ಪೇದೆಯ ಎದುರೇ ವೈದ್ಯರ ಮೇಲೆ ಸಾರ್ವಜನಿಕರಿಂದ ಹಲ್ಲೆ: ಎಲ್ಲಿ, ಏಕೆ?

ಬೆಳಗಾವಿ: ಹೊಸಮನಿ ಆಸ್ಪತ್ರೆ ಬಳಿ ಜನ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಗೋಕಾಕ್ ನಗರದ ಹೊಸಮನಿ ಆಸ್ಪತ್ರೆ ಬಳಿ ನಡೆದಿದೆ. ಡಾ.ಮಹೇಶ್ ಹೊಸಮನಿ, ಡಾ. ಭಜಂತ್ರಿ ಮೇಲೆ ಹಲ್ಲೆ ನಡೆದಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯರ ಸೇವೆ ಎಂತಹದ್ದು ಎಂದು ಎಲ್ಲರೂ ತಿಳಿದಿದ್ದೀರಿ. ಈ ನಡುವೆ ಬೆಳಗಾವಿಯಲ್ಲಿ ಸಾರ್ವಜನಿಕರು ಸೇರಿ ವೈದ್ಯ ತಂದೆ, ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾನ್ಸ್‌ಟೇಬಲ್ ಸಮ್ಮುಖದಲ್ಲಿ ಡಾ.ಮಹೇಶ್ ಹೊಸಮನಿ ಮತ್ತು ಆತನ ತಂದೆ ಮೇಲೆ ಹಲ್ಲೆ ನಡೆದಿದ್ದು, […]

ಪೇದೆಯ ಎದುರೇ ವೈದ್ಯರ ಮೇಲೆ ಸಾರ್ವಜನಿಕರಿಂದ ಹಲ್ಲೆ: ಎಲ್ಲಿ, ಏಕೆ?
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 29, 2020 | 10:13 AM

ಬೆಳಗಾವಿ: ಹೊಸಮನಿ ಆಸ್ಪತ್ರೆ ಬಳಿ ಜನ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಗೋಕಾಕ್ ನಗರದ ಹೊಸಮನಿ ಆಸ್ಪತ್ರೆ ಬಳಿ ನಡೆದಿದೆ. ಡಾ.ಮಹೇಶ್ ಹೊಸಮನಿ, ಡಾ. ಭಜಂತ್ರಿ ಮೇಲೆ ಹಲ್ಲೆ ನಡೆದಿದೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯರ ಸೇವೆ ಎಂತಹದ್ದು ಎಂದು ಎಲ್ಲರೂ ತಿಳಿದಿದ್ದೀರಿ. ಈ ನಡುವೆ ಬೆಳಗಾವಿಯಲ್ಲಿ ಸಾರ್ವಜನಿಕರು ಸೇರಿ ವೈದ್ಯ ತಂದೆ, ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾನ್ಸ್‌ಟೇಬಲ್ ಸಮ್ಮುಖದಲ್ಲಿ ಡಾ.ಮಹೇಶ್ ಹೊಸಮನಿ ಮತ್ತು ಆತನ ತಂದೆ ಮೇಲೆ ಹಲ್ಲೆ ನಡೆದಿದ್ದು, ಇನ್ನೋರ್ವ ವೈದ್ಯ ಡಾ.ಭಜಂತ್ರಿ ಮೇಲೆಯೂ ಹಲ್ಲೆ ನಡೆದಿದೆ.

ಹಳೇ ವೈಷಮ್ಯ, ಆಸ್ತಿ ವಿವಾದ ಹಿನ್ನೆಲೆ?
ಹಾಗೂ ಜಗಳ ಬಿಡಿಸಲು ಹೋದ ನರ್ಸ್ ಮೇಲೆಯೂ ಯುವಕರ ಗುಂಪಿನಿಂದ ಹಲ್ಲೆ ನಡೆದಿದೆ. ಇಷ್ಟಲ್ಲಾ ಆದ್ರೂ ಕಾನ್ಸ್‌ಟೇಬಲ್ ಘಟನೆ ತಿಳಿಗೊಳಿಸಲಾಗಿಲ್ಲ. ಈ ಘಟನೆಯ ವಿಡಿಯೋ ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಳೇ ವೈಷಮ್ಯ, ಆಸ್ತಿ ವಿವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗೋಕಾಕ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...
Unable to load recommendations.
Follow Us