AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VERY URGENT: ತನಗೊಂದು ಮನೆ ಬೇಕು ಎಂದು ಕ್ರಿಕೆಟಿಗ ಪಂತ್ ಟ್ವಿಟರ್​ನಲ್ಲಿ ಏನು ಮಾಡಿದರು ನೋಡಿ..!

ನಾನು ಆಸ್ಟ್ರೇಲಿಯಾದಿಂದ ಬಂದಾಗಿನಿಂದ, ಹೊಸ ಮನೆ ತೆಗೆದುಕೊಳ್ಳುವಂತೆ ಕುಟುಂಬಸ್ಥರು ನನ್ನ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಹೊಸ ಮನೆ ಖರೀದಿ ಮಾಡಲು ನನಗೆ ಗುರಗಾಂವ್ ಸರಿಯಾದ ಆಯ್ಕೆ ಎನಿಸುತ್ತದೆ.

VERY URGENT: ತನಗೊಂದು ಮನೆ ಬೇಕು ಎಂದು ಕ್ರಿಕೆಟಿಗ ಪಂತ್  ಟ್ವಿಟರ್​ನಲ್ಲಿ ಏನು ಮಾಡಿದರು ನೋಡಿ..!
Follow us
ಪೃಥ್ವಿಶಂಕರ
|

Updated on:Jan 28, 2021 | 2:46 PM

ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತೀಯ ಬ್ಯಾಟ್ಸ್‌ಮನ್ ರಿಷಭ್ ಪಂತ್ ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಆಸಿಸ್​ ಸರಣಿಯಲ್ಲಿ ಪಂತ್ ಬ್ಯಾಟಿಂಗ್​ನಲ್ಲಿ ತೋರಿದ ಅಬ್ಬರ, ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಿತು.

ಆದರೆ ಆಸಿಸ್​ ನಾಡಲ್ಲಿ ಅಬ್ಬರಿಸಿ ತವರಿಗೆ ಹಿಂದಿರುಗಿದ ಪಂತ್ ಈಗ ಹೊಸ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತಕ್ಕೆ ವಾಪಾಸ್ಸಾಗಿರುವ ಪಂತ್​ ಸದ್ಯ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದು, ಮನೆಯವರು ಕಾಟ ಕೊಡುತ್ತಿದ್ದಾರಂತೆ. ಇದರಿಂದ ಪಂತ್​ ರೋಸಿ ಹೋಗಿದ್ದಾರೆ. ಈಗಾಗಿ ಪಂತ್​ ಟ್ವಿಟ್ಟರ್​ನಲ್ಲಿ ತಮಗಾಗುತ್ತಿರುವ ಹಿಂಸೆಗೆ ನೆಟ್ಟಿಗರ ಬಳಿ ಉಪಾಯ ಕೇಳಿದ್ದಾರೆ.

ನಾನು ಆಸ್ಟ್ರೇಲಿಯಾದಿಂದ ಬಂದಾಗಿನಿಂದ, ಹೊಸ ಮನೆ ತೆಗೆದುಕೊಳ್ಳುವಂತೆ ಕುಟುಂಬಸ್ಥರು ನನ್ನ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಹೊಸ ಮನೆ ಖರೀದಿ ಮಾಡಲು ನನಗೆ ಗುರಗಾಂವ್​ ಸರಿಯಾದ ಆಯ್ಕೆ ಎನಿಸುತ್ತದೆ. ಇದಲ್ಲದೆ ನಿಮ್ಮ ಬಳಿ ಯಾವೂದಾದರು ಬೇರೆ ಆಯ್ಕೆ ಇದ್ದರೆ ಹೇಳಿ ಎಂದು ಪಂತ್ ಅವರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪಂತ್​ ಅವರ ಈ ತಮಾಷೆಯ ಟ್ವೀಟ್‌ಗೆ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದು, ಕೆಲವರು ದೆಹಲಿಯಲ್ಲಿರಲು ಹೇಳಿದರೆ, ಇನ್ನೂ ಕೆಲವರು ಹೈದರಾಬಾದ್​ನಲ್ಲಿ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ ಕೆಲವು ಅಭಿಮಾನಿಗಳು, ನಿಮಗೆ ಮನೆ ಹುಡುಕಿಕೊಡಲು ನಾವು ನಿಮ್ಮ ಸೇವಕರಲ್ಲ ಎಂದು ಪಂತ್ ಅವರ ಟ್ವೀಟ್​ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

India vs Australia Test Series ಪಂತ್-ಜಡೇಜಾ​ಗೆ​ ಗಾಯ, ಭಾರತದ 2 ಆಟಗಾರರನ್ನ ಗಾಯಗೊಳಿಸಿದ ಪ್ಯಾಟ್​ ಕಮಿನ್ಸ್ ಬೌಲಿಂಗ್​..!

Published On - 2:39 pm, Thu, 28 January 21

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು