AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀ ಸೆಷನ್​ವರೆಗೂ ಬಂದ ಭಾರತದ ಬ್ಯಾಟ್ಸ್​ಮನ್​​ಗಳಿಂದ ಚೇತೋಹಾರಿ ಆಟ: ಆದರೆ ಉಳಿದ 5 ವಿಕೆಟ್​ ಬೀಳಲು 5 ಬಾಲ್​ ಸಾಕು..

ಸದ್ಯದ ಪರಿಸ್ಥಿತಿಯಲ್ಲಿ ತಂಡದ ಸೋಲು ಗೆಲುವು, ಟೀಂ ಇಂಡಿಯಾದ ಉಳಿದ 5 ಆಟಗಾರರ ಬ್ಯಾಟಿಂಗ್​ ಪ್ರದರ್ಶನದ ಮೇಲೆ ನಿಂತಿದೆ. ಹನುಮ ವಿಹಾರಿ ಹಾಗೂ ರವಿಚಂದ್ರನ್​ ಅಶ್ವಿನ್​ ಮೈದಾನದಲ್ಲಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ.

ಟೀ ಸೆಷನ್​ವರೆಗೂ ಬಂದ ಭಾರತದ ಬ್ಯಾಟ್ಸ್​ಮನ್​​ಗಳಿಂದ ಚೇತೋಹಾರಿ ಆಟ: ಆದರೆ ಉಳಿದ 5 ವಿಕೆಟ್​ ಬೀಳಲು 5 ಬಾಲ್​ ಸಾಕು..
97 ರನ್​ ಗಳಿಸಿದ ರಿಶಬ್​ ಪಂತ್​
ಪೃಥ್ವಿಶಂಕರ
|

Updated on:Jan 11, 2021 | 11:39 AM

Share

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ನ ಅಂತಿಮ ದಿನದಾಟದ ಕೊನೆಯ ಸೆಷನ್​ ನಡೆಯುತ್ತಿದ್ದು, ಈ ಸೆಷನ್​ನಲ್ಲಿ ಟೀಂ ಇಂಡಿಯಾದ ಆಟಗಾರರು ನೀಡುವ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ ನಿರ್ಣಯವಾಗಲಿದೆ.

ಅಂತಿಮ ದಿನದಾಟದಲ್ಲಿ ಭಾರತೀಯ ಆಟಗಾರರು ಜವಬ್ದಾರಿಯುತವಾದ ಆಟಕ್ಕೆ ಮುಂದಾಗಿದ್ದಾರೆ. ಪಂದ್ಯದ ಆರಂಭದಲ್ಲಿ ನಾಯಕ ರಹಾನೆ ಬೇಗನೆ ವಿಕೆಟ್​ ಒಪ್ಪಿಸಿದ್ದನ್ನು ಬಿಟ್ಟರೆ, ಉಳಿದ ಆಟಗಾರರು ತಮ್ಮ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಬಾಯಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಗಾಯಗೊಂಡಿದ್ದ ರಿಷಬ್​ ಪಂತ್​ 2ನೇ ಇನ್ನಿಂಗ್ಸ್​ನಲ್ಲಿ ಅದ್ಭುತವಾದ ಆಟ ಆಡಿದರು. ಈ ಮೂಲಕ ತಂಡಕ್ಕೆ 97 ರನ್​ಗಳ ಅಮೂಲ್ಯ ಕೊಡುಗೆ ನೀಡಿದರು. ಹಾಗೆಯೇ ಪೂಜಾರ ಸಹ ತಂಡಕ್ಕೆ 77 ರನ್​ಗಳ ಅವಶ್ಯಕ ಕೊಡುಗೆ ನೀಡಿದರು.

ಸದ್ಯದ ಪರಿಸ್ಥಿತಿಯಲ್ಲಿ ತಂಡದ ಸೋಲು ಗೆಲುವು, ಟೀಂ ಇಂಡಿಯಾದ ಉಳಿದ 5 ಆಟಗಾರರ ಬ್ಯಾಟಿಂಗ್​ ಪ್ರದರ್ಶನದ ಮೇಲೆ ನಿಂತಿದೆ. ಹನುಮ ವಿಹಾರಿ ಹಾಗೂ ರವಿಚಂದ್ರನ್​ ಅಶ್ವಿನ್​ ಮೈದಾನದಲ್ಲಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರೇ ದಿನದ ಅಂತ್ಯದವರೆಗೂ ಬ್ಯಾಟಿಂಗ್​ ಉಳಿಸಿಕೊಂಡರೆ ಪಂದ್ಯದ ಪಲಿತಾಂಶವೇ ಬದಲಾಗಬಹುದು. ಉಳಿದಿರುವ 22 ಓವರ್​ಗಳಲ್ಲಿ ಟೀಂ ಇಂಡಿಯಾಗೆ 108 ರನ್​ಗಳು ಬೇಕಾಗಿದೆ. ಆದರೆ ಟೀಂ ಆಸಿಸ್​ಗೆ ಪಂದ್ಯ ಗೆಲ್ಲಲು ಬೇಕಾಗಿರುವುದು ಕೇವಲ 5 ಬಾಲ್​ನಲ್ಲಿ 5 ವಿಕೆಟ್​ಗಳಷ್ಟೇ.

ಗಾಯದ ಸಮಸ್ಯೆಯಲ್ಲೂ ವಿಶಿಷ್ಟ ಸಾಧನೆ ಮಾಡಿದ ಹನುಮ ವಿಹಾರಿ.. ಸದ್ಯದ ಪರಿಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್​ ಆದಾರಸ್ತಂಭವಾಗಿರುವ ಹನುಮ ವಿಹಾರಿ ಮಂಡಿ ನೋವಿಗೆ ಒಳಗಾಗಿದ್ದಾರೆ. ಆದರೂ ಸಹ ತಂಡಕ್ಕಾಗಿ ತಮ್ಮ ಬ್ಯಾಟಿಂಗ್​ ಮುಂದುವರೆಸಿರುವ ವಿಹಾರಿ ಬರೋಬ್ಬರಿ 106 ಬಾಲ್​ಗಳನ್ನ ಎದುರಿಸಿ ಕೇವಲ 6 ರನ್​ ಗಳಿಸಿದ್ದಾರೆ.ಈ ಮೂಲಕ ಯಶ್​ಪಾಲ್​ ಶರ್ಮ ಹೆಸರಿಲ್ಲಿದ್ದ ಅತೀ ಹೆಚ್ಚು ಬಾಲ್​ ಎದುರಿಸಿ ಕಡಿಮೆ ರನ್ (157 ಬಾಲ್​ ಎದುರಿಸಿ 13 ರನ್​ ಬಾರಿಸಿದ್ದರು)​ ಬಾರಿಸಿದ್ದ ದಾಖಲೆಯನ್ನು ಹನುಮ ವಿಹಾರಿ ಮುರಿಯುವ ಸನಿಹದಲ್ಲಿದ್ದಾರೆ.

Published On - 11:17 am, Mon, 11 January 21

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ