ತೆರಿಗೆ ವಂಚಿಸಲು ಈ ಐಷಾರಾಮಿ ಬಸ್​ ಮಾಲೀಕ ಮಾಡಿದ್ದೇನು ಗೊತ್ತಾ?

ಮೈಸೂರು: ಸಾರಿಗೆ ಇಲಾಖೆ, ತೆರಿಗೆ ಇಲಾಖೆ, ಪೊಲೀಸರಿಗೆ ಇಂತಹ ಪ್ರಕರಣಗಳು ಸಾಮಾನ್ಯವೇ.. ತೆರಿಗೆ ವಂಚಿಸಲು ಐಷಾರಾಮಿ ಬಸ್ ಮಾಲೀಕನಾಡಿದ ಕಳ್ಳಾಟ ಬಯಲಾಗುತ್ತಿದ್ದಂತೆ ನಂಜನಗೂಡು ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ. ತೆರಿಗೆ ವಂಚಿಸಲು ಕಾಮಧೇನು ಹೆಸರಿನ ಐಷಾರಾಮಿ ಬಸ್ ಮಾಲೀಕನೊಬ್ಬ ಕಿಲಾಡಿ ಐಡಿಯಾ ಮಾಡಿದ್ದ. ಕೆಎ11 ಬಿ 2969 ನೋಂದಣಿ ಸಂಖ್ಯೆಯನ್ನು ಹೊಂದಿರೂ ಎರಡು ಬಸ್​ಗಳನ್ನು ಇಟ್ಟುಕೊಂಡಿದ್ದ. ಸದ್ಯ ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್ಐ […]

ತೆರಿಗೆ ವಂಚಿಸಲು ಈ ಐಷಾರಾಮಿ ಬಸ್​ ಮಾಲೀಕ ಮಾಡಿದ್ದೇನು ಗೊತ್ತಾ?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 27, 2020 | 10:01 AM

ಮೈಸೂರು: ಸಾರಿಗೆ ಇಲಾಖೆ, ತೆರಿಗೆ ಇಲಾಖೆ, ಪೊಲೀಸರಿಗೆ ಇಂತಹ ಪ್ರಕರಣಗಳು ಸಾಮಾನ್ಯವೇ.. ತೆರಿಗೆ ವಂಚಿಸಲು ಐಷಾರಾಮಿ ಬಸ್ ಮಾಲೀಕನಾಡಿದ ಕಳ್ಳಾಟ ಬಯಲಾಗುತ್ತಿದ್ದಂತೆ ನಂಜನಗೂಡು ಪೊಲೀಸರು ಕಳ್ಳಾಟಕ್ಕೆ ಬ್ರೇಕ್ ಹಾಕಿದ್ದಾರೆ. ಒಂದೇ ನೋಂದಣಿ ಸಂಖ್ಯೆಯ ಎರಡು ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ತೆರಿಗೆ ವಂಚಿಸಲು ಕಾಮಧೇನು ಹೆಸರಿನ ಐಷಾರಾಮಿ ಬಸ್ ಮಾಲೀಕನೊಬ್ಬ ಕಿಲಾಡಿ ಐಡಿಯಾ ಮಾಡಿದ್ದ. ಕೆಎ11 ಬಿ 2969 ನೋಂದಣಿ ಸಂಖ್ಯೆಯನ್ನು ಹೊಂದಿರೂ ಎರಡು ಬಸ್​ಗಳನ್ನು ಇಟ್ಟುಕೊಂಡಿದ್ದ. ಸದ್ಯ ನಂಜನಗೂಡಿನ ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮತ್ತು ಪಿಎಸ್ಐ ರವಿಕುಮಾರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಒಂದೇ ನೋಂದಣಿಯ ಎರಡೂ ಎರಡು ಐಷಾರಾಮಿ ಬಸ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮೈಸೂರು ಜೆ.ಎಲ್.ಬಿ ರಸ್ತೆಯ ಪೆಟ್ರೋಲ್ ಬಂಕ್​ನಲ್ಲಿ ನಿಲುಗಡೆಯಾಗಿದ್ದ ಒಂದು ಬಸ್ ಹಾಗೂ ನಂಜನಗೂಡು ಪಟ್ಟಣದ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿದ್ದ ಮತ್ತೊಂದು ಬಸ್​ ಅನ್ನು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಮೈಸೂರಿನ ಆರ್​ಟಿಓ ಕಚೇರಿಗೆ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ಪತ್ರ ಬರೆದಿದ್ದಾರೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us