AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ, ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಲೂಟಿ!

ಬೆಂಗಳೂರು: ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಕೊರೊನಾ ಹೆಸರಲ್ಲಿ ಆರೋಗ್ಯ ಇಲಾಖೆಯಲ್ಲಿ ಕೋಟಿ ಕೋಟಿ ಗುಳುಂ ಆಗ್ತಿದೆ. ಟಿವಿ9ನಲ್ಲಿ ದಾಖಲೆಗಳ ಸಮೇತ ಆರೋಗ್ಯ ಇಲಾಖೆ ಕರ್ಮಕಾಂಡ ಬಯಲು ಮಾಡಲಾಗಿದೆ. ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಿಂದ ಭ್ರಷ್ಟಾಚಾರವಾಗುತ್ತಿದೆಯಂತೆ. ಕೋಟಿ ಕೋಟಿ ಕೊಟ್ಟು ಕೆಡಿಎಲ್‌ಡಬ್ಲ್ಯೂಎಸ್‌ನಿಂದ ಸ್ಯಾನಿಟೈಸರ್ ಖರೀದಿ ಮಾಡಲಾಗುತ್ತಿದೆ. KDLWS-ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿ 21 ಕೋಟಿ 40 ಲಕ್ಷದ 80 ಸಾವಿರದ 352 ರೂ. ಮೌಲ್ಯದ […]

ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ, ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಲೂಟಿ!
ಆಯೇಷಾ ಬಾನು
| Edited By: |

Updated on: Aug 27, 2020 | 10:11 AM

Share

ಬೆಂಗಳೂರು: ಆರೋಗ್ಯ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಕೊರೊನಾ ಹೆಸರಲ್ಲಿ ಆರೋಗ್ಯ ಇಲಾಖೆಯಲ್ಲಿ ಕೋಟಿ ಕೋಟಿ ಗುಳುಂ ಆಗ್ತಿದೆ. ಟಿವಿ9ನಲ್ಲಿ ದಾಖಲೆಗಳ ಸಮೇತ ಆರೋಗ್ಯ ಇಲಾಖೆ ಕರ್ಮಕಾಂಡ ಬಯಲು ಮಾಡಲಾಗಿದೆ.

ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಿಂದ ಭ್ರಷ್ಟಾಚಾರವಾಗುತ್ತಿದೆಯಂತೆ. ಕೋಟಿ ಕೋಟಿ ಕೊಟ್ಟು ಕೆಡಿಎಲ್‌ಡಬ್ಲ್ಯೂಎಸ್‌ನಿಂದ ಸ್ಯಾನಿಟೈಸರ್ ಖರೀದಿ ಮಾಡಲಾಗುತ್ತಿದೆ. KDLWS-ಕರ್ನಾಟಕ ರಾಜ್ಯ ಡ್ರಗ್ಸ್ & ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿ 21 ಕೋಟಿ 40 ಲಕ್ಷದ 80 ಸಾವಿರದ 352 ರೂ. ಮೌಲ್ಯದ ಸ್ಯಾನಿಟೈಸರ್ ಖರೀದಿ ಮಾಡಿದೆ.

ಇದರಲ್ಲಿ 13 ಕೋಟಿ 6 ಲಕ್ಷದ 40 ಸಾವಿರದ 394 ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಸುಮಾರು ಐದು ಕಂಪನಿಗಳೊಂದಿಗೆ ಕೆಡಿಎಲ್‌ಡಬ್ಲ್ಯೂಎಸ್‌ ಸ್ಯಾನಿಟೈಸರ್ ಡೀಲ್ ಮಾಡಿತ್ತು. ಕೇವಲ 500 ML ಸ್ಯಾನಿಟೈಸರ್‌ಗೆ ₹250 ರೂಪಾಯಿ ಕೊಟ್ಟು ಖರೀದಿ ಮಾಡಿದೆ.

ಹೆಚ್ಚು ದರ ನಿಗದಿಯಾಗಿದ್ದಲ್ಲೇ ಖರೀದಿ: ಪ್ರತಿ 500 ML ಸ್ಯಾನಿಟೈಸರ್‌ಗೆ 152 ರೂಪಾಯಿ 56 ಪೈಸೆ ಹೆಚ್ಚುವರಿಯಾಗಿ ಪಾವತಿ ಮಾಡಲಾಗಿದೆ. ಕ್ವಾಂಟಿಟಿ ಹೆಚ್ಚಾಗಿ ತೆಗೆದುಕೊಂಡ್ರೆ ದರ ಕಡಿಮೆಯಾಗುತ್ತೆ. ಆದ್ರೆ ಕೆಡಿಎಲ್‌ಡಬ್ಲ್ಯೂಎಸ್‌ ಅದ್ಯಾವುದನ್ನು ಲೆಕ್ಕಿಸದೇ ಖರೀದಿ ಮಾಡಿದೆ.

ಎಸ್.ಎಂ. ಫಾರ್ಮಾ ಟೆಂಡರ್‌ನಲ್ಲಿ ಕಡಿಮೆ ದರಕ್ಕೆ ಸ್ಯಾನಿಟೈಸರ್‌ ಪೂರೈಸಲು ಬಿಡ್ ಮಾಡಿದೆ. ಕಂಪನಿ 500 ML ಸ್ಯಾನಿಟೈಸರ್‌ಗೆ 97 ರೂಪಾಯಿ 44 ಪೈಸೆಗೆ ಸಪ್ಲೈ ಮಾಡ್ತಿತ್ತು. ನಂತರ ಎಸ್.ಎಂ. ಫಾರ್ಮಾ ಸ್ಯಾನಿಟೈಸರ್ ದರ ಹೆಚ್ಚಾಗಿದೆ ಎಂದು ಅರ್ಧಕ್ಕೆ ಸಪ್ಲೈ ನಿಲ್ಲಿಸಿತ್ತು.

ಟೆಂಡರ್‌ನಲ್ಲಿ ಎಲ್-1 ಆಗಿದ್ದ ಎಸ್.ಎಂ. ಫಾರ್ಮಾ. ಸ್ಯಾನಿಟೈಸರ್ ಪೂರೈಕೆ ನಿಲ್ಲಿಸಿದ್ರೂ ಕೆಡಿಎಲ್‌ಡಬ್ಲ್ಯೂಎಸ್‌ ಅಧಿಕಾರಿಗಳು ಕಂಪನಿ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಪುನಃ ಅದೇ ಕಂಪನಿಯಿಂದ 500ML ಸ್ಯಾನಿಟೈಸರ್‌ಗೆ ₹250 ಕೊಟ್ಟು ಖರೀದಿ ಮಾಡಿದ್ದಾರೆ. 500MLಗೆ 97 ರೂಪಾಯಿ 44 ಪೈಸೆ ಬದಲು ₹250 ಕೊಟ್ಟು ಖರೀದಿ ಮಾಡಿದ್ದಾರೆ. ಎಸ್.ಎಂ. ಫಾರ್ಮಾದಲ್ಲಿ ಸ್ಯಾನಿಟೈಸರ್‌ ದುಬಾರಿಯಾದ್ರು ತಲೆಕೆಡಿಸಿಕೊಂಡಿಲ್ಲ.

ಕೆಡಿಎಲ್‌ಡಬ್ಲ್ಯೂಎಸ್‌ ಟೆಂಡರ್‌ನಲ್ಲಿ ಎಲ್-2 ಆಗಿದ್ದ ರಮಣ & ವೈಲ್ ಕಂಪನಿಗೆ ಸ್ಯಾನಿಟೈಸರ್‌ ಆರ್ಡರ್ ನೀಡಿಲ್ಲ. ಈ ಕಂಪನಿಯಲ್ಲಿ 500ML ಸ್ಯಾನಿಟೈಸರ್‌ಗೆ ಕೇವಲ 99 ರೂಪಾಯಿ ದರವಿದ್ರೂ ಆರ್ಡರ್ ನೀಡಿಲ್ಲ. ತಮಗೆ ಬೇಕಾದ ಕಂಪನಿಯಿಂದ ಸ್ಯಾನಿಟೈಸರ್‌ ತರಿಸಿಕೊಳ್ಳುತ್ತಿದೆ. 9 ದಿನಗಳ ಮುಂಚೆ ಲೈಸೆನ್ಸ್ ಪಡೆದಿದ್ದ ಕಂಪನಿಗೆ ಸ್ಯಾನಿಟೈಸರ್‌ಗಾಗಿ ಆರ್ಡರ್ ನೀಡಲಾಗುತ್ತಿದೆ. ಹೈದರಾಬಾದ್ ಮೂಲದ ಸ್ಪೇ ಅಗ್ರೋ ಕಂಪನಿಗೆ ಕೆಡಿಎಲ್‌ಡಬ್ಲ್ಯೂಎಸ್‌ ಸಪ್ಲೈ ನೀಡಿಲ್ಲ. 3 ವರ್ಷಗಳ ಅನುಭವವೂ ಇಲ್ಲದ ಕಂಪನಿಗೆ ಆರ್ಡರ್ ನೀಡಿದೆ.

ಸರ್ಕಾರದ ಬೊಕ್ಕಸಕ್ಕೆ 11 ಕೋಟಿ ನಷ್ಟ: ಎಸ್‌.ಎಂ ಫಾರ್ಮಾದಲ್ಲಿ 500ML ಸ್ಯಾನಿಟೈಸರ್‌ಗೆ 250 ರೂಪಾಯಿ. 5 ಲೀಟರ್‌ನ 1 ಕ್ಯಾನ್‌ಗೆ ₹2500 ನೀಡಿ ಸ್ಯಾನಿಟೈಸರ್‌ ಖರೀದಿ. ಕೆಡಿಎಲ್‌ಡಬ್ಲ್ಯೂಎಸ್‌ 5 ಲೀಟರ್‌ನ 75 ಸಾವಿರ ಕ್ಯಾನ್ ಖರೀದಿಸಿದೆ. 18 ಕೋಟಿ 75 ಲಕ್ಷ ರೂಪಾಯಿ ನೀಡಿ ಸ್ಯಾನಿಟೈಸರ್ ಖರೀದಿ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 11 ಕೋಟಿ ರೂಪಾಯಿ ನಷ್ಟವಾಗಿದೆ.

ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು