
ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನಡೆದಿರುವ ಗಲಭೆಗೆ ಫೇಸ್ಬುಕ್ ಪೋಸ್ಟ್ ಕೇವಲ ನೆಪ ಮಾತ್ರವಾ? ಏಕೆಂದ್ರೆ ಗಲಾಟೆಯ ಹಿಂದೆ ಹಲವು ಕಾರಣಗಳಿರುವ ಶಂಕೆ ವ್ಯಕ್ತವಾಗಿದೆ. ಗಲಭೆಗೆ ಸೋಲು-ಗೇಲುವಿನ ಸೇಡಿನ ಅಂಶವಿರುವುದು ಎದ್ದುಕಾಣುತ್ತಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹಾಯದಿಂದ ಕಾಂಗ್ರೆಸ್ ಅಭ್ಯರ್ಥಿ ಪಳನಿಯಮ್ಮ ಗೆಲುವು ಸಾಧಿಸಿದ್ದರು. ಹೀಗಾಗಿ ಅಂದಿನಿಂದ ಶಾಸಕರ ಮೇಲೆ ಸೇಡಿಗೆ ಕಾಯುತ್ತಿದ್ದವರು ಫೇಸ್ಬುಕ್ ಪೋಸ್ಟ್ ನೆಪ ಮಾಡಿಕೊಂಡು ಗಲಭೆ ಮಾಡಿರುವ ಅನುಮಾನ ಉಂಟಾಗಿದೆ. ಶಾಸಕರ ಸಂಬಂಧಿಯ ಪೋಸ್ಟ್ ಎಲ್ಲರಿಗೂ ವಾಟ್ಸಾಪ್ ಮೂಲಕ ಸ್ಟೇಟಸ್ ರವಾನೆ ಮಾಡಿ, ಗಲಾಟೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.