AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿ ಮೇಲೆ ಹಲ್ಲೆ ಆರೋಪ: ನಡುರಸ್ತೆಯಲ್ಲಿ ಪೇದೆಗೆ ಕಪಾಳ ಮೋಕ್ಷ

ಬಾಗಲಕೋಟೆ: ಗರ್ಭಿಣಿ ಹಾಗೂ ಆಕೆಯ ಮೈದುನನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಪೇದೆಗೆ ಗರ್ಭಿಣಿಯ ಕುಟುಂಬಸ್ಥರು ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಹೊಕ್ರಾಣಿ ಎಂಬ ಸಂಚಾರಿ ಪೊಲೀಸ್ ಪೇದೆಗೆ ಗರ್ಭಿಣಿ ಕಾವೇರಿ ರಾಠೋಡ ಕುಟುಂಬದವರು ಕಪಾಳಮೋಕ್ಷ ಮಾಡಿದ್ದಾರೆ. ಕುಟುಂಬದವರ ಹೊಡೆತಕ್ಕೆ ಪೇದೆಯ ಹೆಲ್ಮೆಟ್ ಹಾರಿ ಕೆಳಗೆ ಬಿದ್ದಿದೆ. ಇದೇ ವ್ಯಕ್ತಿ ಮಹಿಳೆಗೆ ಹೊಡೆದ ಎಂದು ರೊಚ್ಚಿಗೆದ್ದು ಕಪಾಳಮೋಕ್ಷ ಮಡಲಾಯಿತು. ಅಷ್ಟೇ ಅಲ್ಲದೆ, ಅಲ್ಲೇ ಇದ್ದ PSI […]

ಗರ್ಭಿಣಿ ಮೇಲೆ ಹಲ್ಲೆ ಆರೋಪ: ನಡುರಸ್ತೆಯಲ್ಲಿ ಪೇದೆಗೆ ಕಪಾಳ ಮೋಕ್ಷ
KUSHAL V
|

Updated on: Oct 19, 2020 | 3:03 PM

Share

ಬಾಗಲಕೋಟೆ: ಗರ್ಭಿಣಿ ಹಾಗೂ ಆಕೆಯ ಮೈದುನನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಪೇದೆಗೆ ಗರ್ಭಿಣಿಯ ಕುಟುಂಬಸ್ಥರು ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಹೊಕ್ರಾಣಿ ಎಂಬ ಸಂಚಾರಿ ಪೊಲೀಸ್ ಪೇದೆಗೆ ಗರ್ಭಿಣಿ ಕಾವೇರಿ ರಾಠೋಡ ಕುಟುಂಬದವರು ಕಪಾಳಮೋಕ್ಷ ಮಾಡಿದ್ದಾರೆ. ಕುಟುಂಬದವರ ಹೊಡೆತಕ್ಕೆ ಪೇದೆಯ ಹೆಲ್ಮೆಟ್ ಹಾರಿ ಕೆಳಗೆ ಬಿದ್ದಿದೆ. ಇದೇ ವ್ಯಕ್ತಿ ಮಹಿಳೆಗೆ ಹೊಡೆದ ಎಂದು ರೊಚ್ಚಿಗೆದ್ದು ಕಪಾಳಮೋಕ್ಷ ಮಡಲಾಯಿತು. ಅಷ್ಟೇ ಅಲ್ಲದೆ, ಅಲ್ಲೇ ಇದ್ದ PSI ಅನಿಲ ರಾಠೋಡರನ್ನ ಸಹ ಗರ್ಭಿಣಿ ಕುಟುಂಬದ ಕಡೆಯವರು ಹೊಡೆಯುವುದಕ್ಕೆ ಮುಂದಾದರು.

ಇನ್ನು ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಬಂದ ನಗರ CPIಐ.ಆರ್. ಪಟ್ಟಣಶೆಟ್ಟಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಂಪ್ಲೇಂಟ್ ಕೊಡುವಂತೆ ಕುಟುಂಬದವರ ಮನವೊಲಿಸಿದರು. ಜೊತೆಗೆ, ಸ್ಥಳಕ್ಕಾಗಮಿಸಿದ ಬಂಜಾರಾ ಸಮಾಜದ ಮುಖಂಡರು ಮಹಿಳೆಯನ್ನು ಟಂ ಟಂ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದರು.

ಏನಿದು ಪ್ರಕರಣ? ನವನಗರದ ನಿವಾಸಿಯಾದ ಗರ್ಭಿಣಿ ಕಾವೇರಿ ರಾಠೋಡಳನ್ನು ಆಕೆಯ ಮೈದುನ ಚಿಕಿತ್ಸೆಗೆಂದು ಬಸವೇಶ್ವರ ವೃತ್ತದ ಸಮೀಪವಿರುವ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆ ಮುಂದೆ ವಾಹನ ಪಾರ್ಕಿಂಗ್ ಮಾಡಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ಸಂಚಾರಿ ಪೇದೆ ವಾಹನದ ಬೀಗದ ಕೈ ಕಿತ್ತುಕೊಂಡರು ಎಂದು ಕಾವೇರಿ ಆರೋಪಿಸಿದ್ದಾರೆ.

ಬೀಗದ ಕೈ ಕೊಡಿ ಎಂದು ಕೇಳಿದ್ದಕ್ಕೆ ಪೊಲೀಸರು ನಮ್ಮನ್ನು ಹೊಡೆದರು ಎಂದು ಇಬ್ಬರು ಆರೋಪಿಸಿದ್ದಾರೆ. ಹಾಗಾಗಿ, ನೋವು ತಾಳಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಹಿಳೆ ಮತ್ತು ಆಕೆಯ ಮೈದುನ ಪೊಲೀಸರ ದೌರ್ಜನ್ಯ ‌ಖಂಡಿಸಿ ಜೀಪ್‌ ಮುಂದೆ ಕೂತು ಪ್ರತಿಭಟನೆಗೆ ಮುಂದಾದರು. ಇದೇ ವೇಳೆ ಸ್ಥಳಕ್ಕೆ ಬಂದ ಕಾವೇರಿ ಪತಿ ಶಿವಾನಂದ ರಾಠೋಡ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಹೇಳಲಾಗಿದೆ.

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್