ಆರೋಗ್ಯ ಇಲಾಖೆ ಎಡವಟ್ಟು: ಡಿಸ್ಚಾರ್ಜ್ ಆದ ವ್ಯಕ್ತಿಯ ಮನೆ ಸೀಲ್​​ಡೌನ್

ಧಾರವಾಡ: ಕೊರೊನಾ ವಿಷಯದಲ್ಲಿ ಪದೇ ಪದೇ ಎಡವುತ್ತಿರೋ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದಾರೆ. ಸೋಂಕಿತನೊಬ್ಬ ಗುಣಮುಖನಾಗಿ ಡಿಸ್ಚಾರ್ಜ್ ಆದ ಬಳಿಕ ಅವನ ಮನೆ ಸೀಲ್​​ಡೌನ್ ಮಾಡಿರುವ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಜುಲೈ 25ರಂದು 32 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಧಾರವಾಡದ ಬಿಸಿಎಂ ಹಾಸ್ಟೆಲ್​ನಲ್ಲಿ ಸೋಂಕಿತ  ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 3ರಂದು ಕೊರೊನಾದಿಂದ ಗುಣಮುಖನಾಗಿ ಡಿಸ್ಚಾರ್ಜ್ ಸಹ ಆದ್ರು. ಆದರೆ ಇಂದು ಆರೋಗ್ಯ ಅಧಿಕಾರಿಗಳು ಈತನ ಮನೆ […]

ಆರೋಗ್ಯ ಇಲಾಖೆ ಎಡವಟ್ಟು: ಡಿಸ್ಚಾರ್ಜ್ ಆದ ವ್ಯಕ್ತಿಯ ಮನೆ ಸೀಲ್​​ಡೌನ್

Updated on: Aug 04, 2020 | 2:18 PM

ಧಾರವಾಡ: ಕೊರೊನಾ ವಿಷಯದಲ್ಲಿ ಪದೇ ಪದೇ ಎಡವುತ್ತಿರೋ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದಾರೆ. ಸೋಂಕಿತನೊಬ್ಬ ಗುಣಮುಖನಾಗಿ ಡಿಸ್ಚಾರ್ಜ್ ಆದ ಬಳಿಕ ಅವನ ಮನೆ ಸೀಲ್​​ಡೌನ್ ಮಾಡಿರುವ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಜುಲೈ 25ರಂದು 32 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಧಾರವಾಡದ ಬಿಸಿಎಂ ಹಾಸ್ಟೆಲ್​ನಲ್ಲಿ ಸೋಂಕಿತ  ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 3ರಂದು ಕೊರೊನಾದಿಂದ ಗುಣಮುಖನಾಗಿ ಡಿಸ್ಚಾರ್ಜ್ ಸಹ ಆದ್ರು. ಆದರೆ ಇಂದು ಆರೋಗ್ಯ ಅಧಿಕಾರಿಗಳು ಈತನ ಮನೆ ಸೀಲ್​ಡೌನ್ ಮಾಡಿದ್ದಾರೆ.

ಹಾಗಾಗಿ, ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರೈನ್ ಹೋದ ಮೇಲೆ ಟಿಕೆಟ್ ತಗೊಂಡ್ರೂ ಎಂಬಂತೆ. ಸೋಂಕಿನಿಂದ ಗುಣಮುಖರಾದ ಬಳಿಕ ಮನೆ ಸೀಲ್​ಡೌನ್ ಮಾಡಲು ಅದೀಕಾರಿಗಳು ಬಂದಿದ್ದು ನಿಜಕ್ಕೂ ವಿಪರ್ಯಾಸ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
Follow Us