AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಫೋಟೋ, ವಿಡಿಯೋ ದಾಖಲೆ ಸಹಿತ ಕೋರ್ಟ್‌ಗೆ ತೆರಳಿದ ತಹಶೀಲ್ದಾರ್

ದಾವಣಗೆರೆ: ನಿನ್ನೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ವಿವಾಹಕ್ಕೆ ಗಣ್ಯಾತಿಗಣ್ಯರು, ರಾಜಕಾರಣಿಗಳು ಭಾಗವಹಿಸಿದ್ದರು. ಈ ವೇಳೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. 50 ಜನರ ಬದಲಿಗೆ ಸಾವಿರಾರು ಜನ ಮದುವೆಯಲ್ಲಿ ಭಾಗಿಯಾಗಿದ್ರು. ಸಾಮಾಜಿಕ ಅಂತರ, ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಹೀಗಾಗಿ ಹರಪನಹಳ್ಳಿ ತಹಶೀಲ್ದಾರ್ ನಾಗವೇಣಿ ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಕೇಸ್ ದಾಖಲಾಗಿದೆ ಎಂದೂ ಭಾವಿಸಲಾಗಿತ್ತು. ಆದ್ರೆ ಅಸಮರ್ಪಕ ದೂರು ಹಿನ್ನೆಲೆಯಲ್ಲಿ ಪೊಲೀಸರು […]

ಮದುವೆ ಫೋಟೋ, ವಿಡಿಯೋ ದಾಖಲೆ ಸಹಿತ ಕೋರ್ಟ್‌ಗೆ ತೆರಳಿದ ತಹಶೀಲ್ದಾರ್
ಆಯೇಷಾ ಬಾನು
|

Updated on:Jun 17, 2020 | 1:41 PM

Share

ದಾವಣಗೆರೆ: ನಿನ್ನೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ವಿವಾಹಕ್ಕೆ ಗಣ್ಯಾತಿಗಣ್ಯರು, ರಾಜಕಾರಣಿಗಳು ಭಾಗವಹಿಸಿದ್ದರು. ಈ ವೇಳೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು.

50 ಜನರ ಬದಲಿಗೆ ಸಾವಿರಾರು ಜನ ಮದುವೆಯಲ್ಲಿ ಭಾಗಿಯಾಗಿದ್ರು. ಸಾಮಾಜಿಕ ಅಂತರ, ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಹೀಗಾಗಿ ಹರಪನಹಳ್ಳಿ ತಹಶೀಲ್ದಾರ್ ನಾಗವೇಣಿ ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಕೇಸ್ ದಾಖಲಾಗಿದೆ ಎಂದೂ ಭಾವಿಸಲಾಗಿತ್ತು. ಆದ್ರೆ ಅಸಮರ್ಪಕ ದೂರು ಹಿನ್ನೆಲೆಯಲ್ಲಿ ಪೊಲೀಸರು FIR ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಮದುವೆಯ ಭಾವಚಿತ್ರ, ವಿಡಿಯೋ ದಾಖಲೆ ಸಹಿತ ದೂರು ಸಲ್ಲಿಸಲು ತಹಶೀಲ್ದಾರ್ ಇದೀಗ ಕೋರ್ಟ್‌ಗೆ ತೆರಳಿದ್ದಾರೆ.

Published On - 10:49 am, Tue, 16 June 20