AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯೇಂದ್ರ ಯಾವತ್ತಾದ್ರೂ ಶಿರಾಗೆ ಹೋಗಿ ಏನಾದ್ರೂ ಕೆಲಸ ಮಾಡಿದ್ದಾನಾ? -ಸಿದ್ದು ಪ್ರಶ್ನೆ

ಬೆಳಗಾವಿ: ಶಿರಾಗೂ ವಿಜಯೇಂದ್ರಗೂ ಏನಪ್ಪಾ ಸಂಬಂಧ? ಯಾವತ್ತಾದ್ರೂ ವಿಜಯೇಂದ್ರ ಅಲ್ಲಿ ಹೋಗಿ ಏನಾದ್ರೂ ಕೆಲಸ ಮಾಡಿದ್ನಾ? ಶಿರಾ ಮತದಾರರು ವಿಜಯೇಂದ್ರಗೆ ಗೊತ್ತಾ? ವಿಜಯೇಂದ್ರ ಸಿಎಂ ಬಿಎಸ್‌ವೈ ಪುತ್ರ ಅನ್ನೋದು ಬಿಟ್ರೆ ಏನಪ್ಪಾ ಸಂಬಂಧ? ಎಂದು ಬಿಜೆಪಿ ಮುಖಂಡ B.Y. ವಿಜಯೇಂದ್ರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ವಿಜಯೇಂದ್ರ ದುಡ್ಡು ಖರ್ಚು ಮಾಡಲು ಹೋಗಿ ಶಿರಾದಲ್ಲಿ ಕುಳಿತಿದ್ದಾನೆ. ದುಡ್ಡು ಖರ್ಚು ಮಾಡಿ ಕೆ.ಆರ್‌.ಪೇಟೆಯಲ್ಲಿ ಗೆದ್ದು ಬಿಟ್ಟರು. ಅದೇನೋ ಸ್ಟ್ರಾಟಜಿ […]

ವಿಜಯೇಂದ್ರ ಯಾವತ್ತಾದ್ರೂ ಶಿರಾಗೆ ಹೋಗಿ ಏನಾದ್ರೂ ಕೆಲಸ ಮಾಡಿದ್ದಾನಾ? -ಸಿದ್ದು ಪ್ರಶ್ನೆ
KUSHAL V
| Edited By: |

Updated on:Oct 19, 2020 | 1:30 PM

Share

ಬೆಳಗಾವಿ: ಶಿರಾಗೂ ವಿಜಯೇಂದ್ರಗೂ ಏನಪ್ಪಾ ಸಂಬಂಧ? ಯಾವತ್ತಾದ್ರೂ ವಿಜಯೇಂದ್ರ ಅಲ್ಲಿ ಹೋಗಿ ಏನಾದ್ರೂ ಕೆಲಸ ಮಾಡಿದ್ನಾ? ಶಿರಾ ಮತದಾರರು ವಿಜಯೇಂದ್ರಗೆ ಗೊತ್ತಾ? ವಿಜಯೇಂದ್ರ ಸಿಎಂ ಬಿಎಸ್‌ವೈ ಪುತ್ರ ಅನ್ನೋದು ಬಿಟ್ರೆ ಏನಪ್ಪಾ ಸಂಬಂಧ? ಎಂದು ಬಿಜೆಪಿ ಮುಖಂಡ B.Y. ವಿಜಯೇಂದ್ರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ವಿಜಯೇಂದ್ರ ದುಡ್ಡು ಖರ್ಚು ಮಾಡಲು ಹೋಗಿ ಶಿರಾದಲ್ಲಿ ಕುಳಿತಿದ್ದಾನೆ. ದುಡ್ಡು ಖರ್ಚು ಮಾಡಿ ಕೆ.ಆರ್‌.ಪೇಟೆಯಲ್ಲಿ ಗೆದ್ದು ಬಿಟ್ಟರು. ಅದೇನೋ ಸ್ಟ್ರಾಟಜಿ ಮಾಡ್ತಾರಂತೆ. ಅದ್ಯಾವುದಪ್ಪಾ ನನಗೆ ಗೊತ್ತಿಲ್ಲದೆ ಇರೋ ಸ್ಟ್ರಾಟಜಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಮಾಡಿದ ಸ್ಟ್ರಾಟಜಿ ಶಿರಾದಲ್ಲೂ ಮಾಡ್ತೀವಿ ಅಂತಾನೆ. ಬೈಎಲೆಕ್ಷನ್​ನಲ್ಲಿ ನಾವೇ ಗೆಲ್ತೀವಿ. ಶಿರಾ ಮತ್ತು ಆರ್.ಆರ್.ನಗರದಲ್ಲಿ ನಾವು ಗೆಲ್ತೀವಿ. ಆದ್ರೆ, ರೂಲಿಂಗ್ ಪಾರ್ಟಿಗೆ ಅಡ್ವಾಂಟೇಜ್ ಜಾಸ್ತಿ ಎಂದು ಹೇಳಿದರು.

ಆರ್.ಆರ್.ನಗರದಲ್ಲಿ ಪಾಪ ಹೆಣ್ಣುಮಗಳ ಮೇಲೆ ಕೇಸ್ ಹಾಕಿಬಿಟ್ರೇ ಅವಳೇನು ಹೆದರಲ್ಲ. ನಾನು ಹೋಗಿದ್ದೇ 12 ಗಂಟೆಗೆ. 11.15ಕ್ಕೆ ಕೇಸ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಸುಳ್ಳು ಕಂಪ್ಲೇಂಟ್ ರಿಜಿಸ್ಟರ್ ಮಾಡಿ ಅಭ್ಯರ್ಥಿಗಳನ್ನು ಹೆದರಿಸೋಕೆ ಮುಂದಾಗಿದ್ದಾರೆ. ನಮ್ಮ ಅಧ್ಯಕ್ಷರು ಹೇಳಿದ ಹಾಗೆ, ನಾವು ಬಗ್ಗೋದೂ ಇಲ್ಲ ಜಗ್ಗೋದು ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.

Published On - 1:30 pm, Mon, 19 October 20

Follow Us
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಶ್ರೀಶೈಲ ಜಗದ್ಗುರು ಕರೆ
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಬಾಗಲಕೋಟೆ ಬೈ ಎಲೆಕ್ಷನ್: ಒಗ್ಗಟ್ಟು ಪ್ರದರ್ಶಿಸಿದ ಮುಸ್ಲಿಮರ ನಡೆ ಏನು?
ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?
ಮೀಸಲು ವ್ಯವಸ್ಥೆ ಇಲ್ಲದ ಆಸ್ಪತ್ರೆಯಲ್ಲೇಕೆ ನಿಮ್ಮ ತಾಯಿಗೆ ಚಿಕಿತ್ಸೆ?
ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು
ಗುಡ್​ ನ್ಯೂಸ್: ಎಲ್‌ಪಿಜಿ ಹೊತ್ತು ಕತಾರ್​​ನಿಂದ ಮಂಗಳೂರಿಗೆ ಬಂದ ಹಡಗು
ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ
ಬಸ್ ಮೇಲೆ ಅಂಡರ್ ವಲ್ಡ್ ದಾವೂದ್ ದಿ ರಿಯಲ್ ಡಾನ್ ಎಂದು ಬರಹ