Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ​ಕ್ಲಾಸ್​ ಅಂತಾ ಅಪ್ಪನ ಮೊಬೈಲ್​ ಪಡೆದ ಮಗಳಿಗೆ ಕಂಡಿದ್ದು ಪಾಠ ಅಲ್ಲ.. ಪಲ್ಲಂಗದ ಆಟ

ಎಂದಿನಂತೆ ಕ್ಲಾಸ್ ಕೇಳ್ತಾ ಇದ್ದ ಮಗಳು ಅಪ್ಪನ ಮೊಬೈಲ್​ನ ಜಾಲಾಡಿದ್ದಾಳೆ.. ಹಾಗೇ ಸುಮ್ಮನೆ! ಆ ಸಂದರ್ಭದಲ್ಲಿ ತನ್ನ ಪಿತಾಶ್ರೀಯವರ ರಾಸಲೀಲೆಯ ವೀಡಿಯೋ ಒಂದು ಈಕೆ ಕಣ್ಣಿಗೆ ಬಿದ್ದಿದೆ.

ಆನ್​ಲೈನ್​ ​ಕ್ಲಾಸ್​ ಅಂತಾ ಅಪ್ಪನ ಮೊಬೈಲ್​ ಪಡೆದ ಮಗಳಿಗೆ ಕಂಡಿದ್ದು ಪಾಠ ಅಲ್ಲ.. ಪಲ್ಲಂಗದ ಆಟ
ಕುಮಾರ (ಎಡ); ಸಾಂದರ್ಭಿಕ ಚಿತ್ರ (ಬಲ)
Follow us
Skanda
|

Updated on:May 07, 2021 | 10:07 AM

ಮಂಡ್ಯ: ಕೊರೊನಾ ಬಂದ್ಮೇಲೆ ಮಕ್ಕಳಿಗೆ ಮನೆಯೇ ಪಾಠಶಾಲೆಯಾಗಿದ್ದು ಮೊಬೈಲ್​ನಲ್ಲೇ ತಮ್ಮ ಟೀಚರ್​ನ ನೋಡೋ ಪರಿಸ್ಥಿತಿ. ಮೊಬೈಲ್​ ಮುಟ್ಟಿದ್ರೆ ಬೈತಾ ಇದ್ದ ಅಪ್ಪ ಅಮ್ಮಂದಿರು ಈಗ ತಾವೇ ಮಕ್ಕಳಿಗೆ ಮೊಬೈಲ್​ ಕೊಟ್ಟು ಕೂರಿಸ್ತಾ ಇದ್ದಾರೆ. ಇದೇ ರೀತಿ, ಇಲ್ಲೊಬ್ಬ ತನ್ನ ಮಗಳ ಆನ್​ಲೈನ್​ ಕ್ಲಾಸ್​ಗಾಗಿ ತನ್ನ ಮೊಬೈಲ್​ ಕೊಟ್ಟು ದೊಡ್ಡ ಫಜೀತಿಗೆ ಸಿಲುಕಿದ್ದಾನೆ. ತನ್ನ ಮೊಬೈಲ್​ನಲ್ಲಿ ಸೇವ್​ ಮಾಡಿದ್ದ ಮಂಚದಾಟ ಇದೀಗ ಬಯಲಾಗಿದ್ದು ತಾನೇ ಕೋಲು ಕೊಟ್ಟು ಪೆಟ್ಟು ತಿಂದಂತೆ ಆಗಿದೆ.

ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರ ಕುಮಾರ್ ಎಂಬಾತ ಮಗಳ ಆನ್​ಲೈನ್ ಕ್ಲಾಸ್​ಗಾಗಿ ತನ್ನ ಮೊಬೈಲ್ ಕೊಟ್ಟಿದ್ದ. ಎಂದಿನಂತೆ ಕ್ಲಾಸ್ ಕೇಳ್ತಾ ಇದ್ದ ಮಗಳು ಅಪ್ಪನ ಮೊಬೈಲ್​ನ ಜಾಲಾಡಿದ್ದಾಳೆ.. ಹಾಗೇ ಸುಮ್ಮನೆ! ಆ ಸಂದರ್ಭದಲ್ಲಿ ತನ್ನ ಪಿತಾಶ್ರೀಯವರ ರಾಸಲೀಲೆಯ ವೀಡಿಯೋ ಒಂದು ಈಕೆ ಕಣ್ಣಿಗೆ ಬಿದ್ದಿದೆ.

ಪರಸ್ತ್ರೀಯೊಂದಿಗೆ ಪಲ್ಲಂಗವೇರಿದ ಪತಿರಾಯ ವಿಡಿಯೋವನ್ನು ನೋಡಿದ ಮಗಳು ಸೀದಾ ಅಮ್ಮನ ಬಳಿ ಹೋಗಿ ಮೊಬೈಲ್​ ತೋರಿಸಿದ್ದಾಳೆ. ಯಾವಾಗ, ಕುಮಾರನ ಹೆಂಡತಿ ಆ ವಿಡಿಯೋವನ್ನು ನೋಡಿದಳೋ ಅಲ್ಲಿಗೆ ಅವನ ಮುಖವಾಡಗಳೆಲ್ಲಾ ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಪರಸ್ತ್ರೀಯೊಂದಿಗೆ ಪಲ್ಲಂಗ ಏರಿದ್ದ ಕುಮಾರ ಮೊಬೈಲಿನಲ್ಲಿ ತನ್ನ ಕಾಮದಾಟವನ್ನು ರೆಕಾರ್ಡ್​ ಮಾಡಿಟ್ಟುಕೊಂಡು ಈಗ ತಾನೇ ಖೆಡ್ಡಾಗೆ ಬಿದ್ದಿದ್ದಾನೆ.

ಸಂಸಾರದಲ್ಲೀಗ ಬಿರುಗಾಳಿ ರಸಿಕ ಕುಮಾರನ ಅವತಾರವನ್ನು ಕಂಡ ಆತನ ಪತ್ನಿ ಸದ್ಯ ನಾಗಮಂಗಲ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಜೊತೆಗೆ, ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ.

ಮಕ್ಕಳಿಗೆ ಮೊಬೈಲ್​ ಕೊಡೋ ಮುನ್ನ ಎಚ್ಚರ! ಇತ್ತ, ಮಗಳ ಕೈಯಲ್ಲೇ ರೆಡ್ ​ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಕುಮಾರನ ಅವಸ್ಥೆ ಇರಲಾರದೇ ಇರುವೆ ಬಿಟ್ಟುಕೊಂಡವನಂತೆ ಆಗಿದೆ. ಮಾಡಬಾರದ್ದನ್ನು ಮಾಡಿ, ಬೇಡದೇ ಇರೋದ್ದನ್ನೆಲ್ಲಾ ಮೊಬೈಲ್​ನಲ್ಲಿ ಸೇವ್​ ಮಾಡಿರೋ ಪುಣ್ಯಾತ್ಮರಿಗೆ ಇದೊಂದು ಪಾಠ. ಹಾಗಾಗಿ, ಮಕ್ಕಳಿಗೆ ಮೊಬೈಲ್​ ಕೊಡೋ ಮುನ್ನ ಅದರಲ್ಲಿ ಏನಿದೆ ಅನ್ನೋದನ್ನ ಒಮ್ಮೆ ಗಮನಿಸಿ. ಇಲ್ಲವಾದರೇ, ಕಲಿಯುವ ಮಕ್ಕಳ ಎಳೆ ಮನಸ್ಸಿನ ಮೇಲೆ ಇಂಥ ಕಹಿ ನೆನಪುಗಳು ದುಷ್ಪರಿಣಾಮ ಬೀರುವುದಂತೂ ಗ್ಯಾರಂಟಿ!

ಅಶ್ಲೀಲ ವಿಡಿಯೋ ನೋಡುವಂತೆ ಪತ್ನಿಗೆ ಕಿರುಕುಳ, ಪತಿಯ ವಿರುದ್ಧ FIR

Online‌ ಮೂಲಕ ಪಾಠ ಅಲ್ಲ Drugs! ಹೈಸ್ಕೂಲ್ ವಿದ್ಯಾರ್ಥಿಗೆ ಕೊರಿಯರ್ ಮೂಲಕ ಡ್ರಗ್ಸ್ ಸಪ್ಲೈ

Published On - 11:37 am, Sun, 6 December 20

ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ