12.60 ಲಕ್ಷ ರೂ. ಪಂಚಾಯಿತಿ‌ ಹಣ ನುಂಗಿದ ಆರೋಪ: MLA ಕೃಷ್ಣಬೈರೇಗೌಡ ಬೆಂಬಲಿಗ ಖಾಕಿ ವಶಕ್ಕೆ

ಬೆಂಗಳೂರು: ನಕಲಿ ಬ್ಯಾಂಕ್ ಅಕೌಂಟ್ ತೆರೆದು 12.60 ಲಕ್ಷ ರೂಪಾಯಿ ಪಂಚಾಯಿತಿ‌ ಹಣವನ್ನು ನುಂಗಿರುವ ಆರೋಪದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನ‌ನ್ನ ಬಂಧಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ನಡೆದಿದೆ. ಶಾಸಕ ಕೃಷ್ಣಬೈರೇಗೌಡ ಬೆಂಬಲಿಗ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮುನೇಗೌಡನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಜಿಯೋ ಕೆಬಲ್ ಅಳವಡಿಕೆಗಾಗಿ ಪಂಚಾಯಿತಿಗೆ 12 ಲಕ್ಷದ 60 ಸಾವಿರ ರೂಪಾಯಿಗಳ DDಯನ್ನ ಗುತ್ತಿಗೆದಾರ ನೀಡಿದ್ದ ಎಂದು ತಿಳಿದುಬಂದಿದೆ. ಆದರೆ ಮುನೇಗೌಡ, ಗುತ್ತಿಗೆದಾರ ನೀಡಿದ್ದ DDಯನ್ನ ನಕಲಿ […]

12.60 ಲಕ್ಷ ರೂ. ಪಂಚಾಯಿತಿ‌ ಹಣ ನುಂಗಿದ ಆರೋಪ: MLA ಕೃಷ್ಣಬೈರೇಗೌಡ ಬೆಂಬಲಿಗ ಖಾಕಿ ವಶಕ್ಕೆ
ಸಾಧು ಶ್ರೀನಾಥ್​ Edited By:

Updated on: Sep 06, 2020 | 1:58 PM

ಬೆಂಗಳೂರು: ನಕಲಿ ಬ್ಯಾಂಕ್ ಅಕೌಂಟ್ ತೆರೆದು 12.60 ಲಕ್ಷ ರೂಪಾಯಿ ಪಂಚಾಯಿತಿ‌ ಹಣವನ್ನು ನುಂಗಿರುವ ಆರೋಪದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನ‌ನ್ನ ಬಂಧಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ನಡೆದಿದೆ.

ಶಾಸಕ ಕೃಷ್ಣಬೈರೇಗೌಡ ಬೆಂಬಲಿಗ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮುನೇಗೌಡನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಜಿಯೋ ಕೆಬಲ್ ಅಳವಡಿಕೆಗಾಗಿ ಪಂಚಾಯಿತಿಗೆ 12 ಲಕ್ಷದ 60 ಸಾವಿರ ರೂಪಾಯಿಗಳ DDಯನ್ನ ಗುತ್ತಿಗೆದಾರ ನೀಡಿದ್ದ ಎಂದು ತಿಳಿದುಬಂದಿದೆ. ಆದರೆ ಮುನೇಗೌಡ, ಗುತ್ತಿಗೆದಾರ ನೀಡಿದ್ದ DDಯನ್ನ ನಕಲಿ ಅಕೌಂಟ್ ತೆರೆದು, ಅದಕ್ಕೆ ಜಮಾಯಿಸಿ, ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಂಧಿತ ಆರೋಪಿ ಮುನೇಗೌಡ ಸಂಜಯ್ ನಗರದ HDFC ಬ್ಯಾಂಕ್​ನಲ್ಲಿ PDO ಬಾಗಲೂರು ಎಂಬ ಹೆಸರಲ್ಲಿ ನಕಲಿ ಖಾತೆ ತೆರೆದು ಈ ಕೃತ್ಯ ಎಸಗಿದ್ದಾನಂತೆ. ಈ‌ ಬಗ್ಗೆ ತನಿಖೆ ನಡೆಸುವಂತೆ ಬಾಗಲೂರು ಠಾಣೆಗೆ PDO ಅನ್ನಪೂರ್ಣೆಶ್ವರಿ ದೂರು ನೀಡಿದ್ದರು. ದೂರಿನ ಮೆರೆಗೆ ಸುದೀರ್ಘ ತನಿಖೆ ನಡೆಸಿದ ಪೊಲೀಸರು ಮುನೇಗೌಡನನ್ನು ಬಂಧಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us