AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia 2020, 1st ODI: ಬೌಲಿಂಗ್-ಬ್ಯಾಟಿಂಗ್​ನಲ್ಲಿ ವಿಜೃಂಭಿಸಿದ ಆಸ್ಟ್ರೇಲಿಯಾ

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ರನ್​ಗಳ ಹೊಳೆಯೇ ಹರಿಯಿತು. ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 374 ರನ್​ ಬೆನ್ನಟ್ಟುವ ಕಠಿಣ ಸವಾಲನ್ನು ಭಾರತದ ಎದುರು ಇಟ್ಟಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಭಾರತವು ಮೊದಲ 5 ಓವರ್​ನಲ್ಲಿ 50 ರನ್ ಗಳಿಸಿದ ರೀತಿ ನೋಡಿದಾಗ ಪ್ರಬಲ ಹೋರಾಟ ನೀಡುವ ಸೂಚನೆ ಸಿಕ್ಕಿತ್ತು. ಆದರೆ 50 ಓವರ್ ಮುಗಿಯುವ ಹೊತ್ತಿಗೆ ಭಾರತಕ್ಕೆ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು. ಆದರೆ ಮಾಯಂಕ್ […]

India vs Australia 2020, 1st ODI: ಬೌಲಿಂಗ್-ಬ್ಯಾಟಿಂಗ್​ನಲ್ಲಿ ವಿಜೃಂಭಿಸಿದ ಆಸ್ಟ್ರೇಲಿಯಾ
ಅರ್ಧ ಶತಕ ಪೂರೈಸಿದ ಶಿಖರ್ ಧವನ್​ಗೆ ಹಾರ್ದಿಕ್ ಪಾಂಡ್ಯ ಅಭಿನಂದನೆ
Ghanashyam D M | ಡಿ.ಎಂ.ಘನಶ್ಯಾಮ
| Edited By: |

Updated on:Nov 29, 2020 | 9:35 AM

Share

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಕ್ರಿಕೆಟ್ ಪಂದ್ಯದಲ್ಲಿ ರನ್​ಗಳ ಹೊಳೆಯೇ ಹರಿಯಿತು. ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ 374 ರನ್​ ಬೆನ್ನಟ್ಟುವ ಕಠಿಣ ಸವಾಲನ್ನು ಭಾರತದ ಎದುರು ಇಟ್ಟಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಭಾರತವು ಮೊದಲ 5 ಓವರ್​ನಲ್ಲಿ 50 ರನ್ ಗಳಿಸಿದ ರೀತಿ ನೋಡಿದಾಗ ಪ್ರಬಲ ಹೋರಾಟ ನೀಡುವ ಸೂಚನೆ ಸಿಕ್ಕಿತ್ತು. ಆದರೆ 50 ಓವರ್ ಮುಗಿಯುವ ಹೊತ್ತಿಗೆ ಭಾರತಕ್ಕೆ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಲು ಮಾತ್ರವೇ ಸಾಧ್ಯವಾಯಿತು.

ಆದರೆ ಮಾಯಂಕ್ ಅಗರ್​ವಾಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್​ ಹೆಚ್ಚು ಕ್ರೀಸ್​ನಲ್ಲಿ ನಿಲ್ಲದೆ ಪೆವಿಲಿಯನ್​ಗೆ ಮರಳಿದರು. ತಾಳ್ಮೆಯ ಆಟಕ್ಕೆ ಮೊರೆ ಹೋದ ಶಿಖರ್​ ಧವನ್​ ವಿಕೆಟ್​ ಪತನ ಪರ್ವದ ಎದುರು ಹೆಬ್ಬಂಡೆಯಂತೆ ನಿಂತರು. ಇವರ ಜೊತೆಗೆ ನಿಂತು ಬೀಸು ಆಟವಾಡಿದ ಹಾರ್ದಿಕ್ ಪಾಂಡ್ಯ 76 ಬಾಲ್​ಗಳಲ್ಲಿ 90 ರನ್ ಸಿಡಿಸಿ ಗೆಲುವಿನ ಆಶಾಕಿರಣ ಮೂಡಿಸಿದರು.

ಇವರಿಬ್ಬರೂ ಪೆವಿಲಿಯನ್​ ಹಾದಿ ಹಿಡಿದ ನಂತರ ಬಾಲಂಗೋಚಿಗಳಿಂದ ಹೆಚ್ಚೇನೂ ನಿರೀಕ್ಷಿಸುವಂತಿರಲಿಲ್ಲ. ಇದ್ದುದರಲ್ಲಿ ರವೀಂದ್ರ ಜಡೇಜ ಪರವಾಗಿಲ್ಲ ಎನ್ನುವಂತೆ ಆಡಿದರು.

ಮಾಯಂಕ್ ಅಗರ್​ವಾಲ್ (22), ವಿರಾಟ್​ ಕೊಹ್ಲಿ (21), ಶ್ರೇಯಸ್ ಅಯ್ಯರ್ (2) ಕೆ.ಎಲ್.ರಾಹುಲ್ (12), ಶಿಖರ್​ ಧವನ್ (74), ಹಾರ್ದಿಕ್ ಪಾಂಡ್ಯ (90), ರವೀಂದ್ರ ಜಡೇಜ (25) ವಿಕೆಟ್ ಒಪ್ಪಿಸಿದ್ದಾರೆ.

ಕರಾರುವಾಕ್ ಬೌಲಿಂಗ್​ನಿಂದ ಭಾರತದ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಿದ ಆಸ್ಟ್ಟೇಲಿಯಾದ ಬೌಲರ್ ಆಡಂ ಝಂಪಾ, 10 ಓವರ್​ಗಳಲ್ಲಿ ಕೇವಲ 54 ರನ್ ನೀಡಿ, 4 ವಿಕೆಟ್ ತಮ್ಮದಾಗಿಸಿಕೊಂಡರು.

ಭಾರತದ ಪರ ಬ್ಯಾಟಿಂಗ್ ಆರಂಭಿಸಿದ ಮಾಯಂಕ್ ಅಗರ್​ವಾಲ್ ಮತ್ತು ಶಿಖರ್​ ಧವನ್ ಉತ್ತಮ ಅಡಿಪಾಯ ಹಾಕಿದರು.

ಇತಿಹಾಸ ಬರೆದ ಸ್ಮಿತ್, ಫಿಂಚ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ 6 ವಿಕೆಟ್​ ನಷ್ಟಕ್ಕೆ 374 ರನ್ ಪೇರಿಸಿತ್ತು. ಒಂದೇ ಇನ್ನಿಂಗ್ಸ್​ನಲ್ಲಿ ಸ್ಮಿತ್ ಮತ್ತು ಫಿಂಚ್​ ಶತಕ ಬಾರಿಸಿ, ಇತಿಹಾಸ ಬರೆದರು. ಟಾಸ್​ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ನಾಯಕನ ನಿರ್ಧಾರವನ್ನು ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ಗಳು ತಮ್ಮ ಬೀಸಾಟದ ಬ್ಯಾಟಿಂಗ್​ ವೈಖರಿಯಿಂದ ಅದ್ಭುತವಾಗಿ ಸಮರ್ಥಿಸಿಕೊಂಡರು.

ಆರಂಭಿಕ ಆಟಗಾರ ಆರನ್ ಫಿಂಚ್ 124 ಬಾಲ್​ಗಳಲ್ಲಿ 114 ರನ್ ಪೇರಿಸಿದರು. ಡೇವಿಡ್ ವಾರ್ನರ್ (69) ಔಟಾದ ನಂತರ ಕ್ರೀಸ್​ಗೆ ಬಂದ ಸ್ಟೀವ್​ ಸ್ಮಿತ್ 66 ಎಸೆತಗಳಲ್ಲಿ 105 ರನ್ ಬಾರಿಸಿದರು. ಗ್ಲಿನ್ ಮ್ಯಾಕ್ಸ್​ವೆಲ್ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿದರೆ ಅಲೆಕ್ಸ್ ಕಾರೆ 13 ಎಸೆಗಳಲ್ಲಿ 17 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

10 ಓವರ್​ಗೆ 89 ರನ್ ನೀಡಿ, 1 ವಿಕೆಟ್ ಪಡೆದ ಯಜುವೇಂದ್ರ ಚಾಹಲ್​ ದುಬಾರಿ ಎನಿಸಿದರು. ಮೊಹಮದ್ ಶಮಿ 10 ಓವರ್​ಗೆ 3 ವಿಕೆಟ್ ಪಡೆದು ಪರಿಣಾಮಕಾರಿ ಎನಿಸಿದರು. ಜಸ್​ಪ್ರೀತ್ ಬೂಮ್ರಾ 73 ರನ್ (1 ವಿಕೆಟ್), ನವದೀಪ್ ಸೈನಿ 83 ರನ್ (1 ವಿಕೆಟ್), ರವೀಂದ್ರ ಜಡೇಜ 63 ರನ್ ನೀಡಿದರು. ಜಡೇಜ ಬೌಲಿಂಗ್ ಚೆನ್ನಾಗಿತ್ತು. ಆದರೆ ವಿಕೆಟ್ ಬೀಳಲಿಲ್ಲ.

Published On - 9:22 am, Sun, 29 November 20

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ