AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ […]

ದಿಢೀರ್ ಹಳೇ ಪ್ರಿಯಕರನ ಹೆಸರಲ್ಲಿ ಬಂದಿತ್ತು ಕಾಲ್.. ಇದನ್ನು ನಂಬಿದ ಗೃಹಿಣಿಯ ಕತೆ ಏನಾಯ್ತು ಗೊತ್ತಾ?
ಆಯೇಷಾ ಬಾನು
|

Updated on:Nov 15, 2020 | 3:06 PM

Share

ಬೆಂಗಳೂರು: ಹಣದ ಆಸೆಗೆ ತನ್ನ ಆಪ್ತ ಸ್ನೇಹಿತೆಗೆ ದೋಖಾ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸದ್ಯ ಆರೋಪಿ ಅನು ಅಲಿಯಾಸ್ ಅಪರ್ಣನನ್ನು ವೈಟ್​ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತರು ಅಂದ್ರೆ ನಮ್ಮ ನೆರಳಿನ ಹಾಗೆ ಇರಬೇಕು ಅಂತ ಇಷ್ಟಪಡೋ ಮಂದಿಯೇ ಹೆಚ್ಚು. ಅದರಲ್ಲೂ ತಮ್ಮ ಕಷ್ಟ-ಸುಖಗಳನ್ನು ಅವರ ಬಳಿ ಹಂಚಿಕೊಳ್ಳುತ್ತಾರೆ. ಕುಟುಂಬದವರಿಗಿಂತ ಹೆಚ್ಚಿನ ವಿಶ್ವಾಸ ಇಡ್ತಾರೆ. ಆದರೆ ಅದೇ ಸ್ನೇಹಿತರು ಕಂಟಕವಾದ್ರೆ.. ಇದೇ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅನು ತನ್ನ ಆಪ್ತ ಗೆಳತಿಯ ಹಳೇ ಪ್ರೇಮದ ವಿಚಾರವನ್ನು ತಿಳಿದ ಬಳಿಕ ಗೆಳತಿಗೆ ಬ್ಲಾಕ್ ಮೇಲ್ ಮಾಡಿ ಹಣ ಮಾಡಲು ಸ್ಕೆಚ್ ಹಾಕಿದ್ದಾಳೆ. ಹಳೇ ಪ್ರಿಯಕರನ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ಪಡೆದು ಮೋಸ ಮಾಡುತ್ತಿದ್ದಳಂತೆ.

ತನ್ನ ಗೆಳತಿಯ ಲವ್ ಸ್ಟೋರಿ ತಿಳಿದುಕೊಂಡಿದ್ದ ಅನು ಅದನ್ನೇ ಬಂಡವಾಳ ಮಾಡಿಕೊಂಡು ಹಣಕ್ಕೋಸ್ಕರ ಪ್ರಿಯಕರನ ಹೆಸರಲ್ಲಿ ಸಂದೇಶ ಕಳುಹಿಸಿದ್ದಳಂತೆ. ಫೇಕ್ ಮೆಸೇಜ್​ನ್ನು ನೋಡಿ ಸಂತ್ರಸ್ತೆ ಗಾಬರಿಗೊಂಡಿದ್ರು. ನಂತರ ನಿನ್ನ ಹಳೇ ಬಾಯ್​ಫ್ರೆಂಡ್​ನ ಈಗಿನ ಪ್ರಿಯತಮೆ ನಾನು ಎಂದು ಪರಿಚಯ ಮಾಡಿಕೊಂಡು ನಿನ್ನ ಹಾಗೂ ಹಳೇ ಪ್ರಿಯತಮನ ಫೋಟೋಗಳು ನನ್ನ ಬಳಿ ಇವೆ. ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ ಎಂದು ಹಣಕ್ಕೆ ಬೇಡಿಕೆ ಇಟ್ಟು ಒಂದು ಲಕ್ಷ ಹಣವನ್ನ ಅಪರ್ಣ ಅಕೌಂಟಿಗೆ ಕಳಿಸುವಂತೆ ಡಿಮ್ಯಾಂಡ್ ಮಾಡಿದ್ದಳಂತೆ.

ಹಣ ನೀಡದಿದ್ದರೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತೇನೆ. ಫೋಟೋ, ವಿಡಿಯೋಗಳನ್ನು ಮನೆಯವರಿಗೆ ಕಳಿಸ್ತೇನೆಂದು ಬೆದರಿಕೆ ಹಾಕಿ ನಿರಂತರ ಬ್ಲ್ಯಾಕ್​ಮೇಲ್ ಮಾಡಿ ಸುಮಾರು ₹1.25 ಕೋಟಿ ವಸೂಲಿ ಮಾಡಿದ್ದಳಂತೆ. ಹೀಗಾಗಿ ವೈಟ್​ಫೀಲ್ಡ್ ಠಾಣೆ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಅಪರ್ಣನನ್ನು ಅರೆಸ್ಟ್ ಮಾಡಿದ್ದಾರೆ.

Published On - 9:39 am, Sun, 15 November 20

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​