ಸೇತುವೆ ಮಾಡಿಕೊಂಡಿದ್ದಾರೆ. ಸ್ಥಳೀಯ ಆಡಳಿತ ಸೂಕ್ತ ಸ್ಪಂದನೆ ನೀಡದ ಕಾರಣಕ್ಕೆ, ಎಲ್ಲರೂ ಒಟ್ಟಾಗಿ ಶ್ರಮದಾನದ ಮೂಲಕ ಕಾಲು ಸೇತುವೆ ರೆಡಿ ಮಾಡಿದ್ದಾರೆ. ಸದ್ಯಕ್ಕೆ ಇದು ತಾತ್ಕಾಲಿಕ ಪರಿಹಾರ ಅನ್ನಬಹುದು. ಆದ್ರೆ, ಮಳೆ ಬಂದ ಸಂದರ್ಭದಲ್ಲಿ ನದಿ ದಾಟೋದು ಕಷ್ಟ. ಮತ್ತೆ ಹತ್ತಾರು ಕಿಲೋಮೀಟರ್ ಬಳಸಿ ತೆರಳಬೇಕಾದ ಅನಿವಾರ್ಯತೆ ಇದೆ.

ಹಲವು ಬಾರಿ ಮನವಿ ಕೊಟ್ಟರೂ, ಸೇತುವೆ ದುರಸ್ತಿ ಮಾಡುವಂತೆ ಮನವಿ ಮಾಡಿದ್ರೂ ಯಾರೂ ಸ್ಪಂದಿಸಿಲ್ಲ. ಒಂದರ್ಥದಲ್ಲಿ ವ್ಯವಸ್ಥೆ ಮೇಲಿನ ನಂಬಿಕೆಯನ್ನೆ ಜನ ಕಳೆದುಕೊಂಡಿದ್ದಾರೆ. ಚುನಾವಣೆ ವೇಳೆ ಭರವಸೆ ಕೊಡೋದನ್ನ ಬಿಟ್ಟು ಗ್ರಾಮೀಣ ಭಾಗದ ಕಷ್ಟಕ್ಕೆ ನಾವು ಸ್ಪಂದಿಸ್ತೇವೆ ಅನ್ನೋದನ್ನ ಜನಪ್ರತಿನಿಧಿಗಳು ಸಾಬೀತು ಮಾಡ್ಬೇಕಿದೆ.

Follow Us
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?