Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿದ ಪಿಕ್​ಅಪ್ ಗಾಡಿ.. ಮುಂದೇನಾಯ್ತು?

ವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿಯಿರುವ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ನಡುವೆ ಬ್ಯಾರೇಜ್ ಮೇಲೆ ತೆರಳುತ್ತಿದ್ದ ವೇಳೆ ಪಿಕ್​ಅಪ್ ವಾಹನವೊಂದು ಹರಿವ ನೀರಿನ ರಭಸದಿಂದ ಅಲ್ಲೇ ಸಿಲುಕಿಕೊಂಡಿಬಿಟ್ಟಿತ್ತು. ಉಮರಾಣಿ-ಲವಗಿ ಬಳಿ ಬ್ಯಾರೇಜ್​ ಮೇಲೆ ಸಿಲುಕಿದ ವಾಹನವು ಮಹಾರಾಷ್ಟ್ರದ ಸಾದೇಪುರಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ. ಪಿಕ್​ಅಪ್ ವಾಹನವನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಆತನ ಸಹಾಯಕ್ಕೆ ಬಂದ ಸ್ಥಳೀಯರು ಟ್ರ್ಯಾಕ್ಟರ್​ ಮೂಲಕ ಸಿಲುಕಿಕೊಂಡಿದ್ದ ವಾಹನವನ್ನು […]

ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿದ ಪಿಕ್​ಅಪ್ ಗಾಡಿ.. ಮುಂದೇನಾಯ್ತು?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Sep 15, 2020 | 5:18 PM

ವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿಯಿರುವ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ನಡುವೆ ಬ್ಯಾರೇಜ್ ಮೇಲೆ ತೆರಳುತ್ತಿದ್ದ ವೇಳೆ ಪಿಕ್​ಅಪ್ ವಾಹನವೊಂದು ಹರಿವ ನೀರಿನ ರಭಸದಿಂದ ಅಲ್ಲೇ ಸಿಲುಕಿಕೊಂಡಿಬಿಟ್ಟಿತ್ತು.

ಉಮರಾಣಿ-ಲವಗಿ ಬಳಿ ಬ್ಯಾರೇಜ್​ ಮೇಲೆ ಸಿಲುಕಿದ ವಾಹನವು ಮಹಾರಾಷ್ಟ್ರದ ಸಾದೇಪುರಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ. ಪಿಕ್​ಅಪ್ ವಾಹನವನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಆತನ ಸಹಾಯಕ್ಕೆ ಬಂದ ಸ್ಥಳೀಯರು ಟ್ರ್ಯಾಕ್ಟರ್​ ಮೂಲಕ ಸಿಲುಕಿಕೊಂಡಿದ್ದ ವಾಹನವನ್ನು ಹೊರಕ್ಕೆ ತೆಗೆದರು.