AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲವರು ಎಷ್ಟೇ ಬುದ್ಧಿವಂತರಾದರೂ.. ಜೀವನದಲ್ಲಿ ಸಕ್ಸಸ್ ಕಾಣಲ್ಲ, ಯಾಕೆ?

ಬಯಸಿದ್ದನ್ನು ಪಡೆಯುವಲ್ಲಿ ನಾವು ಬಹಳಷ್ಟು ಬಾರಿ ವಿಫಲರಾಗುತ್ತೇವೆ. ಯಾಕೆ ಹಾಗಾಗುತ್ತದೆ ಎಂದು ತಿಳಿಯಲು ಕೂಡ ನಾವು ಸೋಲುತ್ತೇವೆ.

ಕೆಲವರು ಎಷ್ಟೇ ಬುದ್ಧಿವಂತರಾದರೂ.. ಜೀವನದಲ್ಲಿ ಸಕ್ಸಸ್ ಕಾಣಲ್ಲ, ಯಾಕೆ?
(ಸಾಂದರ್ಭಿಕ ಚಿತ್ರ)
TV9 Web
| Updated By: ganapathi bhat|

Updated on:Apr 06, 2022 | 8:22 PM

Share

ಬಯಸಿದ್ದನ್ನು ಪಡೆಯುವಲ್ಲಿ ನಾವು ಬಹಳಷ್ಟು ಬಾರಿ ವಿಫಲರಾಗುತ್ತೇವೆ. ಯಾಕೆ ಹಾಗಾಗುತ್ತದೆ ಎಂದು ತಿಳಿಯಲು ನಾವು ಸೋಲುತ್ತೇವೆ. ಆದರೆ, ನಿಜವಾಗಿಯೂ ಹಾಗಾಗುವುದಕ್ಕೆ ನಮ್ಮೊಳಗಿನ ಭಯವೇ ಕಾರಣ. ಭಯ ಅಂದರೆ ಸೋಲಿನ ಭಯ. ತಿರಸ್ಕಾರದ ಭಯ. ಕೆಟ್ಟವರು ಅನಿಸಿಕೊಂಡರೆ ಎಂಬ ಭಯ. ಇಂತಹಾ ನಮ್ಮೊಳಗಿನ ಭಯಗಳಿಂದ ಬೇಕಾದ್ದನ್ನು ಪಡೆಯಲು ನಾವು ಮತ್ತೆ ಮತ್ತೆ ಸೋಲುತ್ತೇವೆ.

ಈ ಬಗ್ಗೆ ಜೆನ್ನಿಫರ್ ಕೊಹೆನ್ ಎಂಬವರು TEDx ಟಾಕ್​ನಲ್ಲಿ ಮಾತನಾಡಿದ್ದಾರೆ. ಈ ಎಲ್ಲಾ ಭಯವನ್ನು ನಮಗೆ ನಾವೇ ಕಡಿಮೆ ಮಾಡಿಕೊಳ್ಳಬಹುದು ಎಂದೂ ಅವರು ವಿವರಿಸಿದ್ದಾರೆ.

ಈ ಎಲ್ಲಾ ಭಯಗಳು ಹುಟ್ಟಿಕೊಳ್ಳುವುದು ನಮ್ಮೊಳಗಿನಿಂದ. ನಮ್ಮ ಬಗ್ಗೆ ನಮಗಿರುವ ಸ್ವಯಂ ಅನುಮಾನದಿಂದ. ಈ ಕಾರಣದಿಂದ ನಾವು ನಮಗೆ ಬೇಕಾದ್ದನ್ನು ಸಾಧಿಸಲು ಕಾರ್ಯಪ್ರವೃತ್ತರಾಗುವುದಿಲ್ಲ. ಹಿಂಜರಿಕೆ ಪಟ್ಟುಕೊಳ್ಳುತ್ತೇವೆ. ನನ್ನಿಂದ ಸಾಧ್ಯವಿಲ್ಲ ಅಂದುಕೊಳ್ಳುತ್ತೇವೆ. ಹಾಗಾಗಿ, ನಾವು ಬುದ್ದಿವಂತರು, ಗೆಲ್ಲಲು ಯೋಗ್ಯರೇ ಆದರೂ ಗೆಲುವು ಕಾಣಲು ವಿಫಲರಾಗುತ್ತೇವೆ. ನಾವು ಬುದ್ಧಿವಂತರಾಗಿ, ನಮ್ಮನ್ನು ತಿಳಿಯುತ್ತಾ ಹೋದಷ್ಟು ನಮ್ಮ ಋಣಾತ್ಮಕ ಅಂಶಗಳ ಬಗ್ಗೆ ಚಿಂತಿಸುತ್ತೇವೆ. ಏನೋ ಮಾಡಲು ಸಾಧ್ಯ ಎಂದು ಮುನ್ನುಗ್ಗಲು ಹಿಂಜರಿಯುತ್ತೇವೆ.

ಇದನ್ನು ಮೀರಲು ನಾವು ದಿಟ್ಟರೂ, ಧೈರ್ಯಶಾಲಿಗಳೂ ಆಗಿರಬೇಕು. ಹಾಗಾದಾಗ ಗೆಲುವು ಸಾಧ್ಯ.ನಾವು ಧೈರ್ಯಶಾಲಿಗಳಾಗಿ ನಮಗೆ ನಿಜವಾಗಿ ಏನು ಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಚಿಂತಿಸುವುದು, ಯೋಜನೆ ಹಾಕಿಕೊಳ್ಳುವುದು, ಪದೇ ಪದೇ ಯೋಚಿಸುವುದನ್ನೂ ಕಡಿಮೆ ಮಾಡಬೇಕು. ಮತ್ತು ಮೊದಲು ಆಗಬೇಕು ಅನಿಸಿರುವ ಕೆಲಸ ಮಾಡಬೇಕು. ಕಾರ್ಯರೂಪಕ್ಕೆ ತೊಡಗಿಕೊಳ್ಳಬೇಕು.

ನಾವು ಯಾವುದೇ ಕೆಲಸ ಮಾಡಲು ಮುಂದಾಗದೆ ಕುಳಿತರೆ ಏನೂ ಕೈಸೇರುವುದಿಲ್ಲ. ಹಾಗಾಗಿ ಅನಿಸಿದ್ದನ್ನು ಮಾಡುವ ಧೈರ್ಯವೇ ಅತಿಮುಖ್ಯ. ಯಾವುದು ಸುಲಭವೋ ಅದನ್ನು ಮಾಡಲು ನಾವು ಮುಂದುವರಿಯುತ್ತೇವೆ. ಅದನ್ನು ಕೂಡ ಮೀರಬೇಕು. ಇವೆಲ್ಲವನ್ನೂ ಮೀರಲು ದಿಟ್ಟತನವೇ ಔಷಧ. ಧೈರ್ಯ, ಮನೋಬಲವೇ ಮದ್ದು.

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ

ಕೊವಿಡ್​ನಿಂದ ‘ವರ್ಕ್ ಫ್ರಮ್ ಹೋಮ್’ ಮಾತ್ರವಲ್ಲ.. ಹೆಚ್ಚಿದೆ ‘ಹೋಮ್ ಹೆಲ್ತ್ ಕೇರ್’ ಸೇವೆ

Published On - 10:10 pm, Mon, 1 February 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ