ಭಾರಿ ಮಳೆಗೆ ಕುಸಿದು ಬಿತ್ತು ಛಾವಣಿ.. ಏಕಾಂಗಿಯಾದ್ಳು ಅಜ್ಜಿ

ಚಿಕ್ಕಬಳ್ಳಾಪುರ: ಮಳೆಗೆ ಮನೆಯ ಮೇಲ್ಛಾವಣಿ ಕುಸಿದುಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ಜಾತವಾರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ(70) ಮೃತ ದುರ್ದೈವಿ. ಘಟನೆಯಲ್ಲಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಛಾವಣಿ ಕುಸಿದಿದೆ. ಈ ಪರಿಣಾಮ ಇಂತಹ ದುರಂತ ಘಟನೆಗೆ ಕಾರಣವಾಗಿದೆ. ಛಾವಣಿ ಕುಸಿದು ಆಶ್ರಯದಾತನಾಗಿ, ತನಗೆ ನೆರಳಾಗಿ ಜೊತೆ ಇದ್ದ ಗಂಡನನ್ನು ಪತ್ನಿ ಕಳೆದುಕೊಂಡಿದ್ದಾಳೆ. ಗಂಡನ ಶವದ ಮುಂದೆ ಅಜ್ಜಿಯ ಕಣ್ಣೀರು ವರ್ಷಧಾರೆಯನ್ನೇ ಶಪಿಸುವಂತಿದೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭಾರಿ ಮಳೆಗೆ ಕುಸಿದು ಬಿತ್ತು ಛಾವಣಿ.. ಏಕಾಂಗಿಯಾದ್ಳು ಅಜ್ಜಿ
Edited By:

Updated on: Jul 17, 2020 | 9:43 AM

ಚಿಕ್ಕಬಳ್ಳಾಪುರ: ಮಳೆಗೆ ಮನೆಯ ಮೇಲ್ಛಾವಣಿ ಕುಸಿದುಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ಜಾತವಾರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ(70) ಮೃತ ದುರ್ದೈವಿ. ಘಟನೆಯಲ್ಲಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಛಾವಣಿ ಕುಸಿದಿದೆ. ಈ ಪರಿಣಾಮ ಇಂತಹ ದುರಂತ ಘಟನೆಗೆ ಕಾರಣವಾಗಿದೆ. ಛಾವಣಿ ಕುಸಿದು ಆಶ್ರಯದಾತನಾಗಿ, ತನಗೆ ನೆರಳಾಗಿ ಜೊತೆ ಇದ್ದ ಗಂಡನನ್ನು ಪತ್ನಿ ಕಳೆದುಕೊಂಡಿದ್ದಾಳೆ. ಗಂಡನ ಶವದ ಮುಂದೆ ಅಜ್ಜಿಯ ಕಣ್ಣೀರು ವರ್ಷಧಾರೆಯನ್ನೇ ಶಪಿಸುವಂತಿದೆ.ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 9:40 am, Fri, 17 July 20