AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕೋರ್ಟ್‌ ಅಂಗಳಕ್ಕೂ ನುಗ್ಗಿದ ಕೊರೊನಾ, ಇನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕವೇ ಕಲಾಪ

ಬೆಂಗಳೂರು: ಕೊರೊನಾ ಎಗ್ಗಿಲ್ಲದೇ ಎಲ್ಲೆಂದರಲ್ಲಿ ನುಗ್ತಾನೆ ಇದೆ. ಡಾಕ್ಟರ್ಸ್‌ ಆಯ್ತು, ಪೊಲೀಸ್‌ ಆಯ್ತು, ಟೀಚರ್ಸ್‌ ಆಯ್ತು, ಅಷ್ಟೇ ಅಲ್ಲ ದೂರದ ಜಮೀನಿನಲ್ಲಿ ಕುರಿ ಕಾಯೋರನ್ನು ಬಿಡ್ಲಿಲ್ಲ. ಈಗ ಹೆಮ್ಮಾರಿ ಹೈಕೋರ್ಟ್‌ ಆವರಣಕ್ಕೂ ಬಂದಿದೆ. ಹೌದು ಕೊರೊನಾ ಮಾರಿ ಈಗ ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌ಗೂ ತಲುಪಿದೆ. ಪರಿಣಾಮ ಮಂಗಳಾರ ಹೈಕೋರ್ಟ್‌ನ ಕಾರ್ಯಕಲಾಪಗಳನ್ನ ರದ್ದು ಮಾಡಿ ಸಂಪೂರ್ಣವಾಗಿ ಹೈಕೋರ್ಟ್‌ನ ಕಾಂಪ್ಲೆಕ್ಸ್‌ನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಈಗ ಮುಖ್ಯನ್ಯಾಯಮೂರ್ತಿ ಎ ಎಸ್‌ ಓಕಾ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ಪೀಠದ […]

ಹೈಕೋರ್ಟ್‌ ಅಂಗಳಕ್ಕೂ ನುಗ್ಗಿದ ಕೊರೊನಾ, ಇನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕವೇ  ಕಲಾಪ
ಕರ್ನಾಟಕ ಹೈಕೋರ್ಟ್​
Guru
| Edited By: |

Updated on: Jul 01, 2020 | 11:07 AM

Share

ಬೆಂಗಳೂರು: ಕೊರೊನಾ ಎಗ್ಗಿಲ್ಲದೇ ಎಲ್ಲೆಂದರಲ್ಲಿ ನುಗ್ತಾನೆ ಇದೆ. ಡಾಕ್ಟರ್ಸ್‌ ಆಯ್ತು, ಪೊಲೀಸ್‌ ಆಯ್ತು, ಟೀಚರ್ಸ್‌ ಆಯ್ತು, ಅಷ್ಟೇ ಅಲ್ಲ ದೂರದ ಜಮೀನಿನಲ್ಲಿ ಕುರಿ ಕಾಯೋರನ್ನು ಬಿಡ್ಲಿಲ್ಲ. ಈಗ ಹೆಮ್ಮಾರಿ ಹೈಕೋರ್ಟ್‌ ಆವರಣಕ್ಕೂ ಬಂದಿದೆ.

ಹೌದು ಕೊರೊನಾ ಮಾರಿ ಈಗ ಬೆಂಗಳೂರಿನಲ್ಲಿರುವ ಕರ್ನಾಟಕ ಹೈಕೋರ್ಟ್‌ಗೂ ತಲುಪಿದೆ. ಪರಿಣಾಮ ಮಂಗಳಾರ ಹೈಕೋರ್ಟ್‌ನ ಕಾರ್ಯಕಲಾಪಗಳನ್ನ ರದ್ದು ಮಾಡಿ ಸಂಪೂರ್ಣವಾಗಿ ಹೈಕೋರ್ಟ್‌ನ ಕಾಂಪ್ಲೆಕ್ಸ್‌ನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಈಗ ಮುಖ್ಯನ್ಯಾಯಮೂರ್ತಿ ಎ ಎಸ್‌ ಓಕಾ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ಪೀಠದ ಕಲಾಪಗಳನ್ನ ರದ್ದುಪಡಿಸಲಾಗಿದೆ.

ಈ ಪೀಠದ ಕಲಾಪಗಳನ್ನ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರ ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ಇದರ ಜೊತೆಗೆ ಕಲಾಪಗಳನ್ನ ವಿಡಿಯೋ ಕಾನ್ಫರೆನ್ಸ್‌ಮೂಲಕ ಮಾತ್ರವೆ ನಡೆಸಲು ತಿರ್ಮಾನಿಸಲಾಗಿದೆ. ಇಷ್ಟೇ ಅಲ್ಲ ಮುಖ್ಯನಾಯಮೂರ್ತಿ ಓಕಾ ಸೂಚನೆ ಮೇರೆಗೆ ಜುಲೈ 3ರಂದು ನಡೆಯಬೇಕಿದ್ದ ನ್ಯಾಯಾಧೀಶರ ಸಂದರ್ಶನವನ್ನ ರದ್ದುಪಡಿಸಲಾಗಿದೆ. ಈ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಆದೇಶ ಮಾಡಿದ್ದಾರೆ.

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ