AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series: ಸಂಕಷ್ಟದಲ್ಲಿ ಟೀಂ ಇಂಡಿಯಾ: ಪ್ರಮುಖ ಐದು ವಿಕೆಟ್​​ ಪತನ

ಸದ್ಯ ಟೀಂ ಇಂಡಿಯಾ 272 ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡಿದೆ. ಭಾರತಕ್ಕೆ ಗೆಲ್ಲಲು 135ರನ್​ಗಳ ಅವಶ್ಯಕತೆ ಇದೆ. ಇನ್ನು, ಉಳಿದ ಓವರ್​ಗಳಲ್ಲಿ ಟೀಂ ಇಂಡಿಯಾ ವಿಕೆಟ್​ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ, ಸೋಲು ಸುತ್ತಿಕೊಳ್ಳೋದು ಖಚಿತ.

India vs Australia Test Series: ಸಂಕಷ್ಟದಲ್ಲಿ ಟೀಂ ಇಂಡಿಯಾ: ಪ್ರಮುಖ ಐದು ವಿಕೆಟ್​​ ಪತನ
ರಿಷಬ್​ ಪಂತ್
ರಾಜೇಶ್ ದುಗ್ಗುಮನೆ
|

Updated on:Jan 11, 2021 | 9:25 AM

Share

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಪ್ರಮುಖ ಐದು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾಗೆ ಗೆಲ್ಲಲು ಇನ್ನೂ 135 ರನ್​ಗಳ ಅವಶ್ಯಕತೆ ಇದೆ.

ಆಸ್ಟ್ರೇಲಿಯಾ ನೀಡಿದ 407 ರನ್​ಗಳ ಬೃಹತ್​ ಮೊತ್ತ ಬೆನ್ನತ್ತಿದ ಭಾರತ ಉತ್ತಮ ಆರಂಭ ಕಂಡಿತ್ತು. 71 ರನ್​ಗೆ ಮೊದಲ ವಿಕೆಟ್​ ಬಿದ್ದರೆ, 92 ರನ್​ಗೆ ಎರಡನೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು. ರೋಹಿತ್​  ಆಟ ಅರ್ಧ ಶತಕ (52) ಬಾರಿಸಲಷ್ಟೇ ಸೀಮಿತವಾದರೆ, ಶುಭ್​ಮನ್​ ಗಿಲ್ಲ 31ರನ್​ಗೆ ಔಟ್​ ಆದರು. ನಾಯಕ ಅಂಜಿಕ್ಯ ರಹಾನೆ ಕೇವಲ 4 ರನ್​ಗ ಬಾರಿಸಿ ಪೆವಿಲಿಯನ್​ ಸೇರಿದರು.

ನಂತರ ಒಂದಾದ ರಿಷಬ್​ ಪಂತ್​ ಹಾಗೂ ಪೂಜಾರ ಜೋಡಿ ಆಸ್ಟ್ರೇಲಿಯಾ ಬೌಲರ್​​ಗಳ ಬೆವರಿಳಿಸಲು ಶುರು ಮಾಡಿತ್ತು. ಈ ಜೋಡಿ 148 ರನ್​ಗಳ ಜೊತೆಯಾಟ ನೀಡಿ ಟೀಂ ಇಂಡಿಯಾಗೆ ಆಸರೆ ಆಯಿತು. ಶತಕದ ಸನಿಹದಲ್ಲಿದ್ದ ರಿಷಬ್​ ಪಂತ್​ 97ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು.

ಸದ್ಯ ಟೀಂ ಇಂಡಿಯಾ 272 ರನ್​ಗಳಿಗೆ ಐದು ವಿಕೆಟ್​ ಕಳೆದುಕೊಂಡಿದೆ. ಭಾರತಕ್ಕೆ ಗೆಲ್ಲಲು 135ರನ್​ಗಳ ಅವಶ್ಯಕತೆ ಇದೆ. ಇನ್ನು, ಉಳಿದ ಓವರ್​ಗಳಲ್ಲಿ ಟೀಂ ಇಂಡಿಯಾ ವಿಕೆಟ್​ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ, ಸೋಲು ಸುತ್ತಿಕೊಳ್ಳೋದು ಖಚಿತ.

ಇನ್ನು, ರವೀಂದ್ರ ಜಡೇಜಾ ಇಂದಿನ ಪಂದ್ಯದಲ್ಲಿ ಆಡೋದು ಅನುಮಾನ ಎನ್ನಲಾಗಿತ್ತು. ಈಗ ಅದು ಖಚಿತವಾಗಿದೆ. ಆರನೇ ವಿಕೆಟ್​ಗೆ ಜಡೇಜಾ ಕಣಕ್ಕೆ ಇಳಿಯಬೇಕಿತ್ತು. ಆದರೆ, ಆರ್​. ಅಶ್ವಿನ್​ ಕಣಕ್ಕೆ ಇಳಿದಿದ್ದಾರೆ.

India vs Australia Test Series | ಜನಾಂಗೀಯ ನಿಂದನೆ ಪ್ರಕರಣ: ಟೀಂ ಇಂಡಿಯಾದ ಕ್ಷಮೆಯಾಚಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

Published On - 9:24 am, Mon, 11 January 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್