ಭೀಮಾ ನದಿಯ ಪ್ರವಾಹದಲ್ಲಿ ಸಿಲುಕಿದ ಪಿಕ್ಅಪ್ ಗಾಡಿ.. ಮುಂದೇನಾಯ್ತು?
ವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿಯಿರುವ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ನಡುವೆ ಬ್ಯಾರೇಜ್ ಮೇಲೆ ತೆರಳುತ್ತಿದ್ದ ವೇಳೆ ಪಿಕ್ಅಪ್ ವಾಹನವೊಂದು ಹರಿವ ನೀರಿನ ರಭಸದಿಂದ ಅಲ್ಲೇ ಸಿಲುಕಿಕೊಂಡಿಬಿಟ್ಟಿತ್ತು. ಉಮರಾಣಿ-ಲವಗಿ ಬಳಿ ಬ್ಯಾರೇಜ್ ಮೇಲೆ ಸಿಲುಕಿದ ವಾಹನವು ಮಹಾರಾಷ್ಟ್ರದ ಸಾದೇಪುರಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ. ಪಿಕ್ಅಪ್ ವಾಹನವನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಆತನ ಸಹಾಯಕ್ಕೆ ಬಂದ ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ಸಿಲುಕಿಕೊಂಡಿದ್ದ ವಾಹನವನ್ನು […]

ವಿಜಯಪುರ: ಉಕ್ಕಿ ಹರಿಯುತ್ತಿರುವ ಭೀಮಾ ನದಿಯಿಂದ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ಬಳಿಯಿರುವ ಬ್ಯಾರೇಜ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ನಡುವೆ ಬ್ಯಾರೇಜ್ ಮೇಲೆ ತೆರಳುತ್ತಿದ್ದ ವೇಳೆ ಪಿಕ್ಅಪ್ ವಾಹನವೊಂದು ಹರಿವ ನೀರಿನ ರಭಸದಿಂದ ಅಲ್ಲೇ ಸಿಲುಕಿಕೊಂಡಿಬಿಟ್ಟಿತ್ತು.
ಉಮರಾಣಿ-ಲವಗಿ ಬಳಿ ಬ್ಯಾರೇಜ್ ಮೇಲೆ ಸಿಲುಕಿದ ವಾಹನವು ಮಹಾರಾಷ್ಟ್ರದ ಸಾದೇಪುರಕ್ಕೆ ಹೊರಟಿತ್ತು ಎಂದು ತಿಳಿದುಬಂದಿದೆ. ಪಿಕ್ಅಪ್ ವಾಹನವನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಬಳಿಕ ಆತನ ಸಹಾಯಕ್ಕೆ ಬಂದ ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ಸಿಲುಕಿಕೊಂಡಿದ್ದ ವಾಹನವನ್ನು ಹೊರಕ್ಕೆ ತೆಗೆದರು.

Follow Us