AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡ್ರೀ DC, ಸಿಎಂ ಆಫೀಸಲ್ಲಿ ಸೈನ್ ಆದ್ರೆ ಬೆಳಿಗ್ಗೆಗೇ ಕಾಪಿ ತರಿಸ್ಕೊಳ್ತೀನಿ: ಇದು ರೇವಣ್ಣ ಕೆಪಾಸಿಟಿ!

ಹಾಸನ: ಮಾಜಿ ಸಚಿವ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಹೆಚ್ ಡಿ ರೇವಣ್ಣ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ‌ಸರ್ಕಾರಿ ಕೆಲಸಗಳಲ್ಲಿ ವಿಳಂಬ ಆಗುತ್ತಿದೆ ಎಂದು ಆರೋಪಿಸಿ, ಹೊಳೆನರಸೀಪುರ ಪುರಸಭೆ ಸದಸ್ಯರ ಜೊತೆ ಡಿಸಿ ಕಚೇರಿ ಎದುರು ಅವರು ಧರಣಿಗೆ ನಿರ್ಧರಿಸಿದ್ದಾರೆ. ಸದಸ್ಯರಿಗೂ ಮೊದಲೇ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಾರಿನಲ್ಲಿ ಕುಳಿತಿದ್ದರು. ಮಾಜಿ ಸಚಿವ ರೇವಣ್ಣ ಕಾರಿನಲ್ಲಿರೊ ಬಗ್ಗೆ ಮಾಹಿತಿ ಪಡೆದು, ಹೊರಗೆ ಬಂದ ಡಿಸಿ ಒಳಗೆ ಬನ್ನಿ […]

ನೋಡ್ರೀ DC, ಸಿಎಂ ಆಫೀಸಲ್ಲಿ ಸೈನ್ ಆದ್ರೆ ಬೆಳಿಗ್ಗೆಗೇ ಕಾಪಿ ತರಿಸ್ಕೊಳ್ತೀನಿ: ಇದು ರೇವಣ್ಣ ಕೆಪಾಸಿಟಿ!
ಸಾಧು ಶ್ರೀನಾಥ್​
|

Updated on:Dec 23, 2019 | 2:03 PM

Share

ಹಾಸನ: ಮಾಜಿ ಸಚಿವ, ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಹೆಚ್ ಡಿ ರೇವಣ್ಣ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ‌ಸರ್ಕಾರಿ ಕೆಲಸಗಳಲ್ಲಿ ವಿಳಂಬ ಆಗುತ್ತಿದೆ ಎಂದು ಆರೋಪಿಸಿ, ಹೊಳೆನರಸೀಪುರ ಪುರಸಭೆ ಸದಸ್ಯರ ಜೊತೆ ಡಿಸಿ ಕಚೇರಿ ಎದುರು ಅವರು ಧರಣಿಗೆ ನಿರ್ಧರಿಸಿದ್ದಾರೆ.

ಸದಸ್ಯರಿಗೂ ಮೊದಲೇ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಕಾರಿನಲ್ಲಿ ಕುಳಿತಿದ್ದರು. ಮಾಜಿ ಸಚಿವ ರೇವಣ್ಣ ಕಾರಿನಲ್ಲಿರೊ ಬಗ್ಗೆ ಮಾಹಿತಿ ಪಡೆದು, ಹೊರಗೆ ಬಂದ ಡಿಸಿ ಒಳಗೆ ಬನ್ನಿ ಸರ್ ಎಂದ್ರೂ ರೇವಣ್ಣ ಬಾರದೆ ಹೊರಗೇ ಧರಣಿ ಕೂರ್ತೀನಿ ಎಂದಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಡಿಸಿಗೆ ವಿವರಿಸುತ್ತಾ ರೇವಣ್ಣ ಹೊರಗೇ ನಿಂತಿದ್ದಾರೆ.

ನೋಡ್ರೀ ಗಿರೀಶ್ (DC), ಸಿಎಂ ಆಫೀಸಲ್ಲಿ ಸೈನ್ ಆದ್ರೆ ಬೆಳಿಗ್ಗೆ ನಂಗೊಂದ್ ಕಾಪಿ ತರಿಸಿಕೊಳ್ತೀನಿ. ಅಷ್ಟು ಶಕ್ತಿ ಇಟ್ಟುಕೊಂಡಿರೊ ನಾಯಕ ನಾನು. ಇಂತಹವೆಲ್ಲಾ ನೋಡಿಬಿಟ್ಟಿರೋನು ನಾನು. ಸಿದ್ದರಾಮಯ್ಯರೂ ವಿಪಕ್ಷ ನಾಯಕ, ನಾನೂ ವಿಪಕ್ಷ ನಾಯಕನಾಗಿದ್ದವನೇ ಎಂದು DC ಆಫೀಸ್ ಎದುರು ಪ್ರತಿಭಟನೆ ನಡೆಸಿದ ವೇಳೆ ಡಿಸಿಗೆ ರೇವಣ್ಣ ಆವಾಜ್​ ಹಾಕಿದ್ದಾರೆ. ನಾನು ಕಾನೂನು ಬಿಟ್ಟು ಬೇರೆ ಏನೂ ಮಾಡಲ್ಲ ಎಂದೂ ಡಿಸಿ ಬಗ್ಗೆ ರೇವಣ್ಣ ಗರಂ ಆದರು.

Published On - 11:10 am, Mon, 23 December 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More