
ಚಿಕ್ಕಬಳ್ಳಾಫುರ: ಆಗಸ್ಟ್ 28 ರಂದು ಜಂಗಮಕೋಟೆ ಕ್ರಾಸ್ನಲ್ಲಿ ನಡೆದಿದ್ದ ದಿನಸಿ ಅಂಗಡಿ ವ್ಯಾಪಾರಿ ನಿರಂಜನಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ (ಗ್ರಾ) ಠಾಣೆ ಪೊಲೀಸರಿಂದ ಆರೋಪಿ ನವೀನ್ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ನವೀನ್ ಹೊಸಕೋಟೆಯವನ್ನಾಗಿದ್ದು, ಹಣಕಾಸು ವ್ಯವಹಾರ ಹಾಗೂ ತನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕೆ ನಿರಂಜನಮೂರ್ತಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ನವೀನ್ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಮೂಲತಃ ಆರೋಪಿ ನವೀನ್ ಹಳೆ ವಾಹನಗಳ ಮಾರಾಟ ಮಾಡುವ ಕಾರ್ಯ ನಿರ್ವಹಿಸುತ್ತಿದ್ದ.
Published On - 6:07 pm, Mon, 7 September 20