AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇಕಡ 33ರಷ್ಟು ಐಟಿಬಿಟಿ ಕಂಪನಿಗಳಲ್ಲಿ ಕೆಲ್ಸಕ್ಕೆ ಅವಕಾಶ, ಬೆಂಗಳೂರಿಗೆ ವಾಪಾಸಾಗಲು ಒನ್ ಸೈಡ್ ಪಾಸ್

ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್​ಫ್ರಮ್​ ಹೋಮ್ ವಾರ್​​​​ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್​​ ಸಿಟಿಯಲ್ಲಿದ್ದ ಸಾಫ್ಟ್​ವೇರ್​​​, ಹಾರ್ಡ್​​ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು. ಮಾಲ್​, ಫ್ರೆಂಡ್ಸ್.. ಪಬ್​​ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್​​ಡೌನ್​ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್​​ಫ್ರಮ್​ ಹೋಮ್​ ಟೆನ್ಷನ್​ಗೆ ಸಿಲುಕಿದ್ದೋರಿಗೆ ರಾಜ್ಯ […]

ಶೇಕಡ 33ರಷ್ಟು ಐಟಿಬಿಟಿ ಕಂಪನಿಗಳಲ್ಲಿ ಕೆಲ್ಸಕ್ಕೆ ಅವಕಾಶ, ಬೆಂಗಳೂರಿಗೆ ವಾಪಾಸಾಗಲು ಒನ್ ಸೈಡ್ ಪಾಸ್
ಸಾಧು ಶ್ರೀನಾಥ್​
|

Updated on: Apr 19, 2020 | 8:02 AM

Share

ಬೆಂಗಳೂರು: ಅಯ್ಯೋ.. ಆಗ್ತಿಲ್ಲ ಗುರೂ.. ಕೂಂತಲ್ಲಿ ಕೂರಂಗಿಲ್ಲ.. ನಿಂತಲ್ಲಿ ನಿಲ್ಲಂಗಿಲ್ಲ.. ಮನೆಯಲ್ಲಿ ಇರೋಕೆ ಆಗ್ತಾನೆ ಇಲ್ಲ. ಟೈಂ ಅಂತೂ ಮುಂದೆ ಸಾಗ್ತಾನೆ ಇಲ್ಲ. ವರ್ಕ್​ಫ್ರಮ್​ ಹೋಮ್ ವಾರ್​​​​ನಲ್ಲಿ ಸಿಲುಕಿ ಟೆಕ್ಕಿಗಳಂತೂ ಚಕ್ಕರ್ ಹೊಡೀತಿದ್ದಾರೆ. ಕೊರೊನಾ ಎಂಟ್ರಿಗೆ ಸಿಲಿಕಾನ್​​ ಸಿಟಿಯಲ್ಲಿದ್ದ ಸಾಫ್ಟ್​ವೇರ್​​​, ಹಾರ್ಡ್​​ವೇರ್, ಐಟಿ ಸೆಕ್ಟರ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದೋರು ತಮ್ಮೂರಿನತ್ತ ಹೆಜ್ಜೆ ಹಾಕಿದ್ದೇ ಹಾಕಿದ್ದು.

ಮಾಲ್​, ಫ್ರೆಂಡ್ಸ್.. ಪಬ್​​ ಅಂತ ಬ್ಯುಸಿಯಾಗಿರುತ್ತಿದ್ದ ಐಟಿ ಉದ್ಯೋಗಿಗಳು ಲಾಕ್​​ಡೌನ್​ ಸೆರೆಮನೆವಾಸಕ್ಕೆ ಮುಕ್ತಿಯಾವಾಗಪ್ಪ ಅಂತಿದ್ರು. ವರ್ಕ್​​ಫ್ರಮ್​ ಹೋಮ್​ ಟೆನ್ಷನ್​ಗೆ ಸಿಲುಕಿದ್ದೋರಿಗೆ ರಾಜ್ಯ ಸರ್ಕಾರ ಗಿಫ್ಟ್ ನೀಡಿದೆ. ಏಪ್ರಿಲ್​ 20ರ ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಶೇಕಡ 33ರಷ್ಟು ಐಟಿ-ಬಿಟಿ ಕಂಪನಿಗಳಲ್ಲಿ ಕೆಲ್ಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ. ಆದ್ರೀಗ, ಊರು ಸೇರಿದ್ದ ಉದ್ಯೋಗಿಗಳು ಬೆಂಗಳೂರಿಗೆ ಮರಳಬೇಕು. ಬಸ್​ ಬೇರೆ ಇಲ್ಲ, ಕಾರು ಬೈಕ್​ಗಳನ್ನ ತಂದ್ರೆ ಪೊಲೀಸ್ರು ಕಾಟ. ಬೆಂಗಳೂರಿಗೆ ಹೇಗಪ್ಪ ಬರೋದು ಎಂಬ ತಲೆನೋವಲ್ಲಿದ್ದಾರೆ.

ಬೆಂಗಳೂರಿಗೆ ವಾಪಸ್ ಆಗೋರಿಗೆ ಒನ್​​ ವೇ ಪಾಸ್​! ಐಟಿ ಕಂಪನಿಯಲ್ಲಿ ಕೆಲಸ ಮಾಡೋರು ಒಂದ್ಕಡೆ ಖುಷಿ ಜೊತೆ ಟೆನ್ಷನ್​​​ನಲ್ಲಿದ್ರೂ ಇದಕ್ಕೂ ಸರ್ಕಾರ ಸೆಲ್ಯೂಷನ್ ನೀಡಿದೆ. ಐಟಿ ನೌಕಕರು ಬೆಂಗಳೂರಿಗೆ ವಾಪಸ್​ ಆಗೋಕೆ ಒನ್ ಸೈಡ್ ಪಾಸ್ ವಿತರಿಸೋಕೆ ಪ್ಲ್ಯಾನ್ ಮಾಡಿದೆ. ಹಾಗಿದ್ರೆ, ಒನ್​ ಸೈಡ್ ಪಾಸ್​ ಅಂದ್ರೇನು? ಇದು ಎಲ್ಲಿ ಸಿಗುತ್ತೆ? ಏನೇನ್ ರೂಲ್ಸ್ ಇರುತ್ತೆ ಅನ್ನೋದನ್ನ ನೋಡೋದಾದ್ರೆ.

ಏನಿದು ಒನ್ ಸೈಡ್ ಪಾಸ್? ಐಟಿ-ಬಿಟಿ ಕಪನಿಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಪಾಸ್ ವಿತರಿಸಲಾಗುತ್ತೆ. ಅಂತರ್​​​​ ಜಿಲ್ಲಾ ಪ್ರಯಾಣ ನಿಷೇಧದ ಹಿನ್ನೆಲೆಯಲ್ಲಿ ಪಾಸ್ ವಿತರಣೆ ಮಾಡಲಾಗುತ್ತದೆ. ಐಟಿ ನೌಕರರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಾಸ್ ಪಡೀಬೋದಾಗಿದೆ. ಅದ್ರಲ್ಲೂ ಕೇವಲ 1 ಬಾರಿ ಮಾತ್ರ ಬೆಂಗಳೂರಿಗೆ ವಾಪಸ್​​ ಆಗಲು ಪಾಸ್ ಬಳಕೆ ಮಾಡ್ಬೋದಾಗಿದೆ. ಈ ಪಾಸ್ ಮೂಲಕ ಬೆಂಗಳೂರಿನಿಂದ ಬೇರೆಡೆ ಅಥವಾ ಅಂತರ್​ ರಾಜ್ಯ ಜಿಲ್ಲೆಗಳಿಗೆ ವಾಪಸ್ ಹೋಗೋಕೆ ಆಗಲ್ಲ. ಪಾಸ್ ಪಡೆದವರು ತಮ್ಮ ಸ್ವಂತ ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದ್ದು, ಈ ಮೂಲಕ ಬೆಂಗಳೂರಿಗೆ ಬರ್ಬೋದಾಗಿದೆ.

ಒಟ್ನಲ್ಲಿ ರಾಜ್ಯದಲ್ಲಿ ಕೊರೊನಾ ಕ್ರೌರ್ಯ ಹೆಚ್ಚಾಗ್ತನೇ ಇದೆ.. ಆದ್ರೆ ಏಪ್ರಿಲ್ 20ರ ಬಳಿಕ ಐಟಿ-ಬಿಟಿ ಕಂಪನಿಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿರೋದು ಎಲ್ಲರ ನಿದ್ದೆಗೆಡಿಸಿದೆ. ಹಳ್ಳಿ ಹಳ್ಳಿಯಿಂದ ಪಾಸ್​ ಪಡೆದು ಬೆಂಗಳೂರಿಗೆ ಸಾವಿರಾರು ವಾಹನಗಳು ಬಂದ್ರೆ ಸಂಚಾರ ದಟ್ಟಣೆ ಆಗೋದು ಫಿಕ್ಸ್.. ಬೇಕಾಬಿಟ್ಟಿ ಓಡಾಡೋರನ್ನೇ ಕಂಟ್ರೋಲ್ ಮಾಡೋಕೆ ಪೊಲೀಸ್ರು ಒದ್ದಾಡ್ತಿದ್ದಾರೆ. ಆದ್ರೀಗ ಮುಂದೇನ್ ಅನಾಹುತವಾಗುತ್ತೋ ಅನ್ನೋದು ಎಲ್ರಿಗೂ ಟೆನ್ಷನ್ ಶುರುವಾಗಿದೆ. ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ಕೊಟ್ಟು ಯೂಟರ್ನ್ ಹೊಡೆದಿರೋ ಸರ್ಕಾರ ಈ ಒನ್​​ ವೇ ಪಾಸ್​​ ವಿಚಾರದಲ್ಲಿ ಏನ್​ ಮಾಡುತ್ತೆ ಕಾದು ನೋಡ್ಬೇಕು.

ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್