AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಯಕ್ತಿಕ ದ್ವೇಷಕ್ಕೆ ಮನೆಯ ಮೇಲೆ ಕಲ್ಲೆಸೆದು ಧ್ವಂಸ, ಪೀಠೋಪಕರಣಗಳು ಹಾನಿ

ಮೈಸೂರು: ವೈಯಕ್ತಿಕ ದ್ವೇಷಕ್ಕೆ ಮನೆಯ ಮೇಲೆ ಕಲ್ಲೆಸೆದು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ. ಮನೆ ಮೇಲ್ಚಾವಣಿ, ವಸ್ತುಗಳಿಗೆ ಹಾನಿಯಾಗಿದೆ. ಮೋರಿ ವಿಚಾರವಾಗಿ ಹರಿಕಥೆ ಕಲಾವಿದ ಸಚಿನ್ ಹಾಗೂ ಪಕ್ಕದ‌ ಮನೆಯ ಸುರೇಶ್ ನಡುವೆ ಜಗಳವಾಗಿತ್ತು. ಈ ದ್ವೇಷಕ್ಕೆ ಸುರೇಶ್, ಸಚಿನ್ ಮನೆ ಮೇಲ್ಛಾವಣಿ ಮೇಲೆ ಕಲ್ಲೆಸೆದು ಧ್ವಂಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಚಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುಷ್ಕೃತ್ಯ ನಡೆದಿದೆ. ಮೇಲ್ಛಾವಣಿ ಹೊಡೆದು ಹೋಗಿರುವ ಪರಿಣಾಮ ಮನೆಯಲ್ಲಿದ್ದ ಟಿವಿ, […]

ವೈಯಕ್ತಿಕ ದ್ವೇಷಕ್ಕೆ ಮನೆಯ ಮೇಲೆ ಕಲ್ಲೆಸೆದು ಧ್ವಂಸ, ಪೀಠೋಪಕರಣಗಳು ಹಾನಿ
ಆಯೇಷಾ ಬಾನು
ಆಯೇಷಾ ಬಾನು|

Updated on: Oct 29, 2020 | 9:15 AM

Share

ಮೈಸೂರು: ವೈಯಕ್ತಿಕ ದ್ವೇಷಕ್ಕೆ ಮನೆಯ ಮೇಲೆ ಕಲ್ಲೆಸೆದು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ. ಮನೆ ಮೇಲ್ಚಾವಣಿ, ವಸ್ತುಗಳಿಗೆ ಹಾನಿಯಾಗಿದೆ.

ಮೋರಿ ವಿಚಾರವಾಗಿ ಹರಿಕಥೆ ಕಲಾವಿದ ಸಚಿನ್ ಹಾಗೂ ಪಕ್ಕದ‌ ಮನೆಯ ಸುರೇಶ್ ನಡುವೆ ಜಗಳವಾಗಿತ್ತು. ಈ ದ್ವೇಷಕ್ಕೆ ಸುರೇಶ್, ಸಚಿನ್ ಮನೆ ಮೇಲ್ಛಾವಣಿ ಮೇಲೆ ಕಲ್ಲೆಸೆದು ಧ್ವಂಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಚಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುಷ್ಕೃತ್ಯ ನಡೆದಿದೆ.

ಮೇಲ್ಛಾವಣಿ ಹೊಡೆದು ಹೋಗಿರುವ ಪರಿಣಾಮ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ. ಈ ಬಗ್ಗೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.