ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಪ್ರಯಾಣಿಕ; ಜೀವ ಕಾಪಾಡಿದ ಆರ್​ಪಿಎಫ್​ ಕಾನ್​ಸ್ಟೇಬಲ್​

ವಿಡಿಯೋ ಇದೀಗ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಡಮಾಡದೇ ಬೇಗ ಬಂದು ಪ್ರಯಾಣಿಕನ ಜೀವ ಉಳಿಸಿದ್ದಕ್ಕಾಗಿ ಆರ್​ಪಿಎಫ್​ ಅಧಿಕಾರಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಪ್ರಯಾಣಿಕ; ಜೀವ ಕಾಪಾಡಿದ ಆರ್​ಪಿಎಫ್​ ಕಾನ್​ಸ್ಟೇಬಲ್​
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಪ್ರಯಾಣಿಕ
Edited By:

Updated on: Jul 01, 2021 | 11:45 AM

ನಿಲ್ದಾಣಕ್ಕೆ ಈಗತಾನೆ ಬಂದು ರೈಲು ನಿಲ್ಲುವ ವೇಳೆಯಲ್ಲಿ ಅವಸರ ಮಾಡಿ ವ್ಯಕ್ತಿ ಇಳಿಯಲು ಮುಂದಾಗಿದ್ದಾರೆ. ರೈಲಿನಿಂದ ಇಳಿಯಲು ಪ್ರಯತ್ನಿಸುವ ವೇಳೆ ಪ್ರಯಾಣಿಕ ಕೆಳಗೆ ಬಿದ್ದಿದ್ದಾರೆ. ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕನ ಜೀವ ಉಳಿದಿದೆ. ಘಟನೆಯನ್ನು ಗಮನಿಸಿ ರೈಲು ಮೀಸಲು ಪಡೆ (ಆರ್​ಪಿಎಫ್​)  ಪ್ರಯಾಣಿಕನ ಜೀವ ಉಳಿಸಿದ್ದಾರೆ.

ಘಟನೆ ಎರಡು ದಿನಗಳ ಹಿಂದೆ ಮುಂಬೈನ ಬೊರಿವಾಲಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈಗತಾನೆ ರೈಲು ನಿಲ್ದಾಣಕ್ಕೆ ಬಂದು ನಿಧಾನವಾಗಿ ಚಲಿಸಬೇಕು ಅನ್ನುವಷ್ಟರಲ್ಲಿಯೇ ಪ್ರಯಾಣಿಕ ಕೆಳಗೆ ಇಳಿಯಲು ಪ್ರಯತ್ನಿಸಿದ್ದಾರೆ. ರೈಲು ಮತ್ತು ಪ್ಲಾಟ್​ಫಾರಮ್​ನ ಅಂಚಿಗೆ ಕಾಲು ಸಿಲುಕಿ ಕೆಳಗೆ ಬಿದ್ದಿದ್ದಾರೆ. ಹತ್ತಿರದಲ್ಲಿದ್ದ ಆರ್​ಪಿಎಫ್​ ಸಿಬ್ಬಂದಿ ತಕ್ಕಷಣವೇ ಓಡಿ ಬಂದು ಪ್ರಯಾಣಿಕನ ಜೀವ ಉಳಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಡಿಯೋ ಇದೀಗ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಯಾವಾಗಲೂ ವಾಹನದಲ್ಲಿ ಸಂಚರಿಸುವಾಗ ಅವಸರ ಮಾಡಬಾರದು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದೃಷ್ಟವಶಾತ್​ ಪ್ರಯಾಣಕನ ಜೀವ ಉಳಿಯಿತು ಎಂದು ಇನ್ನೋರ್ವರು ಹೇಳಿದ್ದಾರೆ. ತಡಮಾಡದೇ ಬೇಗ ಬಂದು ಪ್ರಯಾಣಿಕನ ಜೀವ ಉಳಿಸಿದ್ದಕ್ಕಾಗಿ ಆರ್​ಪಿಎಫ್​ ಅಧಿಕಾರಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್​! ವಿಡಿಯೋ ನೋಡಿ‘

ಮೆಟ್ರೋ ಮೇಲ್ಸೇತುವೆ, ರೈಲು ಕುಸಿತ; 23 ಮಂದಿ ಸಾವು.. 50ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರ