AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ […]

ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?
ಆಯೇಷಾ ಬಾನು
ಆಯೇಷಾ ಬಾನು|

Updated on:Nov 15, 2020 | 3:06 PM

Share

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ ಗೆಳತಿಯ ಹಳೇ ಪ್ರೇಮದ ವಿಚಾರವನ್ನು ತಿಳಿದ ಬಳಿಕ ಗೆಳತಿಗೆ ಬ್ಲಾಕ್ ಮೇಲ್ ಮಾಡಿ ಹಣ ಮಾಡಲು ಸ್ಕೆಚ್ ಹಾಕಿದ್ದಾಳೆ. ಹಳೇ ಪ್ರಿಯಕರನ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ಪಡೆದು ಮೋಸ ಮಾಡುತ್ತಿದ್ದಳಂತೆ.

ತನ್ನ ಗೆಳತಿಯ ಲವ್ ಸ್ಟೋರಿ ತಿಳಿದುಕೊಂಡಿದ್ದ ಅನು ಅದನ್ನೇ ಬಂಡವಾಳ ಮಾಡಿಕೊಂಡು ಹಣಕ್ಕೋಸ್ಕರ ಪ್ರಿಯಕರನ ಹೆಸರಲ್ಲಿ ಸಂದೇಶ ಕಳುಹಿಸಿದ್ದಳಂತೆ. ಫೇಕ್ ಮೆಸೇಜ್​ನ್ನು ನೋಡಿ ಸಂತ್ರಸ್ತೆ ಗಾಬರಿಗೊಂಡಿದ್ರು. ನಂತರ ನಿನ್ನ ಹಳೇ ಬಾಯ್​ಫ್ರೆಂಡ್​ನ ಈಗಿನ ಪ್ರಿಯತಮೆ ನಾನು ಎಂದು ಪರಿಚಯ ಮಾಡಿಕೊಂಡು ನಿನ್ನ ಹಾಗೂ ಹಳೇ ಪ್ರಿಯತಮನ ಫೋಟೋಗಳು ನನ್ನ ಬಳಿ ಇವೆ. ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ ಎಂದು ಹಣಕ್ಕೆ ಬೇಡಿಕೆ ಇಟ್ಟು ಒಂದು ಲಕ್ಷ ಹಣವನ್ನ ಅಪರ್ಣ ಅಕೌಂಟಿಗೆ ಕಳಿಸುವಂತೆ ಡಿಮ್ಯಾಂಡ್ ಮಾಡಿದ್ದಳಂತೆ.

ಹಣ ನೀಡದಿದ್ದರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇನೆ. ಫೋಟೋ, ವಿಡಿಯೋಗಳನ್ನು ಮನೆಯವರಿಗೆ ಕಳಿಸ್ತೇನೆಂದು ಬೆದರಿಕೆ ಹಾಕಿ ನಿರಂತರ ಬ್ಲ್ಯಾಕ್​ಮೇಲ್ ಮಾಡಿ ಸುಮಾರು ₹1.25 ಕೋಟಿ ವಸೂಲಿ ಮಾಡಿದ್ದಳಂತೆ. ಹೀಗಾಗಿ ವೈಟ್​ಫೀಲ್ಡ್ ಠಾಣೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಅಪರ್ಣನನ್ನು ಅರೆಸ್ಟ್ ಮಾಡಿದ್ದಾರೆ.

Published On - 9:39 am, Sun, 15 November 20

Follow Us
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ