ಲಾಂಗು, ಮಚ್ಚಿನಿಂದ ಕೊಚ್ಚಿ ಕೊಚ್ಚಿ ಯುವಕನ ಬರ್ಬರ ಕೊಲೆ.. ಹಂತಕರ ಸುಳಿವು ಬಿಚ್ಚಿಟ್ಟ ಮೂರನೇ ಕಣ್ಣು!

ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸಮೀಪ ನಿನ್ನೆ ರಾತ್ರಿ 8ಗಂಟೆ ಸುಮಾರಿಗೆ ಲಾಂಗು ಮಚ್ಚು ಹಿಡಿದು ಬಂದ ಮೂವರು ಹಂತಕರು ರಘು ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಲಾಂಗು, ಮಚ್ಚಿನಿಂದ ಕೊಚ್ಚಿ ಕೊಚ್ಚಿ ಯುವಕನ ಬರ್ಬರ ಕೊಲೆ.. ಹಂತಕರ ಸುಳಿವು ಬಿಚ್ಚಿಟ್ಟ ಮೂರನೇ ಕಣ್ಣು!
ಕೊಲೆ ಮಾಡಿ ಎಸ್ಕೇಪ್ ಆಗುತ್ತಿರುವ ಹಂತಕರು
ಆಯೇಷಾ ಬಾನು

Updated on: Dec 06, 2020 | 11:10 AM

ಹಾಸನ: ತಡ ರಾತ್ರಿ ಯುವಕನ‌ ಭೀಕರ ಹತ್ಯೆ ನಡೆದಿದೆ. ಹತ್ಯೆ ಮಾಡಿ ಹಂತಕರು ಎಸ್ಕೇಪ್ ಆಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಘು(26) ಕೊಲೆಯಾದ ಯುವಕ.

ಹಾಸನದ ಸಾಲಗಾಮೆ ರಸ್ತೆಯ ಅರಳಿಕಟ್ಟೆ ಸಮೀಪ ನಿನ್ನೆ ರಾತ್ರಿ 8ಗಂಟೆ ಸುಮಾರಿಗೆ ಲಾಂಗು ಮಚ್ಚು ಹಿಡಿದು ಬಂದ ಮೂವರು ಹಂತಕರು ರಘು ಮೇಲೆ ಹಲ್ಲೆ ನಡೆಸಿದ್ದಾರೆ. ನಡು ರಸ್ತೆಯಲ್ಲಿ ಲಾಂಗು ಮಚ್ಚಿನಿಂದ ಅಟ್ಯಾಕ್ ಮಾಡಿದ ಪರಿಣಾಮ ರಘು ಮೃತಪಟ್ಟಿದ್ದಾನೆ. ಬಳಿಕ ಬೈಕ್​ನಲ್ಲಿ ಬಂದ ಸ್ನೇಹಿತ ಆ ಮೂವರು ಹಂತಕರನ್ನು ಕೂರಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

ಕೈಯಲ್ಲಿ ಲಾಂಗ್ ಹಿಡಿದೇ ನಾಲ್ವರು ಒಂದೇ ಬೈಕ್​ನಲ್ಲಿ ಹೋಗ್ತಿರೋ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇವರು ಹಾಸನದ ಸಾಲಗಾಮೆ ರಸ್ತೆ ಮೂಲಕ ಎಸ್ಕೇಪ್ ಆಗಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಲು ಮತ್ತೊಬ್ಬ ಸಹಾಯ ಮಾಡಿದ್ದಾನೆ ಎಂಬುವುದು ಸಿಸಿ ಟಿವಿಯಿಂದ ಸಾಭೀತಾಗುತ್ತೆ. ಸದ್ಯ ಈಗ ಲಭ್ಯವಿರುವ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ. ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಜೈಲು ಪಾಲಾದ ಕುಡುಕ ಪತಿ

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us