Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ […]

ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?
Follow us
ಆಯೇಷಾ ಬಾನು
|

Updated on:Nov 15, 2020 | 3:06 PM

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ ಗೆಳತಿಯ ಹಳೇ ಪ್ರೇಮದ ವಿಚಾರವನ್ನು ತಿಳಿದ ಬಳಿಕ ಗೆಳತಿಗೆ ಬ್ಲಾಕ್ ಮೇಲ್ ಮಾಡಿ ಹಣ ಮಾಡಲು ಸ್ಕೆಚ್ ಹಾಕಿದ್ದಾಳೆ. ಹಳೇ ಪ್ರಿಯಕರನ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ಪಡೆದು ಮೋಸ ಮಾಡುತ್ತಿದ್ದಳಂತೆ.

ತನ್ನ ಗೆಳತಿಯ ಲವ್ ಸ್ಟೋರಿ ತಿಳಿದುಕೊಂಡಿದ್ದ ಅನು ಅದನ್ನೇ ಬಂಡವಾಳ ಮಾಡಿಕೊಂಡು ಹಣಕ್ಕೋಸ್ಕರ ಪ್ರಿಯಕರನ ಹೆಸರಲ್ಲಿ ಸಂದೇಶ ಕಳುಹಿಸಿದ್ದಳಂತೆ. ಫೇಕ್ ಮೆಸೇಜ್​ನ್ನು ನೋಡಿ ಸಂತ್ರಸ್ತೆ ಗಾಬರಿಗೊಂಡಿದ್ರು. ನಂತರ ನಿನ್ನ ಹಳೇ ಬಾಯ್​ಫ್ರೆಂಡ್​ನ ಈಗಿನ ಪ್ರಿಯತಮೆ ನಾನು ಎಂದು ಪರಿಚಯ ಮಾಡಿಕೊಂಡು ನಿನ್ನ ಹಾಗೂ ಹಳೇ ಪ್ರಿಯತಮನ ಫೋಟೋಗಳು ನನ್ನ ಬಳಿ ಇವೆ. ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ ಎಂದು ಹಣಕ್ಕೆ ಬೇಡಿಕೆ ಇಟ್ಟು ಒಂದು ಲಕ್ಷ ಹಣವನ್ನ ಅಪರ್ಣ ಅಕೌಂಟಿಗೆ ಕಳಿಸುವಂತೆ ಡಿಮ್ಯಾಂಡ್ ಮಾಡಿದ್ದಳಂತೆ.

ಹಣ ನೀಡದಿದ್ದರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇನೆ. ಫೋಟೋ, ವಿಡಿಯೋಗಳನ್ನು ಮನೆಯವರಿಗೆ ಕಳಿಸ್ತೇನೆಂದು ಬೆದರಿಕೆ ಹಾಕಿ ನಿರಂತರ ಬ್ಲ್ಯಾಕ್​ಮೇಲ್ ಮಾಡಿ ಸುಮಾರು ₹1.25 ಕೋಟಿ ವಸೂಲಿ ಮಾಡಿದ್ದಳಂತೆ. ಹೀಗಾಗಿ ವೈಟ್​ಫೀಲ್ಡ್ ಠಾಣೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಅಪರ್ಣನನ್ನು ಅರೆಸ್ಟ್ ಮಾಡಿದ್ದಾರೆ.

Published On - 9:39 am, Sun, 15 November 20

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!