ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿದ ಪಿಕ್ಅಪ್ ಗಾಡಿ.. ಮುಂದೇನಾಯ್ತು?
ವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿಯಿರುವ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ನಡುವೆ ಬ್ಯಾರೇಜ್ ಮೇಲೆ ತೆರಳುತ್ತಿದ್ದ ವೇಳೆ ಪಿಕ್ಅಪ್ ವಾಹನವೊಂದು ಹರಿವ ನೀರಿನ ರಭಸದಿಂದ ಅಲ್ಲೇ ಸಿಲುಕಿಕೊಂಡಿಬಿಟ್ಟಿತ್ತು. ಉಮರಾಣಿ-ಲವಗಿ ಬಳಿ ಬ್ಯಾರೇಜ್ ಮೇಲೆ ಸಿಲುಕಿದ ವಾಹನವು ಮಹಾರಾಷ್ಟ್ರದ ಸಾದೇಪುರಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ. ಪಿಕ್ಅಪ್ ವಾಹನವನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಆತನ ಸಹಾಯಕ್ಕೆ ಬಂದ ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ಸಿಲುಕಿಕೊಂಡಿದ್ದ ವಾಹನವನ್ನು […]

ವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿಯಿರುವ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ನಡುವೆ ಬ್ಯಾರೇಜ್ ಮೇಲೆ ತೆರಳುತ್ತಿದ್ದ ವೇಳೆ ಪಿಕ್ಅಪ್ ವಾಹನವೊಂದು ಹರಿವ ನೀರಿನ ರಭಸದಿಂದ ಅಲ್ಲೇ ಸಿಲುಕಿಕೊಂಡಿಬಿಟ್ಟಿತ್ತು.
ಉಮರಾಣಿ-ಲವಗಿ ಬಳಿ ಬ್ಯಾರೇಜ್ ಮೇಲೆ ಸಿಲುಕಿದ ವಾಹನವು ಮಹಾರಾಷ್ಟ್ರದ ಸಾದೇಪುರಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ. ಪಿಕ್ಅಪ್ ವಾಹನವನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಆತನ ಸಹಾಯಕ್ಕೆ ಬಂದ ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ಸಿಲುಕಿಕೊಂಡಿದ್ದ ವಾಹನವನ್ನು ಹೊರಕ್ಕೆ ತೆಗೆದರು.