AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sensex: ದಾಖಲೆಯ ದಾರಿಯಲ್ಲಿ ಷೇರು ಮಾರುಕಟ್ಟೆ, 51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್​.. ಕಾರಣವೇನು?

Sensex Gains: ಆರ್ಥಿಕ ತಜ್ಞರು ಹೇಳುವಂತೆ ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮೇಲೆ ಮಾರುಕಟ್ಟೆಯನ್ನು ಅಳೆಯುವುದೇ ದೊಡ್ಡ ತಪ್ಪು. ಮಾರುಕಟ್ಟೆಯ ಬೆಳವಣಿಗೆಯನ್ನು ನಿರ್ಧರಿಸುವುದೇ ಭವಿಷ್ಯದ ಆರ್ಥಿಕತೆ

Sensex: ದಾಖಲೆಯ ದಾರಿಯಲ್ಲಿ ಷೇರು ಮಾರುಕಟ್ಟೆ, 51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್​.. ಕಾರಣವೇನು?
ಪ್ರಾತಿನಿಧಿಕ ಚಿತ್ರ
Skanda
|

Updated on:Feb 05, 2021 | 11:52 AM

Share

ಭಾರತದ ಷೇರು ಮಾರುಕಟ್ಟೆ ಕಂಡುಕೇಳರಿಯದ ದಾಖಲೆಗೆ ಸಾಕ್ಷಿಯಾಗಿದೆ. ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 15,000ದ ಗಡಿ ದಾಟಿದ್ದು, ಸೆನ್ಸೆಕ್ಸ್​ 51,000ದ ಆಸುಪಾಸಿಗೆ ಹೋಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಒಂದೆಡೆ ಕೊರೊನಾದಿಂದ ಆರ್ಥಿಕತೆ ಮುಳುಗಿದೆ, ರೈತರ ಹೋರಾಟದಿಂದ ಪರಿಸ್ಥಿತಿ ಹದಗೆಡುತ್ತಿದೆ ಎಂಬ ಹತ್ತು ಹಲವು ವಾದಗಳ ನಡುವೆಯೂ ಷೇರುಪೇಟೆ ಈ ತೆರನಾದ ಅದ್ಭುತ ಬೆಳವಣಿಗೆ ಕಾಣಲು ಕಾರಣವೇನು ಎನ್ನುವ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಆರ್ಥಿಕ ತಜ್ಞರು ಹೇಳುವಂತೆ ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮೇಲೆ ಮಾರುಕಟ್ಟೆಯನ್ನು ಅಳೆಯುವುದೇ ದೊಡ್ಡ ತಪ್ಪು. ಮಾರುಕಟ್ಟೆಯ ಬೆಳವಣಿಗೆಯನ್ನು ನಿರ್ಧರಿಸುವುದೇ ಭವಿಷ್ಯದ ಆರ್ಥಿಕತೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಅಂದರೆ ಇಂದು ಷೇರು ಮಾರುಕಟ್ಟೆ ಅತ್ಯುತ್ತಮ ಪ್ರಗತಿ ತೋರಿಸುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಪುಟಿದೇಳಲಿದೆ ಎಂಬ ಸೂಚನೆ.

ಕೊರೊನಾ ಬಂದ ನಂತರ ಕಳೆದ 2020-21ನೇ ಸಾಲಿನ ದೇಶದ ಜಿಡಿಪಿ ಶೇ.9.5ರಿಂದ ಶೇ.10ರಷ್ಟು ಕುಸಿತ ಕಾಣಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಎಲ್ಲಾ ಸಂಕಷ್ಟಗಳ ನಡುವೆಯೂ ಮಾರುಕಟ್ಟೆ ಜಿಡಿಪಿ ಕೇವಲ ಶೇ.6ರಿಂದ ಶೇ.6.5ರಷ್ಟು ಮಾತ್ರ ಕುಸಿತ ಕಂಡಿದೆ. ಇಷ್ಟಾದ ನಂತರವೂ ಜನ ಶೇ.6.5ರಷ್ಟು ಕುಸಿತ ಕಂಡರೂ ಮಾರುಕಟ್ಟೆ ಏರುತ್ತಿದೆಯಲ್ಲಾ ಎಂದು ಯೋಚಿಸುತ್ತಿದ್ದಾರೆಯೇ ವಿನಃ ನಿರೀಕ್ಷೆಗಿಂತಲೂ ಕಡಿಮೆ ಕುಸಿತ ಕಂಡಿರುವುದು ಆಶಾದಾಯಕ ಬೆಳವಣಿಗೆ ಎನ್ನುವುದನ್ನು ಯೋಚಿಸುವುದಿಲ್ಲ. ಈ ನಡುವೆ 2021-22ನೇ ಸಾಲಿನ ಜಿಡಿಪಿ ಶೇ.3ರಿಂದ ಶೇ.4ರಷ್ಟು ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈಗ ಬರುತ್ತಿರುವ ಸೂಚನೆಯ ಪ್ರಕಾರ ಜಿಡಿಪಿ ಶೇ.11ರಿಂದ ಶೇ.11.5ರಷ್ಟು ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಯ ಪ್ರತಿಫಲನವೇ ಷೇರು ಮಾರುಕಟ್ಟೆಯ ಅಭೂತಪೂರ್ವ ದಾಖಲೆ.

ಇನ್ನೊಂದೆಡೆ ಕೇಂದ್ರ ಬಜೆಟ್​ 2021 ಷೇರು ಮಾರುಕಟ್ಟೆಗೆ ವರದಾನವಾಗಿದೆ. ಬಜೆಟ್​ ಪೂರ್ವದಲ್ಲಿ ಎಲ್ಲರ ಲೆಕ್ಕಾಚಾರವೂ ಸರ್ಕಾರ ಆದಾಯ ಕ್ರೋಢೀಕರಿಸಲು ತೆರಿಗೆ ಹೆಚ್ಚಳ ಮಾಡಬಹುದು, ಕೊವಿಡ್​ ಸೆಸ್​ ವಿಧಿಸಬಹುದು, ಶ್ರೀಮಂತರ ಸಂಪತ್ತಿನ ಮೇಲೆ ಕಣ್ಣು ಹಾಕಬಹುದು ಎಂದಿತ್ತು. Security Transactional Tax (STT) Long Term Capital Gain Tax (LTCG) ಏರಿಸಬಹುದು ಎನ್ನುವ ಊಹೆಯಿತ್ತು. ಆದರೆ, ಈ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಜೆಟ್​ನಲ್ಲಿ ಕೃಷಿ ಸೆಸ್​ ವಿಧಿಸಿದ್ದನ್ನು ಹೊರತುಪಡಿಸಿದರೆ ತೆರಿಗೆಯಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಜೊತೆಗೆ, ಆದಾಯವನ್ನು ಹೆಚ್ಚಿಸಲಿಕ್ಕಾಗಿ ತೆರಿಗೆ ಸೋರಿಕೆಯನ್ನು ತಡೆಗಟ್ಟುತ್ತೀವಿ ಎಂಬ ಜಾಣ ನಡೆಯನ್ನಿಟ್ಟಿತು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.3ರಿಂದ ಶೇ.4ರಷ್ಟು ಮಂದಿ ತೆರಿಗೆ ಕಟ್ಟುತ್ತಿದ್ದಾರೆ. ಇವರ ಮೇಲೆ ಪದೇಪದೇ ಬರೆ ಹಾಕುವ ಬದಲು ತೆರಿಗೆ ವ್ಯಾಪ್ತಿಗೆ ಹೆಚ್ಚು ಜನರನ್ನು ತರುವ ಯೋಚನೆಯನ್ನು ಮಾಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ಷೇರುಮಾರುಕಟ್ಟೆಯಲ್ಲಿ ಬಜೆಟ್​ ನಂತರ ಮೇಲ್ಮುಖವಾಗಿ ಚಲಿಸುತ್ತಿದೆ.

ಮಾಹಿತಿ: ರುದ್ರಮೂರ್ತಿ, ಆರ್ಥಿಕ ತಜ್ಞ

50 ಸಾವಿರ ಗಡಿ ದಾಟಿಯೇ ಬಿಟ್ಟಿತು ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ..! ರಿಲಯನ್ಸ್​, ಇನ್ಪೋಸಿಸ್​ ಷೇರುಗಳಿಗೆ ಹೆಚ್ಚು ಲಾಭ

Published On - 11:44 am, Fri, 5 February 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು