AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ

ಫೋನ್​ಪೇದಲ್ಲಿ ಪ್ರಾಥಮಿಕ (ಪ್ರೈಮರಿ) ಖಾತೆಯನ್ನು ಬದಲಿಸುವುದು ಹೇಗೆ ಎಂಬುದನ್ನು ಆರು ಹಂತಗಳಲ್ಲಿ ವಿವರಿಸಲಾಗಿದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್​ಗಳು ಫೋನ್​ಪೇಗೆ ಜೋಡಣೆ ಆಗಿದ್ದಲ್ಲಿ ಪ್ರೈಮರಿ ಖಾತೆ ಬಹಳ ಮುಖ್ಯ ಎಂಬುದು ನೆನಪಿನಲ್ಲಿರಲಿ.

PhonePe Primary Account: ಫೋನ್​ಪೇ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಾವಣೆ 6 ಹಂತಗಳಲ್ಲಿ ಮಾಡುವುದು ಹೇಗೆ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Mar 17, 2021 | 12:01 PM

Share

ಫೋನ್​ಪೇ ಅಪ್ಲಿಕೇಷನ್ ಅನ್ನು ನೀವು ಬಳಸುತ್ತಿದ್ದಲ್ಲಿ ಅದೆಂಥ ಆ್ಯಪ್ ಅಂತ ಈಗಾಗಲೇ ಗೊತ್ತಾಗಿರುತ್ತದೆ. ಯಾರಿಗೆ ಗೊತ್ತಿಲ್ಲವೋ ಅಂಥವರಿಗೆ ಕಿರು ಪರಿಚಯ ಮಾಡಿಕೊಟ್ಟು, ಈ ಲೇಖನದ ಉದ್ದೇಶವನ್ನು ತಿಳಿಸಿಕೊಡ್ತೇವೆ. ಫೋನ್​ಪೇ ಎಂಬುದು ಯುಪಿಐ ಆಧಾರಿತ ಪ್ಲಾಟ್​ಫಾರ್ಮ್. ಎನ್​ಕ್ರಿಪ್ಟ್ ಆದ ಸಾಫ್ಟ್​ವೇರ್ ಮೂಲಕ ತುಂಬ ಸುರಕ್ಷಿತವಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಸ್ಮಾರ್ಟ್​​ಫೋನ್​ಗೆ ಜೋಡಣೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಆ ನಂತರ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಯಾರಿಗಾದರೂ ವರ್ಗಾವಣೆ ಮಾಡಬಹುದಾಗಿರುತ್ತದೆ. ಫೋನ್​ಪೇದಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಬಹುದಾದರೂ ಒಂದು ಬ್ಯಾಂಕ್ ಖಾತೆಯನ್ನು ಪ್ರಾಥಮಿಕ ಖಾತೆ (ಪ್ರೈಮರಿ ಅಕೌಂಟ್) ಎಂದು ಆರಿಸಬೇಕಾಗುತ್ತದೆ.

ಹಾಗೆ ಪ್ರಾಥಮಿಕ ಖಾತೆ ಎಂದು ಆರಿಸಿಕೊಂಡಿದ್ದರಿಂದಲೇ ಫೋನ್​ಪೇದಿಂದ ಹಣವು ತಾನಾಗಿಯೇ ವರ್ಗಾವಣೆ ಹಾಗೂ ಸ್ವೀಕಾರ ಆಗುತ್ತದೆ. ಒಂದು ವೇಳೆ ಫೋನ್​ಪೇ ಜತೆ ಒಂದೇ ಖಾತೆ ಜೋಡಣೆ ಆಗಿದ್ದಲ್ಲಿ ಅದೇ ಪ್ರಾಥಮಿಕ ಖಾತೆ ಎಂದಾಗುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಜೋಡಣೆ ಮಾಡಿದ್ದಲ್ಲಿ ಯಾವುದು ಪ್ರಾಥಮಿಕ ಖಾತೆ ಎಂದು ಆಯ್ಕೆ ಮಾಡಬೇಕಾಗುತ್ತದೆ. ಒಂದು ಸಂಗತಿ ನೆನಪಿನಲ್ಲಿರಬೇಕು, ಫೋನ್​ಪೇದಲ್ಲಿ ಯಾವುದು ಪ್ರಾಥಮಿಕ ಖಾತೆ ಆಗಿರುತ್ತದೋ BHIM UPI ID ಜತೆ ಸೇರಿಕೊಂಡಿರುವ ಬ್ಯಾಂಕ್ ಖಾತೆ ಅದೇ ಆಗಿರುತ್ತದೆ.

ಈಗ ಈ ಲೇಖನದ ಮುಖ್ಯ ವಿಷಯಕ್ಕೆ ಬರುವುದಾದರೆ, ಫೋನ್​ಪೇದಲ್ಲಿ ಪ್ರಾಥಮಿಕ ಖಾತೆ ಬದಲಾವಣೆ ಮಾಡುವುದು ಹೇಗೆ ಎಂದು ಹಂತಹಂತವಾಗಿ ತಿಳಿಸಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಫೋನ್​ಪೇನಲ್ಲಿ My Money> Bank Accounts ಮೂಲಕವಾಗಿ ಪೇಮೆಂಟ್ ವಿಧಾನದ ವಿಭಾಗದಲ್ಲಿ ನಿಮ್ಮ ಪ್ರಾಥಮಿಕ ಖಾತೆ ಯಾವುದು ಎಂದು ತಿಳಿದುಕೊಳ್ಳಬಹುದು. ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆ ಮುಂಭಾಗದಲ್ಲಿ ಹಸಿರು ಬಣ್ಣದ ಟಿಕ್ ಇರುತ್ತದೆ. ನಿಮ್ಮದು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಫೋನ್​ಪೇದಲ್ಲಿ ಜೋಡಣೆ ಆಗಿದ್ದಲ್ಲಿ ಈಗಿರುವ ಬ್ಯಾಂಕ್​ನಿಂದ ಪ್ರಾಥಮಿಕ ಖಾತೆಯನ್ನು ಬದಲಿಸುವ ಹಂತಹಂತದ ವಿಧಾನ ಇಲ್ಲಿದೆ:

ಹಂತ 1: ಮೊದಲಿಗೆ ನಿಮ್ಮ ಸ್ಮಾರ್ಟ್​ಫೋನ್​​ನಲ್ಲಿ ಫೋನ್​ಪೇ ಅಪ್ಲಿಕೇಷನ್ ತೆರೆಯಿರಿ

ಹಂತ 2: ಮುಂದೆ, ಹೋಮ್ ಪೇಜ್​ನಲ್ಲಿ My Money ಎಂಬುದರ ಮೇಲೆ ಕ್ಲಿಕ್ ಮಾಡಿ

ಹಂತ 3: ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ಪಾವತಿ ವಿಧಾನ ವಿಭಾಗದಲ್ಲಿ Bank Accounts ಆರಿಸಿಕೊಳ್ಳಬೇಕು

ಹಂತ 4: ಬ್ಯಾಂಕ್ ಅಕೌಂಟ್ಸ್ ಪುಟದಲ್ಲಿ ಯಾವ್ಯಾವ ಬ್ಯಾಂಕ್ ಖಾತೆಗಳು ಜೋಡಣೆ ಆಗಿವೆ ಎಂಬುದನ್ನು ನೋಡಬಹುದು

ಹಂತ 5: ಈಗ ಯಾವ ಖಾತೆಯನ್ನು ನಿಮ್ಮ ಪ್ರಾಥಮಿಕ ಖಾತೆಯನ್ನಾಗಿ ಮಾಡಿಕೊಳ್ಳಲು ಬಯಸುತ್ತೀರೋ ಅದರ ಮುಂಭಾಗದಲ್ಲಿನ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಗಮನದಲ್ಲಿರಲಿ: ನಿಮ್ಮ ಪ್ರಾಥಮಿಕ ಬ್ಯಾಂಕ್ ಖಾತೆಯ ಚೆಕ್ ಬಾಕ್ಸ್​ನಲ್ಲಿ ಹಸಿರು ಬಣ್ಣದ ಟಿಕ್ ಗುರುತು ಕಾಣಿಸುತ್ತದೆ.

ಹಂತ 6: ನಿಮ್ಮ ಫೋನ್ ತೆರೆಯ ಮೇಲೆ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ. Yes ಎಂಬುದನ್ನು ಆರಿಸಿಕೊಳ್ಳುವ ಮೂಲಕ ನಿಮ್ಮ ಮನವಿಯನ್ನು ಖಾತ್ರಿಪಡಿಸಿ.

ಇದರೊಂದಿಗೆ ಪ್ರಾಥಮಿಕ ಖಾತೆಯು ಯಶಸ್ವುಯಾಗಿ ಬದಲಾವಣೆ ಆಗಿರುತ್ತದೆ. ಆ ನಂತರದಿಂದ ನಿಮಗೆ ಬರುವ ಹಣ ಹಾಗೂ ನೀವು ಮಾಡುವ ಪಾವತಿ ಆ ಆಯ್ದ ಬ್ಯಾಂಕ್ ಖಾತೆಯ ಮೂಲಕವೇ ಆಗುತ್ತದೆ. ಆದ್ದರಿಂದ ಮೇಲ್ಕಾಣಿಸಿದ ಹಂತಗಳನ್ನು ಅನುಸರಿಸುವ ಮೂಲಕ ನೀವು ಯಾವಾಗ ಬೇಕಾದರೂ ಹಾಗೂ ಎಲ್ಲಿಂದ ಬೇಕಾದರೂ ಫೋನ್​ಪೇದಲ್ಲಿ ಪ್ರಾಥಮಿಕ ಬ್ಯಾಂಕ್ ಖಾತೆ ಬದಲಿಸಿಕೊಳ್ಳಬಹುದು.

ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ