AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VERY URGENT: ತನಗೊಂದು ಮನೆ ಬೇಕು ಎಂದು ಕ್ರಿಕೆಟಿಗ ಪಂತ್ ಟ್ವಿಟರ್​ನಲ್ಲಿ ಏನು ಮಾಡಿದರು ನೋಡಿ..!

ನಾನು ಆಸ್ಟ್ರೇಲಿಯಾದಿಂದ ಬಂದಾಗಿನಿಂದ, ಹೊಸ ಮನೆ ತೆಗೆದುಕೊಳ್ಳುವಂತೆ ಕುಟುಂಬಸ್ಥರು ನನ್ನ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಹೊಸ ಮನೆ ಖರೀದಿ ಮಾಡಲು ನನಗೆ ಗುರಗಾಂವ್ ಸರಿಯಾದ ಆಯ್ಕೆ ಎನಿಸುತ್ತದೆ.

VERY URGENT: ತನಗೊಂದು ಮನೆ ಬೇಕು ಎಂದು ಕ್ರಿಕೆಟಿಗ ಪಂತ್  ಟ್ವಿಟರ್​ನಲ್ಲಿ ಏನು ಮಾಡಿದರು ನೋಡಿ..!
ಪೃಥ್ವಿಶಂಕರ
|

Updated on:Jan 28, 2021 | 2:46 PM

Share

ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತೀಯ ಬ್ಯಾಟ್ಸ್‌ಮನ್ ರಿಷಭ್ ಪಂತ್ ವಿಶ್ವಾಸಾರ್ಹ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಆಸಿಸ್​ ಸರಣಿಯಲ್ಲಿ ಪಂತ್ ಬ್ಯಾಟಿಂಗ್​ನಲ್ಲಿ ತೋರಿದ ಅಬ್ಬರ, ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯಿತು.

ಆದರೆ ಆಸಿಸ್​ ನಾಡಲ್ಲಿ ಅಬ್ಬರಿಸಿ ತವರಿಗೆ ಹಿಂದಿರುಗಿದ ಪಂತ್ ಈಗ ಹೊಸ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಭಾರತಕ್ಕೆ ವಾಪಾಸ್ಸಾಗಿರುವ ಪಂತ್​ ಸದ್ಯ ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದು, ಮನೆಯವರು ಕಾಟ ಕೊಡುತ್ತಿದ್ದಾರಂತೆ. ಇದರಿಂದ ಪಂತ್​ ರೋಸಿ ಹೋಗಿದ್ದಾರೆ. ಈಗಾಗಿ ಪಂತ್​ ಟ್ವಿಟ್ಟರ್​ನಲ್ಲಿ ತಮಗಾಗುತ್ತಿರುವ ಹಿಂಸೆಗೆ ನೆಟ್ಟಿಗರ ಬಳಿ ಉಪಾಯ ಕೇಳಿದ್ದಾರೆ.

ನಾನು ಆಸ್ಟ್ರೇಲಿಯಾದಿಂದ ಬಂದಾಗಿನಿಂದ, ಹೊಸ ಮನೆ ತೆಗೆದುಕೊಳ್ಳುವಂತೆ ಕುಟುಂಬಸ್ಥರು ನನ್ನ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಹೊಸ ಮನೆ ಖರೀದಿ ಮಾಡಲು ನನಗೆ ಗುರಗಾಂವ್​ ಸರಿಯಾದ ಆಯ್ಕೆ ಎನಿಸುತ್ತದೆ. ಇದಲ್ಲದೆ ನಿಮ್ಮ ಬಳಿ ಯಾವೂದಾದರು ಬೇರೆ ಆಯ್ಕೆ ಇದ್ದರೆ ಹೇಳಿ ಎಂದು ಪಂತ್ ಅವರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪಂತ್​ ಅವರ ಈ ತಮಾಷೆಯ ಟ್ವೀಟ್‌ಗೆ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದು, ಕೆಲವರು ದೆಹಲಿಯಲ್ಲಿರಲು ಹೇಳಿದರೆ, ಇನ್ನೂ ಕೆಲವರು ಹೈದರಾಬಾದ್​ನಲ್ಲಿ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ ಕೆಲವು ಅಭಿಮಾನಿಗಳು, ನಿಮಗೆ ಮನೆ ಹುಡುಕಿಕೊಡಲು ನಾವು ನಿಮ್ಮ ಸೇವಕರಲ್ಲ ಎಂದು ಪಂತ್ ಅವರ ಟ್ವೀಟ್​ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

India vs Australia Test Series ಪಂತ್-ಜಡೇಜಾ​ಗೆ​ ಗಾಯ, ಭಾರತದ 2 ಆಟಗಾರರನ್ನ ಗಾಯಗೊಳಿಸಿದ ಪ್ಯಾಟ್​ ಕಮಿನ್ಸ್ ಬೌಲಿಂಗ್​..!

Published On - 2:39 pm, Thu, 28 January 21

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ