ಡೆಡ್ಲಿ ಸರ್ಕಲ್​ನಲ್ಲಿ.. ವಾರದಲ್ಲೆರಡು ಡೆಡ್ಲಿ ಅಪಘಾತಗಳು ಗ್ಯಾರಂಟಿ!

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಎಂ.ಎಸ್ ಪಾಳ್ಯ ಸರ್ಕಲ್​ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ವಾರದಲ್ಲಿ ಕನಿಷ್ಠ ಎರಡು ಅಪಘಾತಗಳಾದ್ರೂ ಈ ಡೆಡ್ಲಿ ಸರ್ಕಲ್​ನಲ್ಲಿ ನಡೆಯುತ್ತವೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಎಂ.ಎಸ್ ಪಾಳ್ಯದ ಬಳಿ ಕಳೆದ ರಾತ್ರಿ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಟ್ರೀಟ್ ಲೈಟ್ ಇಲ್ಲದ ಕಾರಣ ಮತ್ತು ಮಳೆ ಬಂದ ಹಿನ್ನೆಲೆಯಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಆದರೆ ಈ […]

ಡೆಡ್ಲಿ ಸರ್ಕಲ್​ನಲ್ಲಿ.. ವಾರದಲ್ಲೆರಡು ಡೆಡ್ಲಿ ಅಪಘಾತಗಳು ಗ್ಯಾರಂಟಿ!
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jul 30, 2020 | 11:08 AM

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಎಂ.ಎಸ್ ಪಾಳ್ಯ ಸರ್ಕಲ್​ನಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ವಾರದಲ್ಲಿ ಕನಿಷ್ಠ ಎರಡು ಅಪಘಾತಗಳಾದ್ರೂ ಈ ಡೆಡ್ಲಿ ಸರ್ಕಲ್​ನಲ್ಲಿ ನಡೆಯುತ್ತವೆ.

ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಎಂ.ಎಸ್ ಪಾಳ್ಯದ ಬಳಿ ಕಳೆದ ರಾತ್ರಿ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಸ್ಟ್ರೀಟ್ ಲೈಟ್ ಇಲ್ಲದ ಕಾರಣ ಮತ್ತು ಮಳೆ ಬಂದ ಹಿನ್ನೆಲೆಯಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.

ಆದರೆ ಈ ರೀತಿ ವಾರದಲ್ಲಿ ಎರಡು ಪ್ರಕರಣಗಳಾದ್ರೂ ಇಲ್ಲಿ ದಾಖಲಾಗುತ್ತವೆ. ವಾಹನಗಳು ನೇರವಾಗಿ ಬಂದು ಡಿವೈಡರ್​ ಗೆ ಡಿಕ್ಕಿ ಹೊಡೆಯುತ್ತವೆ. ಕಾರು ಲಾರಿ ಸೇರಿದಂತೆ ಹಲವು ವಾಹನಗಳು ಇಲ್ಲಿ ಅಫಘಾತಕ್ಕೆ ಒಳಗಾಗಿವೆ.

Published On - 10:48 am, Thu, 30 July 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us