ಇದೂವರೆಗೂ ರಾಸಲೀಲೆಯಲ್ಲಿದ್ದ ಯುವತಿ ನನಗೆ ಅನ್ಯಾಯವಾಗಿದೆ ಎಂದು ಎಲ್ಲೂ ಹೇಳಿಲ್ಲ. ಅವರನ್ನ ನಾನು ಭೇಟಿಯಾಗಿಲ್ಲ. ಒಂದೊಮ್ಮೆ ಯುವತಿ ರಾಸಲೀಲೆ ಮಾಡಿರೋದಕ್ಕೆ ನನ್ನ ಒಪ್ಪಿಗೆ ಇತ್ತು. ಪರಸ್ಪರ ಒಪ್ಪಿಗೆಯಿಂದ ಆಗಿರುವ ಲೈಂಗಿಕ ಕ್ರಿಯೆ ಅಂತಾ ಒಪ್ಪಿಕೊಂಡರೇ.. ಆಗ ನಾನು ನನಗೆ ಮಾಹಿತಿ ನೀಡಿದ ಸಂತ್ರಸ್ತೆಯ ಕುಟುಂಬಸ್ಥರ ವಿರುದ್ಧ ಕಾನೂನು ಹೋರಾಟ ಮಾಡ್ತೇನೆ ಎಂದು ಟಿವಿ9ಗೆ ದಿನೇಶ್ ಕಲ್ಲಹಳ್ಳಿ ಹೇಳಿದ್ದು ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕಾನೂನು ಹೋರಾಟಕ್ಕೆ ಬೇಕಾದ ಸಕಲ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಂತ್ರಸ್ತೆ ಅಥವಾ ಸಂತ್ರಸ್ತೆ ಕುಟುಂಬಸ್ಥರನ್ನ ಮಾಧ್ಯಮಗಳ ಮುಂದೆ ತರಲು ದಿನೇಶ್ ಕಲ್ಲಹಳ್ಳಿ ಪ್ರಯತ್ನಿಸುತ್ತಿದ್ದಾರೆ. ಮಾಹಿತಿ ನೀಡಿದ ವ್ಯಕ್ತಿ ಈವರೆಗೂ ದಿನೇಶ್ಗೆ ಕರೆ ಮಾಡಿಲ್ಲ. ಹೀಗಾಗಿ ಪೊಲೀಸರ ವಿಚಾರಣೆಗೆ ಸಹಕಾರಿಯಾಗುವಂತೆ, ಆತನ ಮೂಲಕ ವಿಚಾರಣೆಗೆ ಬಲ ತುಂಬಲು ಯತ್ನಿಸುತ್ತಿದ್ದಾರೆ.