‘ತಿರುಪತಿ ಆಸ್ತಿ ಮಾರಾಟ ಮಾಡಿದ್ರೆ ತಂದೆ ರೀತಿಯಲ್ಲೇ ಜಗನ್ ಸಾವು ಖಚಿತ’

ಧಾರವಾಡ: ತಿರುಪತಿ ದೇವಾಲಯದ ಆಸ್ತಿಯನ್ನು ಮಾರಾಟ ಮಾಡಿದ್ರೆ ತಂದೆಯ ರೀತಿಯಲ್ಲೇ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಾಯುತ್ತಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಜಗನ್ ತಂದೆ ರಾಜಶೇಖರ್ ರೆಡ್ಡಿ ಸಹ ಇದೇ ರೀತಿ ಮಾಡಿದ್ರು. ಹಾಗೆ ಮಾಡಿ ಶಾಪಕ್ಕೆ ಒಳಗಾಗಿದ್ದರು. ಆದ್ರೆ ಅವರ ಸಾವಿನ ರಹಸ್ಯ ಈವರೆಗೂ ಯಾರಿಗೂ ತಿಳಿದಿಲ್ಲ. ಆಂಧ್ರ ಸಿಎಂ ಜಗನ್‌ಗೂ ಅದೇ ಗತಿ ಬರುತ್ತದೆ ಎಂದು ತಿರುಪತಿ ದೇವಾಲಯದ ಆಸ್ತಿ ಮಾರಾಟಕ್ಕೆ ಮುತಾಲಿಕ್ ವಿರೋಧಿಸಿದರು. ಜಗನ್ […]

‘ತಿರುಪತಿ ಆಸ್ತಿ ಮಾರಾಟ ಮಾಡಿದ್ರೆ ತಂದೆ ರೀತಿಯಲ್ಲೇ ಜಗನ್ ಸಾವು ಖಚಿತ’
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: May 27, 2020 | 2:32 PM

ಧಾರವಾಡ: ತಿರುಪತಿ ದೇವಾಲಯದ ಆಸ್ತಿಯನ್ನು ಮಾರಾಟ ಮಾಡಿದ್ರೆ ತಂದೆಯ ರೀತಿಯಲ್ಲೇ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಾಯುತ್ತಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಜಗನ್ ತಂದೆ ರಾಜಶೇಖರ್ ರೆಡ್ಡಿ ಸಹ ಇದೇ ರೀತಿ ಮಾಡಿದ್ರು. ಹಾಗೆ ಮಾಡಿ ಶಾಪಕ್ಕೆ ಒಳಗಾಗಿದ್ದರು. ಆದ್ರೆ ಅವರ ಸಾವಿನ ರಹಸ್ಯ ಈವರೆಗೂ ಯಾರಿಗೂ ತಿಳಿದಿಲ್ಲ. ಆಂಧ್ರ ಸಿಎಂ ಜಗನ್‌ಗೂ ಅದೇ ಗತಿ ಬರುತ್ತದೆ ಎಂದು ತಿರುಪತಿ ದೇವಾಲಯದ ಆಸ್ತಿ ಮಾರಾಟಕ್ಕೆ ಮುತಾಲಿಕ್ ವಿರೋಧಿಸಿದರು.

ಜಗನ್ ಮತಾಂತರ ಹೊಂದಿರುವ ಕ್ರಿಶ್ಚಿಯನ್. ಅವರು ವಕ್ಫ್ ಬೋರ್ಡ್, ಚರ್ಚ್‌ಗಳನ್ನು ಮುಟ್ಟುವುದಿಲ್ಲ. ದೇವಾಲಯಗಳ ಮೇಲಷ್ಟೇ ಅವರ ಕಣ್ಣು. ತಿರುಪತಿ ದೇವಸ್ಥಾನ ಆಂಧ್ರಪ್ರದೇಶದ ಆಸ್ತಿ ಅಲ್ಲ, ಅದು ಇಡೀ ದೇಶದ ಜನರ ಆಸ್ತಿ. ತಿರುಪತಿ ಆಸ್ತಿ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳ ಮೂಲಕ ಆಂಧ್ರಪ್ರದೇಶ ರಾಜ್ಯಪಾಲರಿಗೆ ಮುತಾಲಿಕ್ ಮನವಿ ಸಲ್ಲಿಸಿದರು.

 

Published On - 2:17 pm, Wed, 27 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us