ಮೈಸೂರು: ಇಂದು ರಥ ಸಪ್ತಮಿ. ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಗುತ್ತಿದೆ. ನೂರಾರು ಯೋಗ ಪಟುಗಳು ಸೂರ್ಯ ವಂದನೆ ಮಾಡಿ ಸೂರ್ಯನಿಗೆ ನಮಸ್ಕರಿಸಿದ್ದಾರೆ. ಮೈಸೂರು ಯೋಗ ಒಕ್ಕೂಟದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಭಗವಾನ್ ಸೂರ್ಯನಾರಾಯಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸೂರ್ಯ ನಮಸ್ಕಾರ ಸೇರಿದಂತೆ ಹಲವು ಯೋಗಗಳನ್ನು ಮಾಡಿ ರಥ ಸಪ್ತಮಿ ದಿನವನ್ನು ಆಚರಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಭಾಗಿಯಾಗಿದ್ದು ಈ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಭಾಗಿಯಾಗಿದ್ದು ಈ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು
ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ರಥ ಸಮರ್ಪಣೆ ಇನ್ನು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂದನ್ ಸಾಯಿ ಸರಸ್ವತಿಯವರು ರಥ ಸಮರ್ಪಣೆ ಮಾಡಿದ್ದಾರೆ. ರಥ ಸಪ್ತಮಿ ಹಿನ್ನೆಲೆಯಲ್ಲಿ ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಚೆಲುನಾರಾಯಣಸ್ವಾಮಿ ದೇಗುಲಕ್ಕೆ ಸಮರ್ಪಿಸಿದ್ದಾರೆ. ಈ ಸುವರ್ಣ ರಥ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರೂಪುಗೊಂಡಿದೆ.
ಮೇಲುಕೋಟೆ ಚೆಲುನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂಧನ್ ಸಾಯಿ ಸರಸ್ವತಿಯವರು ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಸಮರ್ಪಿಸಿದ್ದಾರೆ
ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವೇ ರಥಸಪ್ತಮಿ. ಭೂಮಿಗೆ ಬೆಳಕನ್ನೂ, ಜೀವರಾಶಿಗಳಿಗೆ ಚೈತನ್ಯವನ್ನೂ ನೀಡುವ ಸೂರ್ಯ ಉತ್ತರಾಯಣದತ್ತ ಚಲಿಸುವ ಪರ್ವ. ಮಾಘ ಮಾಸದಲ್ಲಿ ಸೂರ್ಯೋದಯಕ್ಕೂ ಮೊದಲು ಮಾಡುವ ಸ್ನಾನ ಅತ್ಯಂತ ಶ್ರೇಷ್ಠ. ಮಾಘ ಶುಕ್ಲದ ಸಪ್ತಮಿಯಂದೇ ಸೂರ್ಯ ದೇವರು ಜನಿಸಿದ್ದಂತೆ. ಅಂದು ಪ್ರಥಮ ಸೂರ್ಯ ಕಿರಣಗಳು ಸಂಗಮವಾಗುವ ಜಲದ ಮೇಲೆ ಬಿದ್ದಾಗ ಅದು ದಿವ್ಯಶಕ್ತಿಯಿಂದ ಕೂಡಿದ ತೀರ್ಥವಾಗುತ್ತದೆ. ಆ ತೀರ್ಥದಲ್ಲಿ ಮಾಡುವ ಸ್ನಾನಕ್ಕೆ ಅಂಥ ಶಕ್ತಿ ಇರುತ್ತದೆ ಎಂಬುದು ಹಲವರ ನಂಬಿಕೆ.
ಮಂತ್ರ ಪಠಿಸಿ, ಸೂರ್ಯನ ನಮಿಸಿ ರಥ ಸಪ್ತಮಿಯ ಪವಿತ್ರ ದಿನದಂದು ಹೇಮಗಿರಿ, ಶ್ರೀರಂಗಪಟ್ಟಣ, ಶಿಕಾರಿಪುರ, ಇಡುಗುಂಜಿ, ಕೊಪ್ಪಳ, ಹುಲುಕುಡಿ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬ್ರಹ್ಮ ರಥೋತ್ಸವ, ಜಾತ್ರೆಗಳೂ ಜರುಗುತ್ತವೆ. ಈ ದಿನ ಧಾರ್ಮಿಕರು ನವಗ್ರಹಗಳ ಪೂಜೆ, ಹೋಮವನ್ನು ಮಾಡುತ್ತಾರೆ. ಹೋಮ, ಹವನ ಮಾಡಲಾಗದವರು, ಓಂ ಸೂರ್ಯದೇವಾಯ ವಿದ್ಮಹೇ ಆದಿತ್ಯಾಯ ಧೀಮಹಿ | ತನ್ನೋ ಸೂರ್ಯ ಪ್ರಚೋದಯಾತ್’ಎಂದು ಸೂರ್ಯನನ್ನೂ ಹಾಗೂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ| ಗುರುಃ ಶುಕ್ರ ಶನಿಭ್ಯಶ್ಚ ರಾಹುವೇ ಕೇತವೇ ನಮಃ ಎಂದು ನವಗ್ರಹಗಳನ್ನೂ ವಂದಿಸುತ್ತಾರೆ.
ಪುರಾಣಗಳ ಪ್ರಕಾರ ಸೂರ್ಯ ಗ್ರಹಣದ ದಿನದಂತೆ ಮಾಘಶುದ್ಧ ಸಪ್ತಮಿ ಅರುಣೋದಯ ಕಾಲದಲ್ಲಿ ಕೂಡ ಸ್ನಾನ ಮಾಡಿ, ಅರ್ಘ್ಯ ಪ್ರದಾನ ಮಾಡಿದರೆ ಆರೋಗ್ಯ ಸಂಪತ್ತುಗಳು ಇಮ್ಮುಡಿಯಾಗುತ್ತವೆ. ಅಗಸ್ತ್ಯ ಮಹರ್ಷಿಗಳ ಉಪದೇಶದಂತೆ ಶ್ರೀರಾಮಚಂದ್ರ ಕೂಡ ಸೂರ್ಯ ಭಗವಾನನ ಉಪಾಸನೆ ಮಾಡಿದ್ದ ಎಂದು ರಾಮಾಯಣ ಹೇಳುತ್ತದೆ.
ಮೇಲುಕೋಟೆ ಚೆಲುನಾರಾಯಣಸ್ವಾಮಿ ದೇಗುಲಕ್ಕೆ ಪುಟ್ಟಪರ್ತಿ ಸಾಯಿಬಾಬಾರ ಉತ್ತರಾಧಿಕಾರಿ ಮಧುಸೂಧನ್ ಸಾಯಿ ಸರಸ್ವತಿಯವರು ಸಪ್ತ ಅಶ್ವಗಳನ್ನೊಳಗೊಂಡ ಸುವರ್ಣ ಲೇಪಿತ ಸೂರ್ಯರಥವನ್ನು ಸಮರ್ಪಿಸಿದ್ದಾರೆ
ಇದನ್ನೂ ಓದಿ:Ratha Saptami 2021: ಇಂದು ರಥಸಪ್ತಮಿ ಹಬ್ಬ; ಸಪ್ತಲೋಕಕ್ಕೂ ದೀಪಪ್ರಾಯನಾದ ಸೂರ್ಯನ ಜನ್ಮದಿನ