ಪಟಾಕಿ ಸದ್ದಿಗೆ ಬೆದರಿದ ಗೂಳಿ, ನಾಲ್ವರಿಗೆ ಗಾಯ

ಮಂಡ್ಯ: ಪಟಾಕಿ ಸದ್ದಿಗೆ ಬೆದರಿದ ಗೂಳಿ ಜನರ ಮಧ್ಯೆ ನುಗ್ಗಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿರುವ ಘಟನೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ. ನಿನ್ನೆ ಸಂಜೆ ಸಂಕ್ರಾಂತಿ ಕಿಚ್ಚು ಹಾಯಿಸುವಾಗ ಬೆಂಕಿ ಹಾಗೂ ಪಟಾಕಿ ಶಬ್ದಕ್ಕೆ ಬೆದರಿದ ಗೂಳಿ ಏಕಾಏಕಿ ಸಂಕ್ರಾಂತಿ ಕಿಚ್ಚು ವೀಕ್ಷಣೆಗೆ ನಿಂತಿದ್ದ ಜನರ ಮಧ್ಯೆ ನುಗ್ಗಿದೆ. ಗೂಳಿ ಓಟದ ರಭಸಕ್ಕೆ ನಾಲ್ವರಿಗೆ ಗಾಯಗಳಾಗಿವೆ. ಭಯಭೀತ ಗೊಂಡಿದ್ದ ಗೂಳಿ ಹಿಡಿಯಲು ಜನ ಪರದಾಡಿದ್ದಾರೆ. ಸುಮಾರು ಅರ್ಧ ಗಂಟೆಯ ಬಳಿಕ ಗೂಳಿ ನಿಯಂತ್ರಣಕ್ಕೆ ಬಂದಿದೆ.

ಪಟಾಕಿ ಸದ್ದಿಗೆ ಬೆದರಿದ ಗೂಳಿ, ನಾಲ್ವರಿಗೆ ಗಾಯ
ಸಾಧು ಶ್ರೀನಾಥ್​

Updated on: Jan 16, 2020 | 9:16 AM

ಮಂಡ್ಯ: ಪಟಾಕಿ ಸದ್ದಿಗೆ ಬೆದರಿದ ಗೂಳಿ ಜನರ ಮಧ್ಯೆ ನುಗ್ಗಿದ ಪರಿಣಾಮ ನಾಲ್ವರಿಗೆ ಗಾಯಗಳಾಗಿರುವ ಘಟನೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ. ನಿನ್ನೆ ಸಂಜೆ ಸಂಕ್ರಾಂತಿ ಕಿಚ್ಚು ಹಾಯಿಸುವಾಗ ಬೆಂಕಿ ಹಾಗೂ ಪಟಾಕಿ ಶಬ್ದಕ್ಕೆ ಬೆದರಿದ ಗೂಳಿ ಏಕಾಏಕಿ ಸಂಕ್ರಾಂತಿ ಕಿಚ್ಚು ವೀಕ್ಷಣೆಗೆ ನಿಂತಿದ್ದ ಜನರ ಮಧ್ಯೆ ನುಗ್ಗಿದೆ.

ಗೂಳಿ ಓಟದ ರಭಸಕ್ಕೆ ನಾಲ್ವರಿಗೆ ಗಾಯಗಳಾಗಿವೆ. ಭಯಭೀತ ಗೊಂಡಿದ್ದ ಗೂಳಿ ಹಿಡಿಯಲು ಜನ ಪರದಾಡಿದ್ದಾರೆ. ಸುಮಾರು ಅರ್ಧ ಗಂಟೆಯ ಬಳಿಕ ಗೂಳಿ ನಿಯಂತ್ರಣಕ್ಕೆ ಬಂದಿದೆ.

Published On - 9:15 am, Thu, 16 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us