AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Calendar: ಐಎಎಸ್​, ಐಎಫ್​ಎಸ್​ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ

UPSC: ಈ ವರ್ಷ ಮತ್ತೆ ಐಎಎಸ್​ ಪರ್ವ ಆರಂಭವಾಗಿದೆ. ಐಎಎಸ್ ಮತ್ತು ಐಎಫ್​ಎಸ್ ಪರೀಕ್ಷೆಗಳಿಗೆ ಯುಪಿಎಸ್​ಸಿ ಮಾರ್ಚ್​​ 4ರಂದೇ ಅಧಿಸೂಚನೆ ಹೊರಡಿಸಿದೆ. ಈ ವರ್ಷದ ಐಎಎಸ್​ / ಐಎಫ್​ಎಸ್ ಪರೀಕ್ಷೆಗಳ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ..

UPSC Calendar: ಐಎಎಸ್​, ಐಎಫ್​ಎಸ್​ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 24 ಕೊನೆಯ ದಿನ
ಪ್ರಾತಿನಿಧಿಕ ಚಿತ್ರ (Photo credit: Facebook/ IAS association)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 22, 2021 | 4:45 PM

ಕಳೆದ ವರ್ಷ ಕೊರೊನಾ ಸೋಂಕು ಹರಡುವುದಕ್ಕೆ ತಡೆಯೊಡ್ಡಲೆಂದು ಜಾರಿ ಮಾಡಿದ ಲಾಕ್​ಡೌನ್ ಕಾರಣದಿಂದಾಗಿ ಐಎಎಸ್​ ಕನಸು ಹೊತ್ತಿದ್ದ ಆಕಾಂಕ್ಷಿಗಳು ತುಸು ಹಿನ್ನಡೆ ಅನುಭವಿಸುವಂತಾಯಿತು. ಈ ವರ್ಷ ಮತ್ತೆ ಐಎಎಸ್​ ಪರ್ವ ಆರಂಭವಾಗಿದೆ. ಭಾರತೀಯ ಆಡಳಿತ ಸೇವೆ (Indian Administration Service – IAS) ಮತ್ತು ಭಾರತೀಯ ಅರಣ್ಯ ಸೇವೆ (Indian Forest Service – IFS) ಪರೀಕ್ಷೆಗಳಿಗೆ ಯುಪಿಎಸ್​ಸಿ ಮಾರ್ಚ್​​ 4ರಂದೇ ಅಧಿಸೂಚನೆ ಹೊರಡಿಸಿದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್​ 24 ಕೊನೆಯ ದಿನ. ಈ ವರ್ಷದ ಐಎಎಸ್​ / ಐಎಫ್​ಎಸ್ ಪರೀಕ್ಷೆಗಳ ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ..

1) ಆಕಾಂಕ್ಷಿಗಳು ಅರ್ಜಿಯನ್ನು ಯುಪಿಎಸ್​ಸಿ ವೆಬ್​ಸೈಟ್​ https://upsconline.nic.in ಮೂಲಕವೇ ಸಲ್ಲಿಸಬೇಕು. ಐಎಎಸ್​ಗೆ ಅರ್ಜಿ ಸಲ್ಲಿಸುವವರು ಯಾವುದೇ ವಿಶ್ವವಿದ್ಯಾಲಯದ ಪದವಿ (ಡಿಗ್ರಿ) ಪಡೆದಿರಬೇಕು. ಐಎಫ್​ಎಸ್​ಗೆ ಅರ್ಜಿ ಸಲ್ಲಿಸುವವರು ಪಶುಸಂಗೋಪನೆ, ಜೀವಶಾಸ್ತ್ರ, ರಸಾಯನಶಾಸ್ತ್ರ, ಭೂಗರ್ಭಶಾಸ್ತ್ರ, ಗಣಿತ, ಭೌತಶಾಸ್ತ್ರ, ಸಂಖ್ಯಾಶಾಸ್ತ್ರ ಅಥವಾ ಪ್ರಾಣಿಶಾಸ್ತ್ರಗಳ ಪೈಪಿ ಯಾವುದಾದರೂ ಒಂದು ವಿಷಯವನ್ನಾದರೂ ಪದವಿ ಹಂತದಲ್ಲಿ ಓದಿರಬೇಕು.

2) ಅರ್ಜಿ ಸಲ್ಲಿಕೆಯ ವೇಳೆ ಫೋಟೊ ಗುರುತಿನ ಚೀಟಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡಿರಬೇಕು. ಆಧಾರ್ ಕಾರ್ಡ್​, ವೋಟರ್​ ಐಡಿ ಕಾರ್ಡ್​, ಪ್ಯಾನ್​ಕಾರ್ಡ್​, ಪಾಸ್​ಪೋರ್ಟ್​ ಸೇರಿದಂತೆ ಹಲವು ಫೋಟೊ ಗುರುತಿನ ಚೀಟಿಗಳನ್ನು ಈ ಉದ್ದೇಶಕ್ಕೆ ಬಳಸಬಹುದು.

3) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಂತರದ ದಿನಗಳಲ್ಲಿ ಅರ್ಜಿ ಹಿಂಪಡೆಯಬೇಕು ಎಂದು ನಿರ್ಧರಿಸಿದರೆ ಅದಕ್ಕೂ ಅವಕಾಶ ನೀಡಲಾಗುವುದು. ಅರ್ಜಿ ಸಲ್ಲಿಸಲು ಮಾರ್ಚ್ 24, 2021ರ ಸಂಜೆ 6 ಗಂಟೆ ಕೊನೆಯ ದಿನ.

4) ಪರೀಕ್ಷೆಗೆ ಮೂರು ವಾರದ ಮೊದಲು ಇ-ಅಡ್ಮಿಟ್ ಕಾರ್ಡ್​ಗಳನ್ನು ಯುಪಿಎಸ್​ಸಿ ವೆಬ್​ಸೈಟ್ ಮೂಲಕ ಡೌನ್​ಲೋಡ್ ಮಾಡಿಕೊಳ್ಳಬಹುದು. ಯಾವುದೇ ಅಭ್ಯರ್ಥಿಗೆ ಅಂಚೆ ಮೂಲಕ ಪ್ರವೇಶ ಪತ್ರವನ್ನು ಕಳಿಸುವುದಿಲ್ಲ.

5) ಈ ವರ್ಷ ಪರೀಕ್ಷೆಯ ಮೂಲಕ ಸುಮಾರು 712 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಂಗವಿಕಲರಿಗೆ ಮೀಸಲಿರುವ 22 ಹುದ್ದೆಗಳೂ ಇದರಲ್ಲಿ ಸೇರಿದೆ.

6) ಎರಡು ಹಂತಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಬಹುಆಯ್ಕೆ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದರೆ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.

7) ಮುಖ್ಯಪರೀಕ್ಷೆಯಲ್ಲಿ ಬರವಣಿಗೆ ಮತ್ತು ಸಂದರ್ಶನದ ಹಂತಗಳು ಇರುತ್ತವೆ. ಇವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಅಧಿಕಾರಿಗಳ ತರಬೇತಿಗೆ ಆಯ್ಕೆಯಾಗುತ್ತಾರೆ.

8) ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಯು 1ನೇ ಆಗಸ್ಟ್ 2021ಕ್ಕೆ ಕನಿಷ್ಠ 21 ವರ್ಷ, ಗರಿಷ್ಠ 32 ವಯೋಮಿತಿಯಲ್ಲಿರಬೇಕು. ವಯೋಮಿತಿ ವಿನಾಯ್ತಿಯ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

9) ಸಾಮಾನ್ಯ ಅಭ್ಯರ್ಥಿಗಳಿಗೆ 6 ಬಾರಿ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಒಬಿಸಿ ವರ್ಗಕ್ಕೆ 9 ಬಾರಿ ಮತ್ತು ಎಸ್​ಸಿ/ಎಸ್​ಟಿಗೆ ಸೇರಿದವರು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು.

10) ಜೂನ್ 6, 2021ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 17, 2021ರಿಂದ ಐಎಎಸ್​ ಮತ್ತು ನವೆಂಬರ್ 21ರಿಂದ ಐಎಫ್​ಎಸ್​ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆಗಳಿದ್ದರೆ ಯುಪಿಎಸ್​ಸಿ ಅಧಿಸೂಚನೆ ಹೊರಡಿಸಿ ಮಾಹಿತಿ ನೀಡುತ್ತದೆ.UPSC schedule

ಯುಪಿಎಸ್​ಸಿ ವೇಳಾಪಟ್ಟಿ

ಇದನ್ನೂ ಓದಿ: GetCETgo: ಸಿಇಟಿ, ನೀಟ್‌ ಮತ್ತು ಜೆಇಇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋಚಿಂಗ್- ʼಗೆಟ್‌-ಸೆಟ್‌ ಗೋʼ

Published On - 4:41 pm, Mon, 22 March 21

ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ನನಗಿಂತ ಮುಂಚಿನ ಕಮೀಷನರ್​ಗಳೆಲ್ಲ ಉತ್ತಮ ಕೆಲಸ ಮಾಡಿದ್ದರೆ: ಸೀಮಂತ್ ಸಿಂಗ್
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
ಜೀನ್ಸ್​ ಪ್ಯಾಂಟ್​ ಧರಿಸಿದ ಯುವತಿಯರ ಮೇಲೆ ಪಾಕ್​ನಲ್ಲಿ ಹಲ್ಲೆ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
Live: ಬಿಜೆಪಿ, ಜೆಡಿಎಸ್​ ಜಂಟಿ ಸುದ್ದಿಗೋಷ್ಠಿ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
‘ಕ್ವಾಟ್ಲೆ ಕಿಚನ್’ ಆರಂಭಕ್ಕೆ ದಿನಾಂಕ ನಿಗದಿ; ಅಡುಗೆ ಜೊತೆ ನಗುವಿನ ಊಟ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
ಪೊಲೀಸರು ಬೇಡವೆಂದ ಮೇಲೆ ಕಾರ್ಯಕ್ರಮ ನಡೆಸಬಾರದು: ಜ್ಯೋತಿಪ್ರಕಾಶ್ ಮಿರ್ಜಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು