AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ, ಯುವಕರು ಬೀದಿ ಪಾಲಾಗ್ತಾರೆ -ಸಿದ್ದರಾಮಯ್ಯ ಆತಂಕ

ಬೆಂಗಳೂರು: ದೇಶದ ಜನ ಮೋದಿ ಮೇಲೆ‌ ವಿಶ್ವಾಸ ಇಟ್ಟು 2ನೇ ಅವಧಿಗೆ ಅವಕಾಶ ಕೊಟ್ರು. ಆದ್ರೆ ಮೊದಲ ಅವಧಿಯಲ್ಲೇ ಪ್ರಧಾನಿ ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈಗ 6ನೇ ವರ್ಷದಲ್ಲೂ ಅದೇ ಸುಳ್ಳು ಮುಂದುವರಿಸಿದ್ದಾರೆ. ಆರ್ಟಿಕಲ್ 370ರದ್ದು, ಆಯೋಧ್ಯೆ, ತ್ರಿವಳಿ ತಲಾಖ್ ರದ್ದು ಮಾಡಿರುವುದನ್ನ ಸಾಧನೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತರೆಲ್ಲಾ ಖುಷಿಯಾಗಿದ್ದಾರಾ? ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ. ಯುವಕರು ಬೀದಿ ಪಾಲಾಗ್ತಾರೆ. ಕೃಷಿಕರಿಗೆ ಬೆಂಬಲ […]

ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ, ಯುವಕರು ಬೀದಿ ಪಾಲಾಗ್ತಾರೆ -ಸಿದ್ದರಾಮಯ್ಯ ಆತಂಕ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:May 30, 2020 | 3:01 PM

Share

ಬೆಂಗಳೂರು: ದೇಶದ ಜನ ಮೋದಿ ಮೇಲೆ‌ ವಿಶ್ವಾಸ ಇಟ್ಟು 2ನೇ ಅವಧಿಗೆ ಅವಕಾಶ ಕೊಟ್ರು. ಆದ್ರೆ ಮೊದಲ ಅವಧಿಯಲ್ಲೇ ಪ್ರಧಾನಿ ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಈಗ 6ನೇ ವರ್ಷದಲ್ಲೂ ಅದೇ ಸುಳ್ಳು ಮುಂದುವರಿಸಿದ್ದಾರೆ. ಆರ್ಟಿಕಲ್ 370ರದ್ದು, ಆಯೋಧ್ಯೆ, ತ್ರಿವಳಿ ತಲಾಖ್ ರದ್ದು ಮಾಡಿರುವುದನ್ನ ಸಾಧನೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರೆಲ್ಲಾ ಖುಷಿಯಾಗಿದ್ದಾರಾ? ದೇಶ ಆರ್ಥಿಕವಾಗಿ ದಿವಾಳಿ ಆಗ್ತಾ ಇದೆ. ಯುವಕರು ಬೀದಿ ಪಾಲಾಗ್ತಾರೆ. ಕೃಷಿಕರಿಗೆ ಬೆಂಬಲ ಬೆಲೆಯಿಂದ ಬದುಕು ಸ್ಥಿರವಾಗಿದೆ ಅಂತಾ ಪತ್ರದಲ್ಲಿ ಹೇಳಿದ್ದಾರೆ. ಆದರೆ ಇದು ಸತ್ಯನಾ? ರೈತರೆಲ್ಲಾ ಖುಷಿಯಾಗಿದ್ದಾರಾ? ಕಲಬುರಗಿ, ರಾಯಚೂರು ಭಾಗದ ರೈತರ ತೊಗರಿ ಖರೀದಿ ಮಾಡ್ತಾ ಇದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ತಿಂಗಳಿಗೆ 500 ರೂಪಾಯಿ ಕೊಟ್ರೆ ಸಾಕಾ?: 20 ಕ್ವಿಂಟಲ್ ತೊಗರಿ ಖರೀದಿ ಮಾಡ್ತೀನಿ ಅಂತಾ ಯಡಿಯೂರಪ್ಪ ಹೇಳಿದ್ರು. ಆದರೆ ಯಡಿಯೂರಪ್ಪ ಸರ್ಕಾರದಿಂದ ಖರೀದಿ ಮಾಡಿದ್ರೆ ವರ್ಷಕ್ಕೆ 6 ಸಾವಿರ ರೂಪಾಯಿ ಅಂತಾರೆ. ತಿಂಗಳಿಗೆ 500 ರೂಪಾಯಿ ಕೊಟ್ರೆ ಸಾಕಾ? ರೈತರಿಗೆ ಮಾರಕವಾಗುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಯಾಕೆ?

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರೈತರ ಜುಟ್ಟನ್ನ ಎಂಎನ್​ಸಿಗಳಿಗೆ ನೀಡ್ತಾರೆ. ಕಾರ್ಮಿಕರಿಗೆ 10 ಗಂಟೆ ಕೆಲಸ ಮಾಡಿಸ್ತಾ ಇದಾರೆ. ಹಾಗಾದ್ರೆ ಮೇ ದಿನ ಯಾಕೆ ಮಾಡ್ತಾರೆ. ಹೆಚ್ಚು ಕೆಲಸದ ಅವಧಿ ಹಾಗೂ ಶೋಷಣೆ ವಿರೋಧಿಸಿ ಕಾರ್ಮಿಕರ ಹೋರಾಟ ನಡೆಯಿತು. ಕಾರ್ಮಿಕ ವಿರೋಧಿ ಕಾನೂನು ಯಾಕೆ ತರ್ತಾ ಇದಾರೆ. ರೈಲ್ವೆ ಪೊಲೀಸರೆ ಹೇಳಿದ್ರು 80 ಮಂದಿ ಸತ್ತಿದ್ದಾರೆ ಎಂದು ಇದಕ್ಕೆ ಯಾರು ಜವಾಬ್ದಾರಿ? ಎಂದು ಕಿಡಿಕಾರಿದರು.

ಬಡತನ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಹೇಳಿಲ್ಲ: ಮೋದಿ ಕೋರ್ಟ್ ತೀರ್ಪನ್ನ ಕಾರ್ಯಗತಗೊಳಿಸಿದ್ದಾರಷ್ಟೆ. ಅಂದು ಕಾಶ್ಮೀರಕ್ಕೆ 370 ಸ್ಥಾನಮಾನ ಅನಿವಾರ್ಯವಿತ್ತು. ಎಲ್ಲಾ ರಾಜ್ಯಗಳು, ಸಂಸ್ಥಾನಗಳು ಒಕ್ಕೂಟಕ್ಕೆ ಬರಬೇಕಿತ್ತು. ಆ ಸನ್ನಿವೇಶವೇ ಬೇರೆ ಇತ್ತು. ಮೋದಿ ಭಾವನಾತ್ಮಕ ವಿಚಾರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಆದರೆ ದೇಶದಲ್ಲಿರುವ ರೈತರ ಸಮಸ್ಯೆಗಳು, ಬಡತನ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಏನು ಎಂದು ಹೇಳಿಲ್ಲ.

ಆರ್ಥಿಕ ಪರಿಸ್ಥಿತಿ ಬಗ್ಗೆ ಏನು ಮಾಡಿಲ್ಲ: ದೇಶದ ಜಿಡಿಪಿ ಬಗ್ಗೆ ಆರ್ಥಿಕ ಪರಿಸ್ಥಿತಿ ಬಗ್ಗೆ ಏನು ಮಾಡಿಲ್ಲ. 11 ವರ್ಷದಲ್ಲಿ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ. ಕೊರೊನಾ ಇತ್ತೀಚೆಗೆ ಬಂದಿದೆ ಅಷ್ಟೇ. ಪಾಕಿಸ್ತಾನ‌, ಬಾಂಗ್ಲಾದೇಶ, ಸಿಲೋನ್ ನಮಗಿಂತ ಬಡರಾಷ್ಟ್ರಗಳು. ಆದ್ರೂ ಅವು ನಮಗಿಂತ ಜಿಡಿಪಿಯಲ್ಲಿ ಬಲಿಷ್ಠವಾಗಿವೆ. 2020-21ರಲ್ಲಿ ನಕಾರಾತ್ಮಕವಾಗುತ್ತೆ. 50 ವರ್ಷದಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಆಗುತ್ತೆ.

Published On - 2:52 pm, Sat, 30 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಶಿವಣ್ಣನ ಸಿನಿಮಾ ಡೈಲಾಗ್ ಹೇಳಿದ ರಾಮ್ ಚರಣ್: ವಿಡಿಯೋ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ