AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇಕಡ 33ರಷ್ಟು ಐಟಿಬಿಟಿ ಕಂಪನಿಗಳಲ್ಲಿ ಕೆಲ್ಸಕ್ಕೆ ಅವಕಾಶ, ಬೆಂಗಳೂರಿಗೆ ವಾಪಾಸಾಗಲು ಒನ್ ಸೈಡ್ ಪಾಸ್

ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್​ಫ್ರಮ್​ ಹೋಮ್ ವಾರ್​​​​ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್​​ ಸಿಟಿಯಲ್ಲಿದ್ದ ಸಾಫ್ಟ್​ವೇರ್​​​, ಹಾರ್ಡ್​​ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು. ಮಾಲ್​, ಫ್ರೆಂಡ್ಸ್.. ಪಬ್​​ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್​​ಡೌನ್​ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್​​ಫ್ರಮ್​ ಹೋಮ್​ ಟೆನ್ಷನ್​ಗೆ ಸಿಲುಕಿದ್ದೋರಿಗೆ ರಾಜ್ಯ […]

ಶೇಕಡ 33ರಷ್ಟು ಐಟಿಬಿಟಿ ಕಂಪನಿಗಳಲ್ಲಿ ಕೆಲ್ಸಕ್ಕೆ ಅವಕಾಶ, ಬೆಂಗಳೂರಿಗೆ ವಾಪಾಸಾಗಲು ಒನ್ ಸೈಡ್ ಪಾಸ್
ಸಾಧು ಶ್ರೀನಾಥ್​
|

Updated on: Apr 19, 2020 | 8:02 AM

Share

ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್​ಫ್ರಮ್​ ಹೋಮ್ ವಾರ್​​​​ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್​​ ಸಿಟಿಯಲ್ಲಿದ್ದ ಸಾಫ್ಟ್​ವೇರ್​​​, ಹಾರ್ಡ್​​ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು.

ಮಾಲ್​, ಫ್ರೆಂಡ್ಸ್.. ಪಬ್​​ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್​​ಡೌನ್​ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್​​ಫ್ರಮ್​ ಹೋಮ್​ ಟೆನ್ಷನ್​ಗೆ ಸಿಲುಕಿದ್ದೋರಿಗೆ ರಾಜ್ಯ ಸರ್ಕಾರ ಗಿಫ್ಟ್ ನೀಡಿದೆ. ಏಪ್ರಿಲ್​ 20ರ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಶೇಕಡ 33ರಷ್ಟು ಐಟಿ-ಬಿಟಿ ಕಂಪನಿಗಳಲ್ಲಿ ಕೆಲ್ಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಆದ್ರೀಗ, ಊರು ಸೇರಿದ್ದ ಉದ್ಯೋಗಿಗಳು ಬೆಂಗಳೂರಿಗೆ ಮರಳಬೇಕು. ಬಸ್​ ಬೇರೆ ಇಲ್ಲ, ಕಾರು ಬೈಕ್​ಗಳನ್ನ ತಂದ್ರೆ ಪೊಲೀಸ್ರು ಕಾಟ. ಬೆಂಗಳೂರಿಗೆ ಹೇಗಪ್ಪ ಬರೋದು ಎಂಬ ತಲೆನೋವಲ್ಲಿದ್ದಾರೆ.

ಬೆಂಗಳೂರಿಗೆ ವಾಪಸ್ ಆಗೋರಿಗೆ ಒನ್​​ ವೇ ಪಾಸ್​! ಐಟಿ ಕಂಪನಿಯಲ್ಲಿ ಕೆಲಸ ಮಾಡೋರು ಒಂದ್ಕಡೆ ಖುಷಿ ಜೊತೆ ಟೆನ್ಷನ್​​​ನಲ್ಲಿದ್ರೂ ಇದಕ್ಕೂ ಸರ್ಕಾರ ಸೆಲ್ಯೂಷನ್ ನೀಡಿದೆ. ಐಟಿ ನೌಕಕರು ಬೆಂಗಳೂರಿಗೆ ವಾಪಸ್​ ಆಗೋಕೆ ಒನ್ ಸೈಡ್ ಪಾಸ್ ವಿತರಿಸೋಕೆ ಪ್ಲ್ಯಾನ್ ಮಾಡಿದೆ. ಹಾಗಿದ್ರೆ, ಒನ್​ ಸೈಡ್ ಪಾಸ್​ ಅಂದ್ರೇನು? ಇದು ಎಲ್ಲಿ ಸಿಗುತ್ತೆ? ಏನೇನ್ ರೂಲ್ಸ್ ಇರುತ್ತೆ ಅನ್ನೋದನ್ನ ನೋಡೋದಾದ್ರೆ.

ಏನಿದು ಒನ್ ಸೈಡ್ ಪಾಸ್? ಐಟಿ-ಬಿಟಿ ಕಪನಿಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಪಾಸ್ ವಿತರಿಸಲಾಗುತ್ತೆ. ಅಂತರ್​​​​ ಜಿಲ್ಲಾ ಪ್ರಯಾಣ ನಿಷೇಧದ ಹಿನ್ನೆಲೆಯಲ್ಲಿ ಪಾಸ್ ವಿತರಣೆ ಮಾಡಲಾಗುತ್ತದೆ. ಐಟಿ ನೌಕರರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾಸ್ ಪಡೀಬೋದಾಗಿದೆ. ಅದ್ರಲ್ಲೂ ಕೇವಲ 1 ಬಾರಿ ಮಾತ್ರ ಬೆಂಗಳೂರಿಗೆ ವಾಪಸ್​​ ಆಗಲು ಪಾಸ್ ಬಳಕೆ ಮಾಡ್ಬೋದಾಗಿದೆ. ಈ ಪಾಸ್ ಮೂಲಕ ಬೆಂಗಳೂರಿನಿಂದ ಬೇರೆಡೆ ಅಥವಾ ಅಂತರ್​ ರಾಜ್ಯ ಜಿಲ್ಲೆಗಳಿಗೆ ವಾಪಸ್ ಹೋಗೋಕೆ ಆಗಲ್ಲ. ಪಾಸ್ ಪಡೆದವರು ತಮ್ಮ ಸ್ವಂತ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದ್ದು, ಈ ಮೂಲಕ ಬೆಂಗಳೂರಿಗೆ ಬರ್ಬೋದಾಗಿದೆ.

ಒಟ್ನಲ್ಲಿ ರಾಜ್ಯದಲ್ಲಿ ಕೊರೊನಾ ಕ್ರೌರ್ಯ ಹೆಚ್ಚಾಗ್ತನೇ ಇದೆ.. ಆದ್ರೆ ಏಪ್ರಿಲ್ 20ರ ಬಳಿಕ ಐಟಿ-ಬಿಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿರೋದು ಎಲ್ಲರ ನಿದ್ದೆಗೆಡಿಸಿದೆ. ಹಳ್ಳಿ ಹಳ್ಳಿಯಿಂದ ಪಾಸ್​ ಪಡೆದು ಬೆಂಗಳೂರಿಗೆ ಸಾವಿರಾರು ವಾಹನಗಳು ಬಂದ್ರೆ ಸಂಚಾರ ದಟ್ಟಣೆ ಆಗೋದು ಫಿಕ್ಸ್.. ಬೇಕಾಬಿಟ್ಟಿ ಓಡಾಡೋರನ್ನೇ ಕಂಟ್ರೋಲ್ ಮಾಡೋಕೆ ಪೊಲೀಸ್ರು ಒದ್ದಾಡ್ತಿದ್ದಾರೆ. ಆದ್ರೀಗ ಮುಂದೇನ್ ಅನಾಹುತವಾಗುತ್ತೋ ಅನ್ನೋದು ಎಲ್ರಿಗೂ ಟೆನ್ಷನ್ ಶುರುವಾಗಿದೆ. ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕೊಟ್ಟು ಯೂಟರ್ನ್ ಹೊಡೆದಿರೋ ಸರ್ಕಾರ ಈ ಒನ್​​ ವೇ ಪಾಸ್​​ ವಿಚಾರದಲ್ಲಿ ಏನ್​ ಮಾಡುತ್ತೆ ಕಾದು ನೋಡ್ಬೇಕು.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?