
ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತಿದ್ದ ಅಶೋಕಪುರಂನ ಅರಣ್ಯ ಭವನದಲ್ಲಿರುವ ಶ್ರೀಗಂಧದ ಮ್ಯೂಸಿಯಂ ಅನ್ನು ಅರಮನೆಗೆ ಶಿಫ್ಟ್ ಮಾಡಲಾಗುತ್ತಿದೆ. ಈ ಬಗ್ಗೆ ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಈಗಿರುವ ಜಾಗ ಪ್ರವಾಸಿಗರ ಭೇಟಿಗೆ ಅನಾನುಕೂಲ ಹಿನ್ನೆಲೆ..
ಅಶೋಕಪುರಂನ ಅರಣ್ಯ ಭವನದಲ್ಲಿರುವ ಶ್ರೀಗಂಧದ ಮ್ಯೂಸಿಯಂಗೆ ಪ್ರವಾಸಿಗರು ಭೇಟಿ ನೀಡಲು ಅನಾನುಕೂಲ ಹಿನ್ನೆಲೆಯಲ್ಲಿ ಅರಮನೆಗೆ ಮ್ಯೂಸಿಯಂ ಶಿಫ್ಟ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಅರಮನೆ ಆವರಣದ ಒಳಗೆ ಸೂಕ್ತ ಜಾಗ ನೋಡಿ ಮ್ಯೂಸಿಯಂ ಸ್ಥಳಾಂತರಿಸಲಾಗುತ್ತೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.