ದೀಪಾವಳಿ ದಿನದಂದೆ ಪತ್ನಿಯನ್ನು ಕೊಂದು ಬೆಂಕಿ ಇಟ್ಟು ಎಸ್ಕೇಪ್ ಆದ ಗ್ರಾಮ ಪಂಚಾಯಿತಿ ಸದಸ್ಯ..

ಮೈಸೂರು: ದೀಪಾವಳಿ ಹಬ್ಬದ ದಿನವೇ ಪತ್ನಿ ಹತ್ಯೆಗೈದು ಶವವನ್ನು ಸುಟ್ಟುಹಾಕಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ದೊಡ್ಡಮುಲಗೋಡು ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ(22) ಹತ್ಯೆಯಾದ ಮಹಿಳೆ. ದೊಡ್ಡಮುಲಗೂಡು ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಆರೋಪಿ ರಮೇಶ್(30), ದೀಪಾವಳಿ ಹಬ್ಬದ ದಿನವೇ ಹೆಂಡತಿಗೆ ಬೆಂಕಿಯಿಟ್ಟು ಸುಟ್ಟಿದ್ದಾನೆ. ಮೊದಲು ಪತ್ನಿಯನ್ನು ಕೊಲೆ ಮಾಡಿ ನಂತರ ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿದ್ದಾನೆ. ಬಳಿಕ ಆರೋಪಿ ಎಸ್ಕೇಪ್ ಆಗಿದ್ದು ತಲೆ ಮರಿಸಿಕೊಂಡಿದ್ದಾನೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಹಾಗೂ ಆರೋಪಿ […]

ದೀಪಾವಳಿ ದಿನದಂದೆ ಪತ್ನಿಯನ್ನು ಕೊಂದು ಬೆಂಕಿ ಇಟ್ಟು ಎಸ್ಕೇಪ್ ಆದ ಗ್ರಾಮ ಪಂಚಾಯಿತಿ ಸದಸ್ಯ..

Updated on: Nov 15, 2020 | 8:49 AM

ಮೈಸೂರು: ದೀಪಾವಳಿ ಹಬ್ಬದ ದಿನವೇ ಪತ್ನಿ ಹತ್ಯೆಗೈದು ಶವವನ್ನು ಸುಟ್ಟುಹಾಕಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ದೊಡ್ಡಮುಲಗೋಡು ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ(22) ಹತ್ಯೆಯಾದ ಮಹಿಳೆ.

ದೊಡ್ಡಮುಲಗೂಡು ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಆರೋಪಿ ರಮೇಶ್(30), ದೀಪಾವಳಿ ಹಬ್ಬದ ದಿನವೇ ಹೆಂಡತಿಗೆ ಬೆಂಕಿಯಿಟ್ಟು ಸುಟ್ಟಿದ್ದಾನೆ. ಮೊದಲು ಪತ್ನಿಯನ್ನು ಕೊಲೆ ಮಾಡಿ ನಂತರ ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿದ್ದಾನೆ. ಬಳಿಕ ಆರೋಪಿ ಎಸ್ಕೇಪ್ ಆಗಿದ್ದು ತಲೆ ಮರಿಸಿಕೊಂಡಿದ್ದಾನೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಹಾಗೂ ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 10 ಜನ ಸಾವು

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
Follow Us