AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆ ನಾಡಿನಲ್ಲಿ ಹೊರಬೀಡು ಆಚರಣೆ: ಇಡೀ ಊರಿಗೆ ಊರೇ ಖಾಲಿ!

ಚಿತ್ರದುರ್ಗ: ಗ್ರಾಮೀಣ ಭಾಗದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಉತ್ಸವಗಳು ನಡೆಯುವುದು, ಊರ ಉತ್ಸವಕ್ಕಾಗಿ ತೋರಣ ಕಟ್ಟಿ ಸಿಂಗಾರ ಮಾಡುವುದು ಸಹಜ. ಆದ್ರೆ, ಆ ಗ್ರಾಮದಲ್ಲಿ ಮಾತ್ರ ಜಾತ್ರೆಯ ದಿನ ಊರಿನಲ್ಲಿ ಜನರೇ ಇರೋದಿಲ್ಲ. ಇಡೀ ಊರೇ ಬೀಕೋ ಅಂತಿರುತ್ತೆ. ಅಷ್ಟಕ್ಕೂ ಏನಿದು ವಿಶಿಷ್ಟ ಆಚರಣೆ ಅನ್ನೋದು ಇಲ್ಲಿದೆ. ಒಂದೇ ಒಂದು ಮನೆ ಬಾಗಿಲು ತೆರೆದಿಲ್ಲ. ಇಡೀ ಊರಿನಲ್ಲಿ ಒಬ್ಬೇ ಒಬ್ರು ಕಣ್ಣಿಗೆ ಕಾಣ್ತಿಲ್ಲ. ಪ್ರತೀ ಮನೆಗೂ ಬೀಗ ಹಾಕಿದ್ರೆ, ಊರ ಸುತ್ತಾ ಬೇಲಿ ಹಾಕಿದ್ದಾರೆ. ಗಮನ ಸೆಳೆಯುತ್ತಿದೆ ಕೋಟೆನಾಡಿನ ‘ಹೊರಬೀಡು’  […]

ಕೋಟೆ ನಾಡಿನಲ್ಲಿ ಹೊರಬೀಡು ಆಚರಣೆ: ಇಡೀ ಊರಿಗೆ ಊರೇ ಖಾಲಿ!
ಸಾಧು ಶ್ರೀನಾಥ್​
|

Updated on: Jan 21, 2020 | 12:19 PM

Share

ಚಿತ್ರದುರ್ಗ: ಗ್ರಾಮೀಣ ಭಾಗದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಉತ್ಸವಗಳು ನಡೆಯುವುದು, ಊರ ಉತ್ಸವಕ್ಕಾಗಿ ತೋರಣ ಕಟ್ಟಿ ಸಿಂಗಾರ ಮಾಡುವುದು ಸಹಜ. ಆದ್ರೆ, ಆ ಗ್ರಾಮದಲ್ಲಿ ಮಾತ್ರ ಜಾತ್ರೆಯ ದಿನ ಊರಿನಲ್ಲಿ ಜನರೇ ಇರೋದಿಲ್ಲ. ಇಡೀ ಊರೇ ಬೀಕೋ ಅಂತಿರುತ್ತೆ. ಅಷ್ಟಕ್ಕೂ ಏನಿದು ವಿಶಿಷ್ಟ ಆಚರಣೆ ಅನ್ನೋದು ಇಲ್ಲಿದೆ. ಒಂದೇ ಒಂದು ಮನೆ ಬಾಗಿಲು ತೆರೆದಿಲ್ಲ. ಇಡೀ ಊರಿನಲ್ಲಿ ಒಬ್ಬೇ ಒಬ್ರು ಕಣ್ಣಿಗೆ ಕಾಣ್ತಿಲ್ಲ. ಪ್ರತೀ ಮನೆಗೂ ಬೀಗ ಹಾಕಿದ್ರೆ, ಊರ ಸುತ್ತಾ ಬೇಲಿ ಹಾಕಿದ್ದಾರೆ.

ಗಮನ ಸೆಳೆಯುತ್ತಿದೆ ಕೋಟೆನಾಡಿನ ‘ಹೊರಬೀಡು’  ಕೋಟೆನಾಡು ಚಿತ್ರದುರ್ಗದಲ್ಲಿ ಒಂದಿಲ್ಲೊಂದು ವಿಶೇಷ ಹಬ್ಬಗಳ ಆಚರಣೆ ನಡೆಯುತ್ತೆ. ಇಂದಿಗೂ ಇಲ್ಲಿ ಹಲವು ಸಂಸ್ಕೃತಿಗಳು ಜೀವಂತವಾಗಿವೆ. ಇವುಗಳ ಸಾಲಿನಲ್ಲಿ ಕಾಣೋದೆ ಹೊರಬೀಡು ಆಚರಣೆ. ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗೊಲ್ಲರಹಟ್ಟಿಯಲ್ಲಿ ವರ್ಷಕ್ಕೊಮ್ಮೆ ಬಾಲ ರಂಗನಾಥ ಸ್ವಾಮಿ ಜಾತ್ರೆ ನಡೆಯುತ್ತೆ. ಆದ್ರೆ, ಊರ ಉತ್ಸವಕ್ಕೂ ಮುನ್ನ ‘ಹೊರಬೀಡು’ ಆಚರಣೆ ಆಚರಿಸಲಾಗುತ್ತೆ. ಸೂರ್ಯೋದಯದ ವೇಳೆಗೆ ಇಡೀ ಊರ ಜನ ತಮ್ಮ ಜಾನುವಾರುಗಳ ಸಮೇತ ನಿತ್ಯ ಉಪಯೋಗಿ ವಸ್ತುಗಳೊಂದಿಗೆ ಊರು ತೊರೆಯುತ್ತಾರೆ. ಇಡೀ ಗ್ರಾಮಕ್ಕೆ ಮುಳ್ಳು ಬೇಲಿ ಹಾಕಿ ಊರ ಹೊರ ಭಾಗದ ತೋಟ, ಜಮೀನುಗಳಲ್ಲಿ ಸೇರುತ್ತಾರೆ. ಇದನ್ನೇ ಹೊರಬೀಡು ಆಚರಣೆ ಅಂತಾರೆ.

ಸೂರ್ಯಾಸ್ತದವರೆಗೆ ಜಮೀನುಗಳಲ್ಲೇ ಕಾಲ ಕಳೆಯುತ್ತಾರೆ: ಇನ್ನು ಬೆಳಗ್ಗೆ ಸೂರ್ಯೋದಯದ ವೇಳೆಗೆ ಊರು ತೊರೆದವರು ಸಂಜೆ ಸೂರ್ಯಾಸ್ತದವರೆಗೆ ತೋಟ ಜಮೀನುಗಳಲ್ಲೇ ಕಾಲ ಕಳೆಯುತ್ತಾರೆ. ಈ ವೇಳೆ ತಮ್ಮಿಷ್ಟದ ತಿಂಡಿ ತಿನಿಸುಗಳನ್ನು ತಯಾರಿಸಿ ಕುಟುಂಬದೊಂದಿಗೆ ಊಟ ಮಾಡಿ ಖುಷಿ ಪಡ್ತಾರೆ. ಸಂಜೆ ವೇಳೆಗೆ ಗೋಮಾತೆಯೊಂದಿಗೆ ಗ್ರಾಮ ಪ್ರವೇಶಿಸುತ್ತಾರೆ. ಈ ಆಚರಣೆಯಿಂದ ಗ್ರಾಮಕ್ಕೆ ಒಳಿತಾಗಿ ಮಳೆ ಬೆಳೆ ಸಮೃದ್ಧವಾಗಿ ಆಗುತ್ತೆ ಅನ್ನೋದು ಜನರ ನಂಬಿಕೆ. ಒಟ್ನಲ್ಲಿ ವರ್ಷಕ್ಕೊಮ್ಮೆ ಇಡೀ ಊರ ಜನರೇ ಗ್ರಾಮ ತೊರೆಯೋ ಮೂಲಕ ಹೊರಬೀಡು ಆಚರಣೆ ಮಾಡುತ್ತಾರೆ. ಆಧುನಿಕತೆಯ ನಡುವೆಯೂ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನ ಉಳಿಸಿಕೊಂಡು ಬರ್ತಿದ್ದಾರೆ.

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?