AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳಚರಂಡಿ ಸ್ವಚ್ಛತೆಗೆ ರೋಬಾಟ್ ಯಂತ್ರ ಬಳಕೆ: ಮೈಸೂರು ಪಾಲಿಕೆಯ ನೂತನ ಪ್ರಯತ್ನಕ್ಕೆ ಜೈ ಜೈ

ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಈ ರೋಬೋಟ್ ಬಹಳ ಉಪಯುಕ್ತವಾಗಲಿದ್ದು, ಕಾರ್ಮಿಕರ ಅನಾರೋಗ್ಯ, ಅವಘಡಗಳ ತಪ್ಪಿಸಲು ಇದು ಸಹಾಯಕಾರಿಯಾಗಲಿದೆ ಹಾಗೂ ಈ ಯಂತ್ರ ಅಳವಡಿಕೆಯಿಂದ ಸ್ವಚ್ಛತೆ ಯಲ್ಲಿ ಮತ್ತೊಂದು ಹೆಜ್ಜೆ ನಾವು ಮುಂದೆಸಾಗುತ್ತೇವೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಹೇಳಿದರು.

ಒಳಚರಂಡಿ ಸ್ವಚ್ಛತೆಗೆ ರೋಬಾಟ್ ಯಂತ್ರ ಬಳಕೆ: ಮೈಸೂರು ಪಾಲಿಕೆಯ ನೂತನ ಪ್ರಯತ್ನಕ್ಕೆ ಜೈ ಜೈ
ಬ್ಯಾಂಡಿಕೂಟ್ ರೋಬೊಟ್
preethi shettigar
| Edited By: |

Updated on: Jan 29, 2021 | 1:01 PM

Share

ಮೈಸೂರು: ಒಳಚರಂಡಿ ಸ್ವಚ್ಛಗೊಳಿಸುವಾಗ ಅಮಾಯಕ ಜೀವಗಳು ಪ್ರಾಣ ಕಳೆದುಕೊಳ್ಳುವುದು ಆಗಾಗ್ಗೆ ನಡೆಯುತ್ತಲೇ ಇದೆ. ನಿನ್ನೆಯಷ್ಟೇ ಕಲಬುರ್ಗಿ ನಗರದಲ್ಲಿ ಇಂತಹ ದುರಂತ ಸಂಭವಿಸಿ, ಇಬ್ಬರು ಪ್ರಾಣ ತೆತ್ತಿದ್ದಾರೆ. ಇದಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಮೈಸೂರು ನಗರ ಪಾಲಿಕೆಯು ಕಾಲಕ್ಕೆ ತಕ್ಕಂತೆ ಹೊಸ ವಿಧಾನಕ್ಕೆ ಮೊರೆಹೋಗಿದೆ.  ಈ ವಿಧಾನ ಯಶಸ್ವಿಯಾದರೆ ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕವರ್ಗ ನಿಟ್ಟುಸಿರುಬಿಡಬಹುದು.

ತಾಜಾ ಬೆಳವಣಿಗೆಯಲ್ಲಿ ಮೈಸೂರು ನಗರ ಪಾಲಿಕೆಯು ಒಳಚರಂಡಿ ಸ್ವಚ್ಛಗೊಳಿಸಲು ರೋಬಾಟ್ ಯಂತ್ರವನ್ನು ಅಳವಡಿಸಲು ಮುಂದಾಗಿದ್ದು, ಶೀಘ್ರದಲ್ಲೇ ಬ್ಯಾಂಡಿಕೂಟ್ ರೋಬಾಟ್​ಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ.

ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಈ ರೋಬಾಟ್ ಬಹಳ ಉಪಯುಕ್ತವಾಗಲಿದ್ದು, ಕಾರ್ಮಿಕರ ಅನಾರೋಗ್ಯ, ಅವಘಡಗಳ ತಪ್ಪಿಸಲು ಇದು ಸಹಾಯಕಾರಿಯಾಗಲಿದೆ ಹಾಗೂ ಈ ಯಂತ್ರ ಅಳವಡಿಕೆಯಿಂದ ಸ್ವಚ್ಛತೆ ಯಲ್ಲಿ ಮತ್ತೊಂದು ಹೆಜ್ಜೆ ನಾವು ಮುಂದೆಸಾಗುತ್ತೇವೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಹೇಳಿದರು.

robobot drinage 1

ಒಳಚರಂಡಿ ಸ್ವಚ್ಛಗೊಳಿಸಲು ರೊಬೋಟ್ ಯಂತ್ರ

ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮೈಸೂರು ಪಾಲಿಕೆ ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿನೂತನ ಪ್ರಯತ್ನಕ್ಕೆ ಸಜ್ಜಾಗಿದ್ದು, ಬ್ಯಾಂಡಿಕೂಟ್ ರೋಬೊಟ್ ಖರೀದಿ ಮಾಡಿದೆ. ಶೀಘ್ರದಲ್ಲೇ ನಗರದ ಒಳಚರಂಡಿ ಸ್ವಚ್ಛತೆ ರೊಬೋಟ್ ಬಳಕೆಯಾಗಲಿದ್ದು, ನಗರಾಭಿವೃದ್ಧಿ ಸಚಿವರಿಂದ ಯಂತ್ರಕ್ಕೆ ಚಾಲನೆ ಸಿಗಲಿದೆ ಎಂದು ಪಾಲಿಕೆ ಆಯುಕ್ತ ಗುರುದತ್ತ್ ಹೆಗ್ಡೆ ಮಾಹಿತಿ ನೀಡಿದ್ದಾರೆ.

robobot drinage 2

ಒಳಚರಂಡಿ ಸ್ವಚ್ಛಗೊಳಿಸಲು ಮೈಸೂರು ಪಾಲಿಕೆ ನೂತನ ಪ್ರಯತ್ನ

ಮ್ಯಾನ್​ಹೋಲ್ ಸ್ವಚ್ಛಗೊಳಿಸಲು ಇಳಿದಿದ್ದ ಇಬ್ಬರು ಗುತ್ತಿಗೆ ಕಾರ್ಮಿಕರ ಸಾವು

Follow Us
preethi shettigar
preethi shettigar
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?