ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಕೋತಿಗಳ ಮಾರಣಹೋಮ

ದೊಡ್ಡಬಳ್ಳಾಪುರ: ಅದು ಶ್ರೀ ಕ್ಷೇತ್ರ, ಜನ ಅಲ್ಲಿಗೆ ದೋಷ ಪರಿಹಾರಕ್ಕೆಂದು ಹೋಗುತ್ತಾರೆ. ಆದರೆ ಪುಣ್ಯ ಕ್ಷೇತ್ರವೆಂದು ಖ್ಯಾತಿ ಪಡೆದಿರುವ ಈ ಕ್ಷೇತ್ರದ ಸಮೀಪ ದುಷ್ಕರ್ಮಿಗಳು ಪಾಪದ ಕೃತ್ಯವೆಸಗಿದ್ದು, ಮನುಷ್ಯನ ಪೂರ್ವಜರಾದ ಮಂಗಗಳನ್ನು ಹೀನಾಯವಾಗಿ ಸಾಯಿಸಿರುವ ಘಟನೆ ಮನಕಲುಕುವಂತಿದೆ. ಹೌದು ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಹೊರ ವಲಯದ ಮಾಕಳಿ ಬಳಿ ಕಿಡಿಗೇಡಿಗಳು ಕಳೆದ ರಾತ್ರಿ 6 ಕೋತಿಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಸಾಯಿಸಿ ರಸ್ತೆ ಮೇಲೆ ಎಸೆದಿದ್ದಾರೆ. ಬೆಳಗಿನ ಜಾವ ಸ್ಥಳೀಯ ಯುವಕರು‌ ಹೆದ್ದಾರಿ […]

ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಕೋತಿಗಳ ಮಾರಣಹೋಮ
ಸಾಧು ಶ್ರೀನಾಥ್​

Updated on: Sep 25, 2019 | 1:48 PM

ದೊಡ್ಡಬಳ್ಳಾಪುರ: ಅದು ಶ್ರೀ ಕ್ಷೇತ್ರ, ಜನ ಅಲ್ಲಿಗೆ ದೋಷ ಪರಿಹಾರಕ್ಕೆಂದು ಹೋಗುತ್ತಾರೆ. ಆದರೆ ಪುಣ್ಯ ಕ್ಷೇತ್ರವೆಂದು ಖ್ಯಾತಿ ಪಡೆದಿರುವ ಈ ಕ್ಷೇತ್ರದ ಸಮೀಪ ದುಷ್ಕರ್ಮಿಗಳು ಪಾಪದ ಕೃತ್ಯವೆಸಗಿದ್ದು, ಮನುಷ್ಯನ ಪೂರ್ವಜರಾದ ಮಂಗಗಳನ್ನು ಹೀನಾಯವಾಗಿ ಸಾಯಿಸಿರುವ ಘಟನೆ ಮನಕಲುಕುವಂತಿದೆ.

ಹೌದು ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಹೊರ ವಲಯದ ಮಾಕಳಿ ಬಳಿ ಕಿಡಿಗೇಡಿಗಳು ಕಳೆದ ರಾತ್ರಿ 6 ಕೋತಿಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಸಾಯಿಸಿ ರಸ್ತೆ ಮೇಲೆ ಎಸೆದಿದ್ದಾರೆ. ಬೆಳಗಿನ ಜಾವ ಸ್ಥಳೀಯ ಯುವಕರು‌ ಹೆದ್ದಾರಿ ರಸ್ತೆ ಮೇಲಿನ ದೃಶ್ಯ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಸತ್ತು ಬಿದ್ದಿದ್ದ ಕೋತಿಗಳ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈ ಹಿಂದೆಯೂ ಇದೇ ರೀತಿ 20 ಕೋತಿಗಳನ್ನ ದುಷ್ಕರ್ಮಿಗಳು ಸಾಯಿಸಿದ್ದರು. ಈ ಬಾರಿಯಾದರೂ ಈ ಕುರಿತು ಸೂಕ್ತ ತನಿಖೆ ‌ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುಬೇಕೆಂದು ಯುವಕರು ಒತ್ತಾಯಿಸಿದ್ದು, ಮೂಕ ಪ್ರಾಣಿಗಳ ಮೇಲೆ ಕಿಡಿಗೇಡಿಗಳಿಂದ ಆಗುತ್ತಿರುವ ಈ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us