ಭಾರಿ ಅಲೆಗೆ ಮುಳುಗಿದ ಯಾಂತ್ರಿಕ ದೋಣಿ, ಸಹ ಮೀನುಗಾರರಿಂದ 8 ಮಂದಿ ರಕ್ಷಣೆ

ಕಾರವಾರ: ನಿಸರ್ಗ ಚಂಡಮಾರುತದ ಅಬ್ಬರದ ಎಫೆಕ್ಟ್​ಗೆ ಸಮುದ್ರದಲ್ಲಿ ಭಾರಿ ಅಲೆಗಳೇಳಿವೆ. ಈ ಪರಿಣಾಮ ಗೋವಾದ ಆಳಸಮುದ್ರದಲ್ಲಿ ಯಾಂತ್ರಿಕ ದೋಣಿಯೊಂದು ಮುಳುಗಿದೆ. ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದುರ್ಗಾ ಹನುಮ ಹೆಸರಿನ ಬೋಟ್ ಸಮುದ್ರಲ್ಲಿ ಮುಳುಗಡೆಯಾಗಿದೆ. ಮುಳುಗಿದ ಬೋಟ್‌ನಲ್ಲಿದ್ದ 8 ಜನರನ್ನು ಮುರಾರಿ, ಬ್ರಾಹ್ಮಿ ಹೆಸರಿನ ಬೋಟ್‌ನಲ್ಲಿದ್ದ ಸಹ ಮೀನುಗಾರರು ರಕ್ಷಿಸಿದ್ದಾರೆ. ಸದ್ಯ ಗೋವಾ ಬಂದರುಗಳತ್ತ ನೂರಾರು ಬೋಟುಗಳು ರಕ್ಷಣೆ ಪಡೆದಿವೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾರವಾರ ಪಟ್ಟಣದಲ್ಲಿ ಮತ್ತೆ ಭಾರೀ ಮಳೆ ಆರಂಭವಾಗಿದೆ.

ಭಾರಿ ಅಲೆಗೆ ಮುಳುಗಿದ ಯಾಂತ್ರಿಕ ದೋಣಿ, ಸಹ ಮೀನುಗಾರರಿಂದ 8 ಮಂದಿ ರಕ್ಷಣೆ

Updated on: Jun 03, 2020 | 3:07 PM

ಕಾರವಾರ: ನಿಸರ್ಗ ಚಂಡಮಾರುತದ ಅಬ್ಬರದ ಎಫೆಕ್ಟ್​ಗೆ ಸಮುದ್ರದಲ್ಲಿ ಭಾರಿ ಅಲೆಗಳೇಳಿವೆ. ಈ ಪರಿಣಾಮ ಗೋವಾದ ಆಳಸಮುದ್ರದಲ್ಲಿ ಯಾಂತ್ರಿಕ ದೋಣಿಯೊಂದು ಮುಳುಗಿದೆ. ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ದುರ್ಗಾ ಹನುಮ ಹೆಸರಿನ ಬೋಟ್ ಸಮುದ್ರಲ್ಲಿ ಮುಳುಗಡೆಯಾಗಿದೆ.

ಮುಳುಗಿದ ಬೋಟ್‌ನಲ್ಲಿದ್ದ 8 ಜನರನ್ನು ಮುರಾರಿ, ಬ್ರಾಹ್ಮಿ ಹೆಸರಿನ ಬೋಟ್‌ನಲ್ಲಿದ್ದ ಸಹ ಮೀನುಗಾರರು ರಕ್ಷಿಸಿದ್ದಾರೆ. ಸದ್ಯ ಗೋವಾ ಬಂದರುಗಳತ್ತ ನೂರಾರು ಬೋಟುಗಳು ರಕ್ಷಣೆ ಪಡೆದಿವೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾರವಾರ ಪಟ್ಟಣದಲ್ಲಿ ಮತ್ತೆ ಭಾರೀ ಮಳೆ ಆರಂಭವಾಗಿದೆ.

Published On - 9:33 am, Wed, 3 June 20