India vs England 1st Test | ವಿಚಿತ್ರ ರೀತಿಯಲ್ಲಿ ಔಟ್​ ಆದ ಚೇತೇಶ್ವರ ಪೂಜಾರ; ಇಲ್ಲಿದೆ ವೈರಲ್​ ವಿಡಿಯೋ

ಚೇತೇಶ್ವರ ಪೂಜರ ಅರ್ಧ ಶತಕ ಗಳಿಸುವುದಕ್ಕೂ ಮೊದಲು ತುಂಬಾನೇ ನಿಧಾನ ಗತಿಯಲ್ಲಿ ಆಡುತ್ತಿದ್ದರು. ಅರ್ಧ ಶತಕ ಬಾರಿಸಿದ ನಂತರ ಆಟದ ವೇಗವನ್ನು ಹೆಚ್ಚಿಸಿದರು ಚೇತೇಶ್ವರ.

India vs England 1st Test | ವಿಚಿತ್ರ ರೀತಿಯಲ್ಲಿ ಔಟ್​ ಆದ ಚೇತೇಶ್ವರ ಪೂಜಾರ; ಇಲ್ಲಿದೆ ವೈರಲ್​ ವಿಡಿಯೋ
ಚೇತೇಶ್ವರ ಪೂಜಾರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 07, 2021 | 7:50 PM

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 257 ರನ್​ಗಳಿಗೆ 6 ವಿಕೆಟ್​​ ಕಳೆದುಕೊಂಡು ಆಡುತ್ತಿದೆ. ವಾಷಿಂಗ್ಟನ್​​ ಸುಂದರ್​ 33 ರನ್​ ಹಾಗೂ ರವಿಚಂದ್ರನ್​ ಅಶ್ವಿನ್​ 8 ರನ್​​ ಗಳಿಸಿ ಕಣದಲ್ಲಿದ್ದಾರೆ. ಈ ಮಧ್ಯೆ ಚೇತೇಶ್ವರ ಪೂಜಾರ ಔಟ್​ ಆದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಚರ್ಚೆ ಆಗುತ್ತಿದೆ. ಚೇತೇಶ್ವರ ಅವರದ್ದು ಸಂಪೂರ್ಣ ಬ್ಯಾಡ್​​ಲಕ್​ ಎಂದು ಕೆಲವರು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದಕ್ಕೆ ಇಲ್ಲಿದೆ ವಿವರ.

ಚೇತೇಶ್ವರ ಪೂಜರ ಅರ್ಧ ಶತಕ ಗಳಿಸುವುದಕ್ಕೂ ಮೊದಲು ತುಂಬಾನೇ ನಿಧಾನ ಗತಿಯಲ್ಲಿ ಆಡುತ್ತಿದ್ದರು. ಅರ್ಧ ಶತಕ ಬಾರಿಸಿದ ನಂತರ ಆಟದ ವೇಗವನ್ನು ಹೆಚ್ಚಿಸಿದರು. 142 ಬಾಲ್​ಗಳಿಗೆ 73 ರನ್​ ಗಳಿಸಿದ್ದರು. ಇಂದು ಚೇತೇಶ್ವರ ಶತಕ ಬಾರಿಸಿಯೇ ಬಾರಿಸುತ್ತಾರೆ ಎಂಬುದು ಅನೇಕರ ನಂಬಿಕೆ ಆಗಿತ್ತು. ಆದರೆ,  143ನೇ ಬಾಲ್​ ಎದುರಿಸಿದ ಚೇತೇಶ್ವರ ಲೆಗ್​ ಸೈಡ್​ಗೆ ಹೊಡೆಯಲು ಹೋದರು. ಅವರು ಹೊಡೆದ ಶಾಟ್​ ಏನೋ ಚೆನ್ನಾಗಿತ್ತು. ಆದರೆ, ಈ ಬಾಲ್​ ಶಾರ್ಟ್​ ಲೆಗ್​ ಫೀಲ್ಡರ್ ಆಲ್ಲಿ ಪೋಪ್ ಹೆಲ್ಮೆಟ್​ಗೆ ತಾಗಿತ್ತು.

ಹೆಲ್ಮೆಟ್​ಗೆ ತಾಗಿದ ಬಾಲ ನೇರವಾಗಿ ಶಾರ್ಟ್​ ಮಿಡ್​ ವಿಕೆಟ್​ನಲ್ಲಿದ್ದ ರೋರಿ ಬರ್ನ್ಸ್ ಕೈ ಸೇರಿತ್ತು. ಬಾಲ್​ ಎಲ್ಲಿಯೂ ನೆಲ ತಾಗದ ಕಾರಣ ಚೇತೇಶ್ವರ ಪೂಜಾರ ಪೆವಿಲಿಯನ್​ ತೆರಳಬೇಕಾಯಿತು. ಈ ವಿಡಿಯೋ ಸದ್ಯ ಟ್ವಿಟರ್​ನಲ್ಲಿ ಹರಿದಾಡಿದೆ. ಐಸಿಸಿ ಕೂಡ ಪೂಜಾರ ವಿಚಿತ್ರವಾಗಿ ಔಟ್​ ಆಗಿದ್ದಾರೆ ಎಂದು ಬರೆದುಕೊಂಡಿದೆ.

 Ind vs Eng, 1st Test, Day 3, LIVE Score: 3ನೇ ದಿನದಾಟ ಮುಕ್ತಾಯ, ಇಂಗ್ಲೆಂಡ್​ ಮೇಲುಗೈ, 6 ವಿಕೆಟ್​ ಕಳೆದುಕೊಂಡ ಭಾರತ

Published On - 7:49 pm, Sun, 7 February 21

ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ