AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾನ್​ಶಾಪ್ ಬಂದ್ ಆದ್ರೆ ಏನಂತೆ? ಮಾಸ್ಕ್​ ಅಪ್ಪೋ ಮಾಸ್ಕು ಅಂತಾ ಹೊರಟೇಬಿಟ್ಟ ಇವ..

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಲಾಕ್​ಡೌನ್ ಆಗಿ ಬಹುತೇಕ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿ ಹೋಗಿವೆ. ಅದರಲ್ಲೂ ಸಣ್ಣ ಸಣ್ಣ ಅಂಗಡಿಕಾರರಂತೂ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಏನೆಲ್ಲಾ ಪ್ಯಾಕೇಜ್​ಗಳನ್ನು ಘೋಷಿಸಿದರೂ ಅವೆಲ್ಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನುವಂತಾಗಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾದರೂ ಅದರಿಂದ ಹೆಚ್ಚೇನೂ ಪರಿಣಾಮ ಬೀರಿಲ್ಲ. ಆತ್ಮನಿರ್ಭರ ಪರಿಕಲ್ಪನೆ ಸಾಕಾರಗೊಳಿಸಿದ ವಿಶೇಷ ಚೇತನ ಏಕೆಂದರೆ ಜನರಿಗೆ ಉದ್ಯೋಗವೇ ಇಲ್ಲದ್ದಕ್ಕೆ ಹಣ ಖರ್ಚು ಮಾಡಲು ಹೊರಗೆ ಬಾರದೇ ಹೋಟೆಲ್, ಪಾನ್ ಶಾಪ್ ಸೇರಿದಂತೆ ಅನೇಕ ವ್ಯಾಪಾರಗಳು ನೆಲಕಚ್ಚಿವೆ. […]

ಪಾನ್​ಶಾಪ್ ಬಂದ್ ಆದ್ರೆ ಏನಂತೆ? ಮಾಸ್ಕ್​ ಅಪ್ಪೋ ಮಾಸ್ಕು ಅಂತಾ ಹೊರಟೇಬಿಟ್ಟ ಇವ..
Follow us
ಸಾಧು ಶ್ರೀನಾಥ್​
|

Updated on: Jun 29, 2020 | 3:09 PM

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಲಾಕ್​ಡೌನ್ ಆಗಿ ಬಹುತೇಕ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿ ಹೋಗಿವೆ. ಅದರಲ್ಲೂ ಸಣ್ಣ ಸಣ್ಣ ಅಂಗಡಿಕಾರರಂತೂ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಏನೆಲ್ಲಾ ಪ್ಯಾಕೇಜ್​ಗಳನ್ನು ಘೋಷಿಸಿದರೂ ಅವೆಲ್ಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನುವಂತಾಗಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾದರೂ ಅದರಿಂದ ಹೆಚ್ಚೇನೂ ಪರಿಣಾಮ ಬೀರಿಲ್ಲ.

ಆತ್ಮನಿರ್ಭರ ಪರಿಕಲ್ಪನೆ ಸಾಕಾರಗೊಳಿಸಿದ ವಿಶೇಷ ಚೇತನ ಏಕೆಂದರೆ ಜನರಿಗೆ ಉದ್ಯೋಗವೇ ಇಲ್ಲದ್ದಕ್ಕೆ ಹಣ ಖರ್ಚು ಮಾಡಲು ಹೊರಗೆ ಬಾರದೇ ಹೋಟೆಲ್, ಪಾನ್ ಶಾಪ್ ಸೇರಿದಂತೆ ಅನೇಕ ವ್ಯಾಪಾರಗಳು ನೆಲಕಚ್ಚಿವೆ. ಇಂಥ ವೇಳೆಯಲ್ಲಿ ಕೊರೊನಾ ಮಹಾಮಾರಿಯನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿಯವರು ಹೇಳಿರೋ ಆತ್ಮನಿರ್ಭರ ಪರಿಕಲ್ಪನೆಯನ್ನು ಧಾರವಾಡದ ವಿಶೇಷಚೇತನ ವ್ಯಕ್ತಿಯೊಬ್ಬ ಸಾಕಾರಗೊಳಿಸಿದ್ದಾರೆ.

ಪಾನ್​ಶಾಪ್ ಸಂಪೂರ್ಣವಾಗಿ ಬಂದ್ ಧಾರವಾಡದ ಟಿಕಾರೆ ರಸ್ತೆಯ ನಿಜಾಮುದ್ದೀನ್ ಬಟ್ಲರ್ ಅನ್ನೋ 36 ವರ್ಷ ವಯಸ್ಸಿನ ವಿಶೇಷ ಚೇತನ ವ್ಯಕ್ತಿ ಹಲವಾರು ವರ್ಷಗಳಿಂದ ನಗರದ ಸುಭಾಷ್ ರಸ್ತೆಯಲ್ಲಿ ಚಿಕ್ಕದೊಂದು ಪಾನ್ ಶಾಪ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ನಿಜಾಮುದ್ದೀನ್ ಕುಟುಂಬಕ್ಕೆ ಕೊರೊನಾ ಮಹಾಮಾರಿ ದೊಡ್ಡ ಹೊಡೆದ ನೀಡಿತು. ಪಾನ್​ಶಾಪ್ ಸಂಪೂರ್ಣವಾಗಿ ಬಂದ್ ಆಗಿ ಕುಟುಂಬ ನಿರ್ವಹಣೆಯೇ ಕಷ್ಟವಾಯಿತು.

ಮೊದಲೇ ವಿಶೇಷ ಚೇತನ. ಅಂಥದ್ದರಲ್ಲಿ ಪಾನ್ ಶಾಪ್ ಬಂದ್ ಆಗಿದ್ದು ಮತ್ತೊಂದು ಹೊಡೆತ. ಇದೇ ವೇಳೆ ಜಾಣತನ ಮೆರೆದ ನಿಜಾಮುದ್ದೀನ್ ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಬೇಡಿಕೆ ಇರೋ ಮಾಸ್ಕ್​ಗಳನ್ನು ಮನೆಯಲ್ಲಿಯೇ ತಯಾರಿಸಿದರು. ಸರ್ಕಾರದಿಂದ ನೀಡಲಾಗಿದ್ದ ಮೂರು ಗಾಲಿಯ ಬೈಕ್​ನ ಹಿಂದಿನ ಭಾಗದಲ್ಲಿ ಸ್ಟ್ಯಾಂಡ್ ಕಟ್ಟಿದರು. ಆ ಸ್ಟ್ಯಾಂಡ್​ಗೆ ಮಾಸ್ಕ್​ಗಳನ್ನು ತೂಗು ಹಾಕಿಕೊಂಡು ನಗರದಲ್ಲಿ ತಿರುಗಾಡಲು ಶುರು ಮಾಡಿದರು.

ಇದನ್ನು ಗಮನಿಸಿದ ಸಾರ್ವಜನಿಕರು ಇವರ ಬಳಿ ಮಾಸ್ಕ್ ಖರೀದಿಸಲು ಶುರು ಮಾಡಿದರು. ಒಂದೆರಡು ದಿನಗಳು ಕಳೆಯುತ್ತಿದ್ದಂತೆಯೇ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್​ಗಳು ಮಾರಾಟವಾಗಿ, ನಿಜಾಮುದ್ದೀನ್ ಅವರ ಆತ್ಮವಿಶ್ವಾಸ ಹೆಚ್ಚಾಗತೊಡಗಿತು. ಆಗ ಬಗೆ ಬಗೆಯ ಮಾಸ್ಕ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದರು. ಪಾನ್​ಶಾಪ್​ನಲ್ಲಿ ನಿತ್ಯವೂ ಎರಡು ಸಾವಿರ ರೂಪಾಯಿ ಗಳಿಸುತ್ತಿದ್ದ ನಿಜಾಮುದ್ದೀನ್ ಅವರಿಗೆ ಇದೀಗ ಅದರ ಅರ್ಧ ಭಾಗದಷ್ಟು ಆದಾಯ ಮಾಸ್ಕ್​ನಿಂದ ಬರತೊಡಗಿದೆ.

ಸದ್ಯಕ್ಕೆ ಮನೆಯನ್ನು ನಡೆಸುವಷ್ಟು ಆದಾಯದಿಂದಾಗಿ ಮತ್ತೆ ನೆಮ್ಮದಿ ಕಂಡುಕೊಂಡಿದ್ದಾರೆ. ಕೊಂಚ ಜಾಣತನದೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಹೇಗೆ ಬದುಕನ್ನು ರೂಪಿಸಿಕೊಳ್ಳಬಹುದು ಅನ್ನೋದಕ್ಕೆ ಈ ನಿಜಾಮುದ್ದೀನ್ ಅವರೇ ಸಾಕ್ಷಿ. -ನರಸಿಂಹಮೂರ್ತಿ ಪ್ಯಾಟಿ

ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
ಖರ್ಗೆ ಗದರಿದ ಬಳಿಕ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಂತಿದೆ: ವಿಜಯೇಂದ್ರ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
17 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ಪಟ್ನಾಯಕ್, ರಮ್ಯಾಗೆ ಆಹ್ವಾನ
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್
ಜಾತಿಗಣತಿಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರವನ್ನು ಆಗ್ರಹಿಸುತಿತ್ತು: ಶಿವಕುಮಾರ್